ವೈದ್ಯರ ಜಗಳದಲ್ಲಿ ಕೂಸು ಸತ್ತೋಯ್ತು! ರಾಜಸ್ಥಾನದಲ್ಲೊಂದು ಹೇಯಕೃತ್ಯ!
Recommended Video

ಜೋದ್ಪುರ, ಆಗಸ್ಟ್ 30: ಒಂಬತ್ತು ತಿಂಗಳು ಗರ್ಭದಲ್ಲಿ ಕಾಪಿಟ್ಟುಕೊಂಡಿದ್ದ ಮುದ್ದು ಕಂದನನ್ನು ನೋಡುವ ತಾಯಿಯ ತವಕ, ಮನೆಗೆ ನಲ್ಮೆಯ ಪುಟಾಣಿಯೊಬ್ಬನ್ನು ಬರಮಾಡಿಕೊಳ್ಳುವ ಕುಟುಂಬಸ್ಥರ ಉತ್ಸಾಹ ಎಲ್ಲ ಆಸೆಗಳೂ ಸೂತಕದ ಸುದ್ದಿಯೊಂದಿಗೆ ಸತ್ತುಹೋಗಿವೆ!
ಮಗು ಹುಟ್ಟಿದ ಸಿಹಿ ಸುದ್ದಿ ನೀಡಬೇಕಿದ್ದ ವೈದ್ಯರೇ ವೈಯಕ್ತಿಕ ಜಗಳದಿಂದಾಗಿ ಮಗುವನ್ನೇ ಸಾಯಿಸಿದ ಹೇಯ ಘಟನೆ ರಾಜಸ್ಥಾನದ ಜೋದ್ಪುರದ ಆಸ್ಪತ್ರೆಯೊಂದರಲ್ಲಿ ನಡೆದಿದೆ! ಜೋದ್ಪುರದಲ್ಲೇ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿದ್ದ ಉಮೈದ್ ಆಸ್ಪತ್ರೆಯ ಅಸಲಿ ಬಣ್ಣವನ್ನು ವಿಡಿಯೋವೊಂದು ಬಯಲುಮಾಡಿದ್ದು, ಅಹಂಕಾರದೆದುರು ಮಾನವೀಯತೆ ಸಾವಿಗೀಡಾಗುವ ವಿಷಾದನೀಯ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

ಹೆರಿಗೆಗೆಂದು ಬಂದಿದ್ದ ಮಹಿಳೆಯೊಬ್ಬರನ್ನು ಉಮೈದ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಗರ್ಭದಲ್ಲಿರುವ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ತುರ್ತು ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿತ್ತು. ಸಿಸೆರಿಯನ್ ಮಾಡುತ್ತಿದ್ದ ವೈದ್ಯರುಗಳು ಇದ್ದಕ್ಕಿಂದ್ದಂತೇ ವೈಯಕ್ತಿಕ ನಿಂದನೆ ಆರಂಭಿಸಿದ ಪರಿಣಾಮ ತುರ್ತು ಶಸ್ತ್ರ ಚಿಕಿತ್ಸೆಯ ಬಗೆಗಿನ ಗಮನವೇ ಇಲ್ಲದಂತಾಗಿದೆ!
Doctors Fight Inside Operation Theatre in Jodhpur, Newborn Dies
— Praney Sharma (@praneysharma) August 30, 2017
Outrageous and shocking..
They shud be put behind bars#Jodhpur pic.twitter.com/z2B6An3nRj
ಇಬ್ಬರು ವೈದ್ಯರ ಮಾತಿನ ಚಕಮಕಿಯ ನಡುವಲ್ಲಿ ನರ್ಸ್ ಗಳೆಲ್ಲ ಮೌನಸಾಕ್ಷಿಯಾಗಿ ನಿಂತಿರುವ ವಿಡಿಯೋವನ್ನು ಅನಾಮಿಕ ವ್ಯಕ್ತಿಯೊಬ್ಬರು ಚಿತ್ರೀಕರಿಸಿ ಮಾಧ್ಯಮಕ್ಕೆ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳೆಲ್ಲ ಹರಿದಾಡುತ್ತ, ವೈದ್ಯಲೋಕದ ಕುರಿತು ಜನಸಾಮಾನ್ಯನಲ್ಲಿ ಅಸಹ್ಯಭಾವವೊಂದನ್ನು ಮೂಡಿಸುತ್ತಿದೆ.
ಸಿಸೆರಿಯನ್ ಮಾಡುವ ಬದಲು ಜಗಳದಲ್ಲಿ ಮೈಮರೆತು ಒಬ್ಬ ಅಮಾಯಕ ಮಗುವನ್ನು ಕೊಂದ ಡಾ ನೈನ್ವಾಲ್ ಮತ್ತು ಡಾ ತಾಕ್ ಅವರನ್ನು ಕೆಲಸದಿಂದ ಉಚ್ಚಾಟಿಸಲಾಗಿದೆ.
ಇಂಥವರನ್ನು ಮೊದಲು ಜೈಲಿಗಟ್ಟಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ರುಚ್ಚಿಗೆದ್ದಿದ್ದಾರೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications