ವೈದ್ಯರ ಜಗಳದಲ್ಲಿ ಕೂಸು ಸತ್ತೋಯ್ತು! ರಾಜಸ್ಥಾನದಲ್ಲೊಂದು ಹೇಯಕೃತ್ಯ!
Recommended Video

ಜೋದ್ಪುರ, ಆಗಸ್ಟ್ 30: ಒಂಬತ್ತು ತಿಂಗಳು ಗರ್ಭದಲ್ಲಿ ಕಾಪಿಟ್ಟುಕೊಂಡಿದ್ದ ಮುದ್ದು ಕಂದನನ್ನು ನೋಡುವ ತಾಯಿಯ ತವಕ, ಮನೆಗೆ ನಲ್ಮೆಯ ಪುಟಾಣಿಯೊಬ್ಬನ್ನು ಬರಮಾಡಿಕೊಳ್ಳುವ ಕುಟುಂಬಸ್ಥರ ಉತ್ಸಾಹ ಎಲ್ಲ ಆಸೆಗಳೂ ಸೂತಕದ ಸುದ್ದಿಯೊಂದಿಗೆ ಸತ್ತುಹೋಗಿವೆ!
ಮಗು ಹುಟ್ಟಿದ ಸಿಹಿ ಸುದ್ದಿ ನೀಡಬೇಕಿದ್ದ ವೈದ್ಯರೇ ವೈಯಕ್ತಿಕ ಜಗಳದಿಂದಾಗಿ ಮಗುವನ್ನೇ ಸಾಯಿಸಿದ ಹೇಯ ಘಟನೆ ರಾಜಸ್ಥಾನದ ಜೋದ್ಪುರದ ಆಸ್ಪತ್ರೆಯೊಂದರಲ್ಲಿ ನಡೆದಿದೆ! ಜೋದ್ಪುರದಲ್ಲೇ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿದ್ದ ಉಮೈದ್ ಆಸ್ಪತ್ರೆಯ ಅಸಲಿ ಬಣ್ಣವನ್ನು ವಿಡಿಯೋವೊಂದು ಬಯಲುಮಾಡಿದ್ದು, ಅಹಂಕಾರದೆದುರು ಮಾನವೀಯತೆ ಸಾವಿಗೀಡಾಗುವ ವಿಷಾದನೀಯ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

ಹೆರಿಗೆಗೆಂದು ಬಂದಿದ್ದ ಮಹಿಳೆಯೊಬ್ಬರನ್ನು ಉಮೈದ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಗರ್ಭದಲ್ಲಿರುವ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ತುರ್ತು ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿತ್ತು. ಸಿಸೆರಿಯನ್ ಮಾಡುತ್ತಿದ್ದ ವೈದ್ಯರುಗಳು ಇದ್ದಕ್ಕಿಂದ್ದಂತೇ ವೈಯಕ್ತಿಕ ನಿಂದನೆ ಆರಂಭಿಸಿದ ಪರಿಣಾಮ ತುರ್ತು ಶಸ್ತ್ರ ಚಿಕಿತ್ಸೆಯ ಬಗೆಗಿನ ಗಮನವೇ ಇಲ್ಲದಂತಾಗಿದೆ!
Doctors Fight Inside Operation Theatre in Jodhpur, Newborn Dies
— Praney Sharma (@praneysharma) August 30, 2017
Outrageous and shocking..
They shud be put behind bars#Jodhpur pic.twitter.com/z2B6An3nRj
ಇಬ್ಬರು ವೈದ್ಯರ ಮಾತಿನ ಚಕಮಕಿಯ ನಡುವಲ್ಲಿ ನರ್ಸ್ ಗಳೆಲ್ಲ ಮೌನಸಾಕ್ಷಿಯಾಗಿ ನಿಂತಿರುವ ವಿಡಿಯೋವನ್ನು ಅನಾಮಿಕ ವ್ಯಕ್ತಿಯೊಬ್ಬರು ಚಿತ್ರೀಕರಿಸಿ ಮಾಧ್ಯಮಕ್ಕೆ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳೆಲ್ಲ ಹರಿದಾಡುತ್ತ, ವೈದ್ಯಲೋಕದ ಕುರಿತು ಜನಸಾಮಾನ್ಯನಲ್ಲಿ ಅಸಹ್ಯಭಾವವೊಂದನ್ನು ಮೂಡಿಸುತ್ತಿದೆ.
ಸಿಸೆರಿಯನ್ ಮಾಡುವ ಬದಲು ಜಗಳದಲ್ಲಿ ಮೈಮರೆತು ಒಬ್ಬ ಅಮಾಯಕ ಮಗುವನ್ನು ಕೊಂದ ಡಾ ನೈನ್ವಾಲ್ ಮತ್ತು ಡಾ ತಾಕ್ ಅವರನ್ನು ಕೆಲಸದಿಂದ ಉಚ್ಚಾಟಿಸಲಾಗಿದೆ.
ಇಂಥವರನ್ನು ಮೊದಲು ಜೈಲಿಗಟ್ಟಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ರುಚ್ಚಿಗೆದ್ದಿದ್ದಾರೆ.
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications