Breaking: ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ವೀರೇಂದ್ರ ಹೆಗ್ಗಡೆ
ನವದೆಹಲಿ, ಜುಲೈ 21: ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಗುರುವಾರ ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಖಾವಂದರಂತಹ ಕ್ರಿಯಾಶೀಲ, ಸಮಾಜಮುಖಿ, ಅನುಭವಿ ಹಾಗೂ ಸಹೃದಯೀ ವ್ಯಕ್ತಿ ರಾಜ್ಯಸಭೆಯ ಸದಸ್ಯರಾಗಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಸಂತಸದ ಹಾಗೂ ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ರಾಜ್ಯಸಭೆಗೆ ಸಾಮಾನ್ಯವಾಗಿ ಅವರು ಇರುವಂತೆಯೇ ಬಿಳಿ ಬಣ್ಣದ ಪಂಚೆ, ಶರ್ಟ್, ಶಲ್ಯ ಧರಿಸಿ ಬಂದಿದ್ದು ವಿಶೇಷವಾಗಿತ್ತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ನಮಸ್ಕರಿಸಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ, ಸಹಿ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಿದರು.
ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಾಮನಿರ್ದೇಶನಗೊಂಡಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಸಂತಸ ವ್ಯಕ್ತಪಡಿಸಿದ್ದರು. ಧಾರ್ಮಿಕ, ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಗೆ ಅಭೂತಪೂರ್ವ ಕೊಡುಗೆ ನೀಡಿದ ಡಾ.ವೀರೇಂದ್ರ ಹೆಗ್ಗಡೆ ಅವರ ಜ್ಞಾನ , ಅನುಭವ ರಾಜ್ಯಗಳಿಗೆ ವರದಾನವಾಗಲಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದರು.
ಕರ್ನಾಟಕದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರು ಇಂದು ಕನ್ನಡದಲ್ಲಿ ತಮ್ಮ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
— Dr Sudhakar K (@mla_sudhakar) July 21, 2022
ಖಾವಂದರಂತಹ ಕ್ರಿಯಾಶೀಲ, ಸಮಾಜಮುಖಿ, ಅನುಭವಿ ಹಾಗೂ ಸಹೃದಯೀ ವ್ಯಕ್ತಿ ರಾಜ್ಯಸಭೆಯ ಸದಸ್ಯರಾಗಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಸಂತಸದ ಮತ್ತು ಹೆಮ್ಮೆಯ ವಿಷಯ. pic.twitter.com/hmz3jp8FmZ
ಕನ್ನಡದಲ್ಲಿ
ಪ್ರಮಾಣವಚನ
ಶ್ರೀ
ಧರ್ಮಸ್ಥಳದ
ಧರ್ಮಾಧಿಕಾರಿಗಳು
ಕನ್ನಡದಲ್ಲಿ
ದೇವರ
ಹೆಸರಿನಲ್ಲಿ
ಪ್ರಮಾಣ
ವಚನ
ಸ್ವೀಕರಿಸಿದರು.
ವೀರೇಂದ್ರ
ಹೆಗ್ಗಡೆ
ಎಂಬ
ಹೆಸರಿನ
ನಾನು,
ರಾಜ್ಯಸಭೆಯ
ಸದಸ್ಯನಾಗಿ
ನಾಮನಿರ್ದೇಶನ
ಹೊಂದಿದ್ದು,
ಕಾನೂನಿನ
ಮೂಲಕ
ಸ್ಥಾಪಿತವಾದ
ಭಾರತದ
ಸಂವಿಧಾನ
ವಿಷಯದಲ್ಲಿ
ನಿಜವಾದ
ಶ್ರದ್ಧೆ
ಮತ್ತು
ನಿಷ್ಠೆಯನ್ನು
ಹೊಂದಿರುತ್ತೇನೆ
ಎಂದು
ಭಾರತದ
ಸಾರ್ವಭೌಮತೆ
ಹಾಗೂ
ಅಖಂಡತೆ
ಎತ್ತಿ
ಹಿಡಿಯುತ್ತೇನೆ.
ನಾನು
ಕೈಗೊಳ್ಳಲಿರುವ
ಕಾರ್ಯಗಳನ್ನು
ಶ್ರದ್ಧಾಪೂರ್ವಕವಾಗಿ
ನಿರ್ವಹಿಸುವದಾಗಿ
ಪ್ರಮಾಣ
ಮಾಡುತ್ತೇನೆ
ಎಂದು
ಹೇಳಿ
ಹಗ್ಗಡೆ
ಅವರು
ಪ್ರಮಾಣ
ವಚನ
ಮಾಡಿದರು.
ಇದಕ್ಕೂ ಮುನ್ನ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಲಾದ ಜೋಶಿ ಅವರು ಹೆಗ್ಗಡೆ ಅವರನ್ನು ಗೌರವಯುತವಾಗಿ ಬರಮಾಡಿಕೊಂಡರು. ಸೌಜನ್ಯದಿಂದ ಇಬ್ಬರು ಮಾತುಕತೆ ನಡೆಸಿದರು. ನಂತರ ಸನ್ಮಾನ ಸ್ವೀಕರಿಸಿ ಪ್ರಮಾಣ ವಚನ ಸ್ವೀಕಾರಕ್ಕೆ ಹೆಗ್ಗಡೆ ತೆರಳಿದರು ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ವೀರೇಂದ್ರ ಹೆಗ್ಗೆಡೆ ಜತೆಗೆ ದೇಶದ ಹೆಮ್ಮೆಯ ಕ್ರೀಡಾಪಟು ಪಿ. ಟಿ. ಉಷಾ, ಚಿತ್ರಕಥೆಗಾರ ವಿ. ವಿಜಯೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ಇಳಯರಾಜ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದರು.
Recommended Video