Gyanvapi mosque: ಜ್ಞಾನವಾಪಿ ಮಸೀದಿಯಲ್ಲಿ ಕಾರ್ಬನ್ ಡೇಟಿಂಗ್ ಕುರಿತು ಜುಲೈ 21ಕ್ಕೆ ವಾರಣಾಸಿ ನ್ಯಾಯಾಲಯದ ಆದೇಶ
ಬೆಂಗಳೂರು, ಜುಲೈ. 14: ಉತ್ತರ ಪ್ರದೇಶದ ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿಯಲ್ಲಿನ ಸಮೀಕ್ಷೆಯ ಭಾಗವಾಗಿ ಕಾರ್ಬನ್ ಡೇಟಿಂಗ್ ಕುರಿತು ತನ್ನ ಆದೇಶವನ್ನು ಕಾಯ್ದಿರಿಸಿದೆ. ಜುಲೈ 21 ರಂದು ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಲಿದೆ.
ಈ ವರ್ಷದ ಮೇ ತಿಂಗಳಲ್ಲಿ, ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಆವರಣವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಸಮೀಕ್ಷೆಗೆ ನ್ಯಾಯಾಲಯ ಸಮ್ಮತಿಸಿತ್ತು. ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿದೆ.

ವಿಷ್ಣು ಜೈನ್ ಅವರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಹಿಂದೂ ಸಮುದಾಯದ ಕಡೆಯಿಂದ ಮಾಡಿದ ಸಲ್ಲಿಕೆಗಳಿಗೆ ಉತ್ತರವನ್ನು ಸಲ್ಲಿಸುವಂತೆ ಜ್ಞಾನವಾಪಿ ಮಸೀದಿ ಸಮಿತಿಯನ್ನು ಕೇಳಿದೆ. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ಇದೀಗ ಕಾರ್ಬನ್ ಡೇಟಿಂಗ್ ಕುರಿತ ಆದೇಶವನ್ನು ಕಾಯ್ದಿರಿಸಿದೆ. ಜುಲೈ 21 ರಂದು ಈ ಬಗ್ಗೆ ತೀರ್ಪು ನೀಡಲಿದೆ.
ವಾರಣಾಸಿಯ ಜ್ಞಾನವಾಪಿ ಸಂಕೀರ್ಣದ ಆವರಣದಲ್ಲಿರುವ ಶಿವಲಿಂಗದ ವೈಜ್ಞಾನಿಕ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್ಐ) ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ಕೆಲವು ದಿನಗಳ ಹಿಂದೆ ಹಿಂದೂ ಅರ್ಜಿದಾರರು ಸುಪ್ರೀಂ ಕೋರ್ಟ್ಗೆ ಒತ್ತಾಯಿಸಿದ್ದರು.
ಅವರು ಹುಟ್ಟಿದ ವರ್ಷದ ಆಧಾರದ ಮೇಲೆ ಯಾರೊಬ್ಬರ ವಯಸ್ಸನ್ನು ಕಂಡುಹಿಡಿಯುವುದು ಸುಲಭವಾದರೂ, ವಸ್ತು ಅಥವಾ ಸಸ್ಯಗಳು, ಸತ್ತ ಪ್ರಾಣಿಗಳು ಅಥವಾ ಪಳೆಯುಳಿಕೆ ಅವಶೇಷಗಳಿಗೆ ಅದೇ ರೀತಿ ಹೇಳುವುದು ಹೆಚ್ಚು ಸಂಕೀರ್ಣವಾಗುತ್ತದೆ. ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ವಸ್ತುಗಳ ಇತಿಹಾಸ ಅಥವಾ ವಿವಿಧ ಜಾತಿಗಳು ಹಾದುಹೋದ ವಿಕಾಸದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಕಾರ್ಬನ್ ಡೇಟಿಂಗ್ ಪ್ರಮುಖ ಪಾತ್ರ ವಹಿಸುತ್ತದೆ.
ಸಸ್ಯಗಳು, ಪ್ರಾಣಿಗಳು ಮತ್ತು ಮಾನವರು ಸಾಯುತ್ತಿದ್ದಂತೆ, ಅವು ಪರಿಸರದಲ್ಲಿ ಇಂಗಾಲ -14 ರ ಸಮತೋಲನವನ್ನು ನಿಲ್ಲಿಸುತ್ತವೆ. ಏಕೆಂದರೆ ಇಂಗಾಲದ ಹೀರಿಕೊಳ್ಳುವಿಕೆ ಇರುವುದಿಲ್ಲ. ಇನ್ನು, ಸಂಗ್ರಹವಾದ ಇಂಗಾಲ 14 ಕೊಳೆಯಲು ಪ್ರಾರಂಭಿಸುತ್ತದೆ. ವಿಜ್ಞಾನಿಗಳು, ವಯಸ್ಸನ್ನು ತಿಳಿಯಲು ನಂತರ ಕಾರ್ಬನ್ ಡೇಟಿಂಗ್ನ ಉಳಿದ ಪ್ರಮಾಣವನ್ನು ವಿಶ್ಲೇಷಿಸುತ್ತಾರೆ.
ಇಂಗಾಲದ ಹೊರತಾಗಿ, ಪೊಟ್ಯಾಸಿಯಮ್ 40 ಕೂಡ ವಿಕಿರಣಶೀಲ ಡೇಟಿಂಗ್ಗಾಗಿ ವಿಶ್ಲೇಷಿಸಬಹುದಾದ ಒಂದು ಅಂಶವಾಗಿದೆ. ಪೊಟ್ಯಾಸಿಯಮ್ 40ಯು 1.3 ಶತಕೋಟಿ ವರ್ಷಗಳ ಅರ್ಧ ಜೀವಿತಾವಧಿಯನ್ನು ಹೊಂದಿದೆ. ಅದೇ ರೀತಿಯಲ್ಲಿ, 704 ಮಿಲಿಯನ್ ವರ್ಷಗಳ ಅರ್ಧ ಜೀವನ ಹೊಂದಿರುವ ಯುರೇನಿಯಂ 235 ಮತ್ತು 14 ಶತಕೋಟಿ ವರ್ಷಗಳ ಅರ್ಧ ಜೀವಿತಾವಧಿಯನ್ನು ಹೊಂದಿರುವ ಥೋರಿಯಂ 232 ಅನ್ನು ಸಹ ಕಲ್ಲುಗಳಂತಹ ಭೂವೈಜ್ಞಾನಿಕ ವಸ್ತುಗಳ ವಯಸ್ಸನ್ನು ಅಂದಾಜು ಮಾಡಲು ಬಳಸಲಾಗುತ್ತದೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications