Vande Sadharan Express Train: ದೇಶಾದ್ಯಂತ 'ಹೊಸ ರೈಲು' ಕಾರ್ಯಾಚರಣೆಗೆ ದಿನಗಣನೆ, ವಿಶೇಷತೆ, ಮಾರ್ಗದ ಮಾಹಿತಿ
ನವದೆಹಲಿ, ನವೆಂಬರ್ 14: ದೇಶದ ರೈಲ್ವೆ ಪ್ರಯಾಣಿಕರಿಗೆ ಆರಾಮದಾಯಕ ಸೇವೆ ನೀಡಲು ಕಾರ್ಯನಿರತವಾಗಿರುವ ಭಾರತೀಯ ರೈಲ್ವೆ ಇಲಾಖೆಯು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ನಂತರ ದೇಶಕ್ಕೆ 'ಒಂದೇ ಸಾಧಾರಣ್ ಎಕ್ಸ್ಪ್ರೆಸ್ ರೈಲು' (Vande Sadharan Express Rail) ಅನ್ನು ಪರಿಚಯಿಸಲಿದೆ. ಈಗಾಗಲೇ ಈ ರೈಲು ಪ್ರಯೋಗಿಕ ಸಂಚಾರ ಪೂರ್ಣಗೊಳಿಸಿದೆ.
ಹೌದು, ಭಾರತ ಸರ್ಕಾರದ ಉದ್ದೇಶಿತ ಈ 'ಒಂದೇ ಸಾಧಾರಣ್' ಎಕ್ಸ್ಪ್ರೆಸ್ ರೈಲು ಕಳೆದ ಅಕ್ಟೋಬರ್ 29ರಂದು ಮುಂಬೈಗೆ ಆಗಮಿಸಿದೆ. ಇಲ್ಲಿ ರೈಲ್ವೆ ಅಧಿಕಾರಿಗಳು ಈ ರೈಲಿನ ಪ್ರಾಯೋಗಿಕ ಕಾರ್ಯಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು.

ಮುಂಬೈನ ವಾಡಿ ಬಂದರ್ ಯಾರ್ಡ್ಗೆ ಆಗಮಸಿದ ವಂದೇ ಸಾಧಾರಣ್ ರೈಲು ಅಲ್ಲಿಂದ ಅಹಮದಾಬಾದ್ಗೆ ಕಳೆದ ನೆವೆಂಬರ್ 8ರಂದು ಯಶಸ್ವಿ ಪ್ರಾಯೋಗಿಕ ಸಂಚಾರ ನಡೆಸಿತು. ಮುಂದಿನ ಕೆಲವೇ ದಿಗನಳಲ್ಲಿ ಈ ರೈಲು ಸೇವೆ ದೇಶದ ಜನರು ಪಡೆದುಕೊಳ್ಳಲಿದ್ದಾರೆ.
ಗಂಟೆಗೆ 130 ಕಿಮೀ ವೇಗದಲ್ಲಿ ರೈಲು ಸಂಚಾರ
ಮೂಲಗಳ ಪ್ರಕಾರ ಇದೇ ವರ್ಷ ವಂದೇ ಸಾಧಾರಣ್ ರೈಲು ಪ್ರಯಾಣಿಕರ ಸೇವೆ ಮುಕ್ತವಾಗುವ ಸಾಧ್ಯತೆಗಳು ಇವೆ ಎಂದು ತಿಳಿದು ಬಂದಿದೆ. ಈ ರೈಲು ಪ್ರತಿ ಗಂಟೆಗೆ 130 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ. 500 ಕೀಲೋ ಮೀಟರ್ ಗಿಂತಲೂ ದೂರದ ಪ್ರದೇಶಗಳಿಗೆ ಪ್ರಯಾಣ ಸೇವೆ ಒದಗಿಸಲು ಈ ರೈಲುಗಳು ಬಳಕೆ ಆಗಲಿದೆ.
The first Push Pull #VandeSadharan Express Train on its way to Mumbai spotted near Solapur.
— मुंबई Matters™ (@mumbaimatterz) October 28, 2023
Nothing much Fancy as it's name suggests.
Yes Ordinary 22 coach LHB Non AC 3 tier Sleeper Train without any automatic doors but in a new Livery..hauled by two WAP5 locos on either end… pic.twitter.com/7QsFug0OOQ
ಕಡಿಮೆ ಬೆಲೆಯಲ್ಲಿ ನಾಗರಿಕರಿಗೆ ಉತ್ತಮ ಸೇವೆ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದರಲ್ಲಿ ಎಸಿ ಮತ್ತು ಸ್ವಯಂ ಚಾಲಿತ ಬಾಗಿಲುಗಳು ಇಲ್ಲ ಎನ್ನಲಾಗಿದೆ. ಉಳಿದಂತೆ ಎಲ್ಲ ವ್ಯವಸ್ಥೆಗಳು ಆಧುನಿಕವಾಗಿದೆ. ರೈಲಿನಲ್ಲಿ ಸಿಸಿಟಿವಿ ಇರಲಿದ್ದು, ಜನರ ಸುರಕ್ಷತೆಗೆ ಒತ್ತು ನೀಡಲಾಗಿದೆ. ಈ ರೈಲಿನಲ್ಲಿ ಸಾರ್ವಜನಿಕರು ಆರಾಮದಾಯಕ ಪ್ರಯಾಣವನ್ನು ಆನಂದಿಸಬಹುದಾಗಿದೆ.
ರೈಲುಗಳ ವಿಶೇಷತೆಗಳು
ಒಟ್ಟು 22 ಬೋಗಿಗಳನ್ನು ಒಳಗೊಂಡಿರುವ ಈ ವಿಶೇಷ ರೈಲಿನಲ್ಲಿ 14 ಸ್ಲಿಫರ್ ಬೋಗಿಗಳು, ಎಂಟು ಸಾಮಾನ್ಯ ಬೋಗಿಗಳು, ಎರಡು ಲೋಕೊಮೋಟಿವ್ ಎಂಜಿನ್ ಇದ್ದು, 1500ಕ್ಕೂ ಹೆಚ್ಚು ಜನ ಒಂದೇ ಭಾರಿಗೆ ಈ ರೈಲಿನ ಮೂಲಕ ತಮ್ಮ ಗಮ್ಯ ಸ್ಥಳಗಳನ್ನು ತಲುಪಬಹುದಾಗಿದೆ.

ಆದಷ್ಟು ಶೀಘ್ರವೇ ಈ ರೈಲು ದೇಶದ ಮುಂಬೈ-ಅಹ್ಮದಾಬಾದ್ ಹೊರತಾಗಿಯು, ಹೌರಾ-ದೆಹಲಿ, ದೆಹಲಿ-ಮುಂಬೈ, ಪಾಟ್ನಾ-ನವದೆಹಲಿ, ಹೈದರಾಬಾದ್-ನವದೆಹಲಿ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆ ಇದೆ. ಸದ್ಯ ಭಾರತೀಯ ರೈಲ್ವೆ ಇಲಾಖೆಯು ಈ ವಂದೇ ಸಾಧಾರಣ್ ರೈಲನ್ನು ದೇಶದ 30 ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲು ಪ್ಲಾನ್ ಮಾಡಿಕೊಂಡಿದೆ.
ಕರ್ನಾಟಕದಲ್ಲಿ ಓಡಿಸಲು ಬೇಡಿಕೆ
ಅಂದಾಜು 400 ರೈಲುಗಳು ಚೆನ್ನೈ ರೈಲ್ವೆ ಕೋಚ್ ಇಂಟಿಗ್ರೆಟೆಡ್ ಕಾರ್ಖಾನೆಯಲ್ಲಿ ತಯಾರಾಗುತ್ತಿವೆ. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ದೇಶ ಬೇರೆ ಬೇರೆ ಮಾರ್ಗಗಳಂತೆ ಕರ್ನಾಟಕದ ಬೆಂಗಳೂರು-ಬೆಳಗಾವಿ, ಬೆಂಗಳೂರು-ಕಲಬುರಗಿ, ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಂಚರಿಬೇಕೆಂಬ ಬೇಡಿಕೆ ಇದೆ. ಇದೆಲ್ಲದ್ದಕ್ಕೂ ಆದಷ್ಟು ಶೀಘ್ರವೇ ಉತ್ತರ ಸಿಗಲಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications