Get Updates
Get notified of breaking news, exclusive insights, and must-see stories!

Vande Bharat: ಅಂತರಾಷ್ಟ್ರೀಯ ಹಳಿಗಳಲ್ಲಿ ಓಡಲಿವೆ ಭಾರತದ ವಂದೇ ಭಾರತ್ ರೈಲುಗಳು!

ನವದೆಹಲಿ, ಫೆಬ್ರವರಿ.12: ದೇಶದಲ್ಲಿ ಈಗ ವಂದೇ ಭಾರತ್ ರೈಲುಗಳು ಎಲ್ಲಾ ಕಡೆ ಸಂಪರ್ಕ ಕಲ್ಪಿಸುತ್ತಿವೆ. ವೇಗದ ಪ್ರಯಾಣಕ್ಕಾಗಿ ಹೆಸರುವಾಸಿಯಾಗುತ್ತಿವೆ.ಮತ್ತಷ್ಟು ಹೊಸ ರೈಲುಗಳು ಸೇರ್ಪಡೆಯಾಗುತ್ತಲೇ ಇವೆ. ಇದರ ನಡುವೆಯೇ ಮತ್ತೊಂದು ಗರಿ ವಂದೇ ಭಾರತ್ ಹೆಸರಿಗೆ ಸೇರಿಕೊಳ್ಳುತ್ತಿದೆ.

ಹೌದು... ಭಾರತದಲ್ಲಿ ಖ್ಯಾತಿ ಗಳಿಸುತ್ತಿರುವ ನಮ್ ವಂದೇ ಭಾರತ್ ರೈಲುಗಳು ಶೀಘ್ರದಲ್ಲೇ ಅಂತರಾಷ್ಟ್ರೀಯ ಹಳಿಗಳ ಮೇಲೂ ಓಡಲಿವೆ. ಈ ರೈಲುಗಳನ್ನು ರಫ್ತು ಮಾಡುವ ಯೋಜನೆಯಲ್ಲಿ ಭಾರತ ಕಾರ್ಯನಿರ್ವಹಿಸುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

Vande Bharat trains could be on international tracks, railways plan to export

ಭಾರತೀಯ ರೈಲ್ವೇ ತನ್ನ ಪ್ರಮುಖ ಇಂಜಿನ್‌ನ ರಫ್ತಿಗಾಗಿ ಚಿಲಿ ಸೇರಿದಂತೆ ಹಲವಾರು ರಾಷ್ಟ್ರಗಳಿಂದ ಕರೆ ಸ್ವೀಕರಿಸುತ್ತಿದೆ ಎಂದು ವರದಿಯಾಗಿದೆ. ಸ್ಥಳೀಯ ವಿನ್ಯಾಸಗಳು ಮತ್ತು ಸಾಮರ್ಥ್ಯದೊಂದಿಗೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಘಟಕಗಳ ಹೊರತಾಗಿ ರೈಲಿಗಾಗಿ ತನ್ನದೇ ಆದ ಕಾರ್ಯಾಗಾರಗಳಲ್ಲಿ ಘಟಕಗಳ ಶ್ರೇಣಿಯನ್ನು ತಯಾರಿಸಲು ರೈಲು ಸಚಿವಾಲಯವು ಸಾಕಷ್ಟು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತಿದೆ.

"ನಮ್ಮ ದೇಶವನ್ನು ನಮ್ಮದೇ ಆದ ವಂದೇ ಭಾರತ್ ಆಗಿ ಅಭಿವೃದ್ಧಿಪಡಿಸುವುದು ಸವಾಲಾಗಿತ್ತು. ಆದರೆ, ನಮ್ಮ ಎಂಜಿನಿಯರ್‌ಗಳು ಈ ಸವಾಲನ್ನು ಸ್ವೀಕರಿಸಿದ್ದಾರೆ. ಇದೇ ಕಾರಣದಿಂದ ಮುಂಬರುವ ವರ್ಷಗಳಲ್ಲಿ ನಾವು ಈ ರೈಲನ್ನು ರಫ್ತು ಮಾಡಲು ಪ್ರಾರಂಭಿಸುತ್ತೇವೆ ಎಂದು ನಾನು ತುಂಬಾ ವಿಶ್ವಾಸದಿಂದ ಹೇಳಬಲ್ಲೆ" ಎಂದು ಶೃಂಗಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ವಂದೇ ಭಾರತ್ ರೈಲುಗಳ ಸಂಖ್ಯೆ 82 ಕ್ಕೆ ಏರಿದೆ. ನವ ದೆಹಲಿ - ಮುಂಬೈ ಮತ್ತು ನವದೆಹಲಿ - ಹೌರಾ ಮಾರ್ಗಗಳಲ್ಲಿ ರೈಲುಗಳ ವೇಗವನ್ನು ಗಂಟೆಗೆ 160 ಕಿಲೋಮೀಟರ್‌ಗಳಿಗೆ ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ. 31 ಜನವರಿ 2024 ರ ವರದಿಯಂತೆ, 82 ವಂದೇ ಭಾರತ್ ರೈಲು ಸೇವೆಗಳು ರಾಷ್ಟ್ರವ್ಯಾಪಿ ಕಾರ್ಯನಿರ್ವಹಿಸುತ್ತಿವೆ. ಈ ರೈಲುಗಳು ರಾಜ್ಯಗಳನ್ನು ಬ್ರಾಡ್ ಗೇಜ್ (ಬಿಜಿ) ಎಲೆಕ್ಟ್ರಿಫೈಡ್ ನೆಟ್‌ವರ್ಕ್‌ಗಳೊಂದಿಗೆ ಸಂಪರ್ಕಿಸುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

Vande Bharat trains could be on international tracks, railways plan to export

"ಇದಲ್ಲದೆ, ರೈಲು ಸೇವೆಗಳ ನಿಲುಗಡೆ ಮತ್ತು ವಂದೇ ಭಾರತ್ ಸೇರಿದಂತೆ ಹೊಸ ರೈಲು ಸೇವೆಗಳ ಪರಿಚಯ, ಕಾರ್ಯಾಚರಣೆಯ ಕಾರ್ಯಸಾಧ್ಯತೆ, ಸಂಚಾರ ಸಮರ್ಥನೆ, ಸಂಪನ್ಮೂಲ ಲಭ್ಯತೆ ಇತ್ಯಾದಿಗಳು ಭಾರತೀಯ ರೈಲ್ವೇಯಲ್ಲಿ ನಡೆಯುತ್ತಿರುವ ಇತರ ಪ್ರಕ್ರಿಯೆಗಳು" ಎಂದೂ ಮಾಹಿತಿ ನೀಡಿದ್ದಾರೆ.

ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆ ಕಲ್ಲು ತೂರಾಟ

ಇನ್ನು, ವಂದೇ ಭಾರತ್ ರೈಲುಗಳು ಟ್ರ್ಯಾಕ್‌ಗೆ ಇಳಿದ ಮೇಲೆ ಹಲವು ಬಾರಿ ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ. ಇತ್ತೀಚೆಗೆ ಮತ್ತೊಂದು ಘಟನೆ ನಡೆದಿದೆ. ತಿರುವನಂತಪುರಂ - ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆ ಎರ್ನಾಕುಲಂ ನಾರ್ತ್ ಮತ್ತು ಎಡಪಲ್ಲಿ ರೈಲು ನಿಲ್ದಾಣಗಳ ನಡುವೆ ಶನಿವಾರ ಸಂಜೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಶನಿವಾರ ಸಂಜೆ 6.55ರ ಸುಮಾರಿಗೆ ನಡೆದ ಘಟನೆಯಲ್ಲಿ ರೈಲಿನ ಕೋಚ್‌ನ ಗಾಜು ಜಖಂಗೊಂಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಈ ಪ್ರದೇಶದಲ್ಲಿ ಶೋಧ ನಡೆಸಿದರು. ಕೆಲವು ನಿಮಿಷಗಳ ಕಾಲ ನಿಂತ ನಂತರ ರೈಲು ಕಾಸರಗೋಡಿನತ್ತ ಪ್ರಯಾಣ ಮುಂದುವರೆಸಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+