Vande Bharat express: ಅಯೋಧ್ಯೆ-ಆನಂದ ವಿಹಾರ್ ಮಧ್ಯೆ ವಾರದಲ್ಲಿ 6 ದಿನ ರೈಲು ಸಂಚಾರ
ಲಖನೌ, ಡಿಸೆಂಬರ್ 29: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ಶನಿವಾರ ಡಿಸೆಂಬರ್ 30ರಂದು ದೇಶದ ವಿವಿಧ ರಾಜ್ಯಗಳಲ್ಲಿ ಸಂಪರ್ಕ ಕಲ್ಪಿಸುವ ಕೆಲವು ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express Train) ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಈ ವೇಳೆ 'ಅಯೋಧ್ಯೆ ಜಂಕ್ಷನ್-ಆನಂದ ವಿಹಾರ್ ವಂದೇ ಭಾರತ್ ಎಕ್ಸ್ಪ್ರೆಸ್ ಸಹ ಕಾರ್ಯಾಚರಣೆ ಆರಂಭವಾಗಲಿದೆ.
ಭಾರತೀಯ ರೈಲ್ವೇ ಇಲಾಖೆ ಮೂಲಗಳು ತಿಳಿಸಿರುವ ಪ್ರಕಾರ, ಲಕ್ನೋದ ಚಾರ್ಬಾಗ್ ನಿಲ್ದಾಣದ ಮೂಲಕ ವಾರದಲ್ಲಿ 6 ದಿನ ಕಾರ್ಯ ನಿರ್ವಹಿಸುವ ನಿರೀಕ್ಷೆಯಿದೆ. ರೈಲುಗಳ ಉದ್ಘಾಟನೆಯ ಹಿಂದಿನ ದಿನವಾದ ಡಿಸೆಂಬರ್ 29 ರ ಶುಕ್ರವಾರದಂದು ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಆಗಲಿದೆ.

ವಂದೇ ಭಾರತ್ ರೈಲುಗಳು ಸುಮಾರು 6 ಗಂಟೆಗೆ ಆನಂದ್ ವಿಹಾರ್ ಟರ್ಮಿನಲ್ನಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಅಯೋಧ್ಯೆ ಜಂಕ್ಷನ್ಗೆ ತಲುಪಲಿದೆ ಎಂದು ತಾತ್ಕಾಲಿಕ ವೇಳಾಪಟ್ಟಿ ಮಾಹಿತಿ ನೀಡಿದೆ.
ಈ ನೂತನ 'ವಿಬಿ' ಅಯೋಧ್ಯೆಗೆ ತೆರಳುವ ಮೊದಲು ಕಾನ್ಪುರದ ಸೆಂಟ್ರಲ್ ಮತ್ತು ಚಾರ್ಬಾಗ್ ನಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ. ನಂತರ ಮಧ್ಯಾಹ್ನ 3 ಗಂಟೆಗೆ ಅಯೋಧ್ಯೆ ಜಂಕ್ಷನ್ನಿಂದ ಹೊರಟು ತಡರಾತ್ರಿಯ ವೇಳೆಗೆ ಆನಂದ್ ವಿಹಾರ್ ತಲುಪುವ ನಿರೀಕ್ಷೆ ಇದೆ. ಈ ರೈಲು ಚಾರ್ಬಾಗ್, ಕಾನ್ಪುರ ಸೆಂಟ್ರಲ್ ಹಾಗೂ ಅಲಿಗಢದಲ್ಲಿ ನಿಲುಗಡೆ ನೀಡಲಿದೆ. ಇದರಿಂದ ಈ ಭಾಗದ ಸಾವಿರಾರು ಪ್ರಯಾಣಿಕರು ಅನುಕೂಲವಾಗಲಿದೆ.
ಐದು ವಂದೇ ಭಾರತ ರೈಲು ಆರಂಭ
ಹಗಲಿನಲ್ಲಿ, ದೆಹಲಿ-ಅಮೃತಸರ, ದೆಹಲಿ-ಕತ್ರಾ, ಜಲ್ನಾ-ಮುಂಬೈ, ಕೊಯಮತ್ತೂರು-ಬೆಂಗಳೂರು ಮತ್ತು ಬೆಂಗಳೂರು-ಮಡಗಾನ್ ಮಾರ್ಗಗಳನ್ನು ಒಳಗೊಂಡಂತೆ ದೇಶದಾದ್ಯಂತ ಐದು ವಂದೇ ಭಾರತ್ ರೈಲುಗಳನ್ನು ಪ್ರಧಾನ ಮಂತ್ರಿಯವರು ಫ್ಲ್ಯಾಗ್ ಆಫ್ ಮಾಡಲು ನಿರ್ಧರಿಸಿದ್ದಾರೆ.
ಈ ವರ್ಷಾಂತ್ಯಕ್ಕೆ ಉದ್ಘಾಟನೆಗೊಳ್ಳುವ ದೇಶ ಒಟ್ಟು ವಂದೇ ಭಾರತ್ ಸೇವೆಗಳ ಸಂಖ್ಯೆ 80 ಕ್ಕೆ ಹೆಚ್ಚಾಗಲಿದೆ. ಅಯೋಧ್ಯೆ ಜಂಕ್ಷನ್ನಿಂದ ದರ್ಭಾಂಗಕ್ಕೆ ಅಮೃತ್ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಿಸಲಿದ್ದಾರೆ.

ಆಧುನಿಕ-ಐಶಾರಾಮಿ ಸೌಲಭ್ಯ
ಅಮೃತ್ ಭಾರತ್ ರೈಲುಗಳು ಅತ್ಯಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಇವು ಪ್ರಯಾಣಿಕರಿಗೆ ಐಶಾರಾಮಿ ಮತ್ತು ಆರಾಮದಾಯಕ ಅನುಭವ ನೀಡಲಿದೆ. ಈ ರೈಲಿನ ಆಸನ ಹಾಗೂ ಸ್ಲೀಪರ್ ಸೌಲಭ್ಯಗಳನ್ನು ಹೊಂದಿರುವ ಸಂಪೂರ್ಣ ನಾನ್-ಎಸಿ ವ್ಯವಸ್ಥೆ ಹೊಂದಿವೆ. 'ಅಮೃತ್ ಭಾರತ್ ಎಕ್ಸ್ಪ್ರೆಸ್'ನ ಮೊದಲ ನಿಯಮಿತ ಸೇವೆಯು ದೆಹಲಿ ಮತ್ತು ದರ್ಭಾಂಗ ಮಧ್ಯೆ ಲಭ್ಯವಾಗಲಿದೆ.
1 ಗಂಟೆಯಲ್ಲಿ ದೆಹಲಿ-ಅಯೋಧ್ಯೆ ಮಧ್ಯೆ ಪ್ರಯಾಣ
ನಾಳೆ ಶನಿವಾರ ಡಿಸೆಂಬರ್ 30ರಂದು ಪ್ರಧಾನಿ ಮೋದಿಯವರು 1450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಅಯೋಧ್ಯೆಯಲ್ಲಿನ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ದೆಹಲಿಯಿಂದ ಸುಮಾರು 180 ಪ್ರಯಾಣಿಕರೊಂದಿಗೆ ಮೊದಲ ವಾಣಿಜ್ಯ ಕಾರ್ಯಚರಣೆ ಇಲ್ಲಿಗೆ ಆರಂಭವಾಗಲಿದೆ.
ಶನಿವಾರ ಮಧ್ಯಾಹ್ನ 3 ಗಂಟೆಗೆ ಈ ನೂತನ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯಲಿದೆ. 680 ಕಿಮೀ ದೂರವನ್ನು ಒಂದು ಗಂಟೆ 20 ನಿಮಿಷಗಳಲ್ಲಿ ಕ್ರಮಿಸುತ್ತದೆ. ಮರಳಿ ದೆಹಲಿಗೆ ಅಯೋಧ್ಯೆಯಿಂದ ಮಧ್ಯಾಹ್ನ 3,40 ಕ್ಕೆ ವಿಮಾನವು ನಭಕ್ಕೆ ಜಿಗಿಯಲಿದೆ. ಅಲ್ಲಿಂದ ಸಂಜೆ 4.55ಕ್ಕೆ ದೆಹಲಿ ತಲುಪುತ್ತದೆ. ಈ ವಿಮಾನ ನಿಲ್ದಾಣದ ಉದ್ಘಾಟನೆಯ ದಿನದಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮತ್ತಿತರರ ಉಪಸ್ಥಿತಿ ಇರಲಿದೆ.












Click it and Unblock the Notifications