Viral: 20 ರೂ.ಗೆ 6 ಬದಲಿಗೆ 4 ಗೋಲ್ಗೊಪ್ಪ: ನಡು ರಸ್ತೆಯಲ್ಲೇ ಕೂತ ಮಹಿಳೆ ವಿಡಿಯೋ ವೈರಲ್
ಮಹಿಳೆಯೊಬ್ಬರು ಪಾನಿಪುರಿಗಾಗಿ (ಗೋಲ್ಗೊಪ್ಪ) ಮಾಡಿದ ಘಟನೆಯಿಂದ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರರು ಸಮಸ್ಯೆ ಎದುರಿಸುವಂತಾಯಿತು. ಮಹಿಳೆಯ ಏಕಾಂಗಿ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಅನೇಕರ ಗಮನ ಸೆಳೆದಿದೆ.
ಗೋಲ್ಗಪ್ಪ ತಿನ್ನುವ ವೇಳೆ ತೊಂದರೆ ಎದುರಿಸಿದ ಮಹಿಳೆಯೊಬ್ಬರು ರಸ್ತೆಯ ಮಧ್ಯೆ ಕುಳಿತು ಧರಣಿ ನಡೆಸಿದ ವಿಚಿತ್ರ ಘಟನೆ ಗುಜರಾತ್ ರಾಜ್ಯದ ವಡೋದರದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಡುರಸ್ತೆಯಲ್ಲಿ ಮಹಿಳೆ ಬೇಸರದಿಂದ ಕೂತಿದ್ದನ್ನು ನೀವು ನೋಡಬಹುದು.

ಈ ಮಹಿಳೆಗೆ 20 ರೂಪಾಯಿಗೆ 6 ಗೋಲ್ಗಪ್ಪಗಳ ಬದಲು ಕೇವಲ 4 ನೀಡಲಾಗಿದೆ ಎಂಬುದೇ ಆಕೆಯ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದಾಗಿ ವಾಹನಗಳ ದಟ್ಟಣೆಯ ರಸ್ತೆಯಲ್ಲಿ ಆಕೆ ಕೂತಿದ್ದಾಳೆ. ಒಬ್ಬಳೆ ನಡುರಸ್ತೆಯಲ್ಲಿ ಕೂತು ಕಣ್ಣೀರು ಹಾಕುತ್ತಾ ಪ್ರತಿಭಟಿಸಿದ್ದಾರೆ. ನಾಲ್ಕು ಕೊಟ್ಟಿರುವ ಗೋಲ್ಗಪ್ಪಗಳನ್ನು ವ್ಯಾಪಾರಿಗೆ ಬಾಕಿ ಎರಡು ಗೋಲ್ಗಪ್ಪ ನೀಡುವಂತೆ, ನನಗೆ ನ್ಯಾಯ ನೀಡುವಂತೆ ಆಕೆ ಒತ್ತಾಯಿಸಿರುವ ವಿಡಿಯೋ ಹರಿದಾಡುತ್ತಿದೆ.
ವಡೋದರದ ಸುರಸಾಗರ್ ಪ್ರದೇಶದ ರಸ್ತೆಯಲ್ಲಿ ಸಂಚಾರದ ಗರಿಷ್ಠ ಸಮಯದಲ್ಲಿ (ಪೀಕ್ ಸಮಯದಲ್ಲಿ) ಈ ಘಟನೆ ಜರಗಿದ್ದು, ಕೆಲವು ಹೊತ್ತು ಸವಾರರಲ್ಲಿ ಕೂತೂಹಲ ಕೆರಳಿಸಿತು. ದಾರಿಹೋಕರು ಮಹಿಳೆ ಪ್ರತಿಭಟನೆ ವಿಡಿಯೋ ಸೆರೆ ಹಿಡಿದರು. ವಿಡಿಯೋದಲ್ಲಿ ಮಹಿಳೆ ತನಗೆ ಗೋಲ್ಗೊಪ್ಪ ವ್ಯಾಪಾರಿಯಿಂದ ಅನ್ಯಾಯವಾಗಿದೆ. ನನಗೆ "ನ್ಯಾಯ ಬೇಕು" ಎಂದು ಕೂಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
SHOCKER 🚨 Vadodara Woman sat on the road after being served 4 golgappas instead of 6 for ₹20 🤯
— Times Algebra (@TimesAlgebraIND) September 19, 2025
Gujarat Police team rushed in and handled the situation 😳
pic.twitter.com/QU6Cymv3J7
ಇಂತಹ ಘಟನೆ ಇದೇ ಮೊದಲೇನಲ್ಲ. ಎರಡು ವರ್ಷಗಳ ಹಿಂದೆ, ನೋಯ್ಡಾದಲ್ಲಿ ಗೋಲ್ಗಪ್ಪ ತಿನ್ನಲು ನಡೆದ ವಾದವಿ ವಾದವೇ ಚಾಕು ಇರಿತಕ್ಕೆ ಕಾರಣವಾಗಿತ್ತು. 30 ವರ್ಷದ ವ್ಯಾಪಾರಿಯೊಬ್ಬರನ್ನು ಕಾಯುವಿಕೆ ವಿಷಯದಲ್ಲಿ ಗ್ರಾಹಕನೊಬ್ಬ ಇರಿದ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
-
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್












Click it and Unblock the Notifications