ಉತ್ತರಾಖಂಡ; ಬಿಜೆಪಿ ಉಚ್ಛಾಟಿತ ನಾಯಕನ ಸೊಸೆ ಕಾಂಗ್ರೆಸ್ನಿಂದ ಸ್ಪರ್ಧೆ
ನವದೆಹಲಿ, ಜನವರಿ 22: ಮುಂಬರುವ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಲ್ಯಾನ್ಸ್ಡೌನ್ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಹರಕ್ ಸಿಂಗ್ ರಾವತ್ ಸೊಸೆ ಅನುಕೃತಿ ಗುಸೇನ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸಚಿವ ಸಂಪುಟದಿಂದ ವಜಾಗೊಂಡಿದ್ದ ಹರಕ್ ಸಿಂಗ್ ರಾವತ್, ಪಕ್ಷ ವಿರೋಧಿ ಚಟುವಟಿಕೆಗಾಗಿ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದು, ಶುಕ್ರವಾರ ಮರಳಿ ಕಾಂಗ್ರೆಸ್ ಸೇರಿದ್ದಾರೆ.
ಹರಕ್ ಸಿಂಗ್ ರಾವತ್ ಅವರು ಶುಕ್ರವಾರ ದೆಹಲಿಯಲ್ಲಿ ತಮ್ಮ ಸೊಸೆ ಅನುಕೃತಿ ಗುಸೇನ್ ಅವರೊಂದಿಗೆ ಕಾಂಗ್ರೆಸ್ಗೆ ಮರು ಸೇರ್ಪಡೆಗೊಂಡಿದ್ದಾರೆ. ಪಕ್ಷವು ಅನುಕೃತಿ ಗುಸೇನ್ರನ್ನು ಲ್ಯಾನ್ಸ್ಡೌನ್ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆಸುತ್ತಿದೆ ಎಂದು ಮೂಲವೊಂದು ತಿಳಿಸಿದೆ.
ಪ್ರಿಯಾಂಕಾ ಗಾಂಧಿಯವರ ಅಭಿಯಾನದ 'ಲಡ್ಕಿ ಹೂನ್ ಲಡ್ ಸಕ್ತಿ ಹೂ' ಅಭಿಯಾನದಿಂದ ಪ್ರಭಾವಿತರಾಗಿ ಕಾಂಗ್ರೆಸ್ ಸೇರಿದರು ಎಂದು ಅನುಕೃತಿ ಗುಸೇನ್ ಎಎನ್ಐಗೆ ತಿಳಿಸಿದ್ದಾರೆ. ಅಲ್ಲದೆ, ಉತ್ತರಾಖಂಡದಲ್ಲಿ ಮಹಿಳಾ ನಾಯಕತ್ವದ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ನೀವು ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ಅನುಕೃತಿ ಗುಸೇನ್, "ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಪಕ್ಷವು ಸ್ಥಾನವನ್ನು ಮಾತ್ರ ನಿರ್ಧರಿಸುತ್ತದೆ,'' ಎಂದು ಹೇಳಿದರು. ಪ
ಮಾಜಿ ಸಚಿವ ಹರಕ್ ಸಿಂಗ್ ರಾವತ್ ಮತ್ತು ಅನುಕೃತಿ ಗುಸೇನ್ ಕಾಂಗ್ರೆಸ್ ಸೇರಿದ ನವದೆಹಲಿಯ ಕಾಂಗ್ರೆಸ್ ವಾರ್ ರೂಂನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಉಪಸ್ಥಿತರಿದ್ದರು.
ಬಿಜೆಪಿ
ಯೂಸ್
ಅಂಡ್
ಥ್ರೋ
ರಾಜಕಾರಣ
ಶುಕ್ರವಾರ
ಬಿಜೆಪಿಯನ್ನು
ತರಾಟೆಗೆ
ತೆಗೆದುಕೊಂಡ
ಹರಕ್
ಸಿಂಗ್
ರಾವತ್,
"ಮಾರ್ಚ್
10ರಂದು
ಕಾಂಗ್ರೆಸ್
ಪೂರ್ಣ
ಬಹುಮತದೊಂದಿಗೆ
ಗೆದ್ದಾಗ
ಅದು
ನನ್ನ
ಕ್ಷಮೆಯಾಚನೆಯಾಗಿದೆ.
ಬಿಜೆಪಿ
ನನ್ನನ್ನು
ಯೂಸ್
ಅಂಡ್
ಥ್ರೋ
ಎಂದು
ಭಾವಿಸಿದೆ,
ನಾನು
ತುಂಬಾ
ಅಸಮಾಧಾನಗೊಂಡಿದ್ದೇನೆ
ಎಂದ
ಅವರು,
ನಾನು
ಭರವಸೆ
ನೀಡಿದಂತೆ
ಕೊನೆಯ
ಕ್ಷಣದವರೆಗೂ
ಗೃಹ
ಸಚಿವ
ಅಮಿತ್
ಶಾ
ಅವರೊಂದಿಗಿನ
ಸ್ನೇಹವನ್ನು
ಮುರಿದುಕೊಳ್ಳುವುದಿಲ್ಲ,"
ಎಂದರು.
ಹರಕ್ ಸಿಂಗ್ ರಾವತ್ ಅವರು ಬುಧವಾರ ನವದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದರು. ತಮ್ಮ ಪ್ರಭಾವವನ್ನು ಬಳಸಿಕೊಂಡು ಕನಿಷ್ಠ ಹತ್ತು ಸ್ಥಾನಗಳನ್ನು ತಂದುಕೊಡುವುದಾಗಿ ಕಾಂಗ್ರೆಸ್ ನಾಯಕತ್ವಕ್ಕೆ ಭರವಸೆ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಆದಾಗ್ಯೂ, ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಒಂದು ವಿಭಾಗವು ಗುರುವಾರ ಅವರ ಮರು ಸೇರ್ಪಡೆಯನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ಹರೀಶ್
ರಾವತ್
ಸರ್ಕಾರದ
ವಿರುದ್ಧ
ಬಂಡಾಯವೆದ್ದರು
2016ರಲ್ಲಿ
ಹರೀಶ್
ರಾವತ್
ನೇತೃತ್ವದ
ಕಾಂಗ್ರೆಸ್
ಸರ್ಕಾರವನ್ನು
ಅಲ್ಪಮತಕ್ಕೆ
ಇಳಿಸುವಲ್ಲಿ
ಹರಕ್
ಸಿಂಗ್
ರಾವತ್
ಪ್ರಮುಖ
ಪಾತ್ರ
ವಹಿಸಿದ್ದರು.
2016ರಲ್ಲಿ
ಕಾಂಗ್ರೆಸ್
ಸರ್ಕಾರದ
ವಿರುದ್ಧ
ಬಂಡಾಯವೆದ್ದಿದ್ದ
ರಾವತ್
ಬಿಜೆಪಿ
ಸೇರಿದ್ದರು.
ಪುಷ್ಕರ್
ಸಿಂಗ್
ಧಾಮಿ
ರಾವತ್ನನ್ನು
ತೆಗೆದುಹಾಕಿದರು
ಈ
ಹಿಂದೆ
ಮುಖ್ಯಮಂತ್ರಿ
ಪುಷ್ಕರ್
ಸಿಂಗ್
ಧಾಮಿ
ಕೂಡ
ರಾವತ್
ಅವರನ್ನು
ಸಂಪುಟದಿಂದ
ವಜಾಗೊಳಿಸುವ
ಕುರಿತು
ರಾಜ್ಯಪಾಲರಿಗೆ
ಪತ್ರ
ಬರೆದಿದ್ದಾರೆ
ಎಂದು
ಪಿಟಿಐ
ವರದಿ
ಮಾಡಿದೆ.
ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಮ್ಮ ಸಂಬಂಧಿಕರಿಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕತ್ವದ ಮೇಲೆ ಒತ್ತಡ ಹೇರಿದ ಆರೋಪದ ಮೇಲೆ ಇತ್ತೀಚೆಗೆ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು, ಈ ಆರೋಪವನ್ನು ಹರಕ್ ಸಿಂಗ್ ರಾವತ್ ನಿರಾಕರಿಸಿದ್ದಾರೆ.
ಫೆ.14ರಂದು
ಮತದಾನ
ಉತ್ತರಾಖಂಡದಲ್ಲಿ
ಜನವರಿ
21ರಂದು
ಚುನಾವಣಾ
ಅಧಿಸೂಚನೆ
ಹೊರಬೀಳಲಿದ್ದು,
ನಾಮಪತ್ರ
ಸಲ್ಲಿಸಲು
ಜನವರಿ
21ರಿಂದ
ಜ.28ರವರೆಗೆ
ಅವಕಾಶವಿರುತ್ತದೆ.
ಜನವರಿ
29ರಂದು
ನಾಮಪತ್ರ
ಪರಿಶೀಲನೆ
ನಡೆಯಲಿದ್ದು,
ನಾಮಪತ್ರ
ಹಿಂಪಡೆಯಲು
ಜನವರಿ
31
ಕೊನೆಯ
ದಿನಾಂಕವಾಗಿದೆ.
ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 70 ಸ್ಥಾನಗಳ ಪೈಕಿ ಬಿಜೆಪಿ 57 ಸ್ಥಾನಗಳನ್ನು ಗೆದ್ದಿತ್ತು.