ಯೋಗಿ ಆದಿತ್ಯನಾಥರ ಹೊಸ ಯೋಜನೆ: ಜೈಲಿನಲ್ಲಿ ಗೋಶಾಲೆ
Recommended Video

ಉತ್ತರಪ್ರದೇಶದ ಜೈಲುಗಳಲ್ಲಿ ಗೋಶಾಲೆ ಪ್ರಾರಂಭಿಸಲು ಯೋಗಿ ಆದಿತ್ಯನಾಥ್ ಚಿಂತನೆ
ಲಖನೌ, ಜುಲೈ 07: ಗೋ ಸಂರಕ್ಷಣೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೊಸ ಯೋಜನೆ ಮಾಡಿದ್ದು ಇನ್ನುಮುಂದೆ ಉತ್ತರ ಪ್ರದೇಶದ ಜೈಲುಗಳು ಗೋಶಾಲೆಗಳಾಗಳಿವೆ.
ಹೌದು, ಜೈಲಿನಲ್ಲಿ ಹಸು ಸಾಕಣೆಗೆಂದು ಆದಿತ್ಯನಾಥ ಸರ್ಕಾರ 2 ಕೋಟಿ ಹಣವನ್ನು ಮೀಸಲಿಟ್ಟಿದ್ದು, ಪ್ರಾಥಮಿಕವಾಗಿ ರಾಜ್ಯದ 12 ಜಿಲ್ಲೆಗಳಲ್ಲಿ ಜೈಲುಗಳಲ್ಲಿ ಹಸು ಸಾಕಣೆ ಮಾಡಲಾಗುತ್ತದೆ.
ವಿರೋಧ ಪಕ್ಷಗಳು ಈ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಆದರೆ ಹಿಂದೂ ಪರ ಸಂಘಟನೆಗಳು ಯೋಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿವೆ ಹಾಗೂ ಅಭಿನಂಧನೆಗಳನ್ನು ತಿಳಿಸಿವೆ.

ಗೋರಖ್ಪುರ, ಆಗ್ರಾ, ಸುಲ್ತಾನ್ಪುರ, ಬರಾಬಂಕಿ, ಸೀತಾಪುರ್, ಮೀರತ್, ಕಾನ್ಪುರ್ ದೆಹತ್, ಬಲರಾಮ್ಪುರ್, ರಾಯ್ಬರೇಲಿ ಜಿಲ್ಲೆಗಳ ಜೈಲುಗಳಲ್ಲಿ ಪ್ರಾಥಮಿಕವಾಗಿ ಜೈಲು ವಾಸಿಗಳೇ ಹಸುಗಳ ಸಾಕಣೆ ಮಾಡಲಿದ್ದಾರೆ.












Click it and Unblock the Notifications