ಉತ್ತರ ಪ್ರದೇಶ: ಪೊಲೀಸರೊಂದಿಗೆ ಘರ್ಷಣೆ, ಕಲ್ಲು ತೂರಾಟ ನಡೆಸಿದ ಗುಂಪು
ಲಕ್ನೋ ಡಿಸೆಂಬರ್ 10: ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಕಾಕ್ರಲಾ ಪಟ್ಟಣದಲ್ಲಿ ಶುಕ್ರವಾರ ನಿವಾಸಿಗಳ ಗುಂಪೊಂದು ಪೊಲೀಸರೊಂದಿಗೆ ಘರ್ಷಣೆ ನಡೆಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ವಾಡಿಕೆಯ ತಪಾಸಣೆಗಾಗಿ ನಿಲ್ಲಿಸಿದ್ದಕ್ಕಾಗಿ ಕೋಪಗೊಂಡ ವ್ಯಕ್ತಿಯೊಬ್ಬ ಜನಸಮೂಹವನ್ನು ಒಟ್ಟುಗೂಡಿಸಿದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ವಿಡಿಯೋ ದೃಶ್ಯಾವಳಿಗಳನ್ನು ಬಳಸಿಕೊಂಡು ಶೋಧ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಒಪಿ ಸಿಂಗ್ ತಿಳಿಸಿದ್ದಾರೆ.
ರಾತ್ರಿಯ ಹೊತ್ತಿಗೆ ಪ್ರದೇಶದ ಬೀದಿಗಳು ನಿರ್ಜನವಾಗಿದ್ದವು ಮತ್ತು ಪೋಲಿಸ್ ಹಾಗೂ ಜನಸಮೂಹದ ಘರ್ಷಣೆಗೆ ಹೆದರಿ ಅನೇಕ ಜನರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡರು ಎಂದು ತಿಳಿದುಬಂದಿದೆ.
"ಪೊಲೀಸ್ ತಂಡವು ಕಾಲ್ನಡಿಗೆಯಲ್ಲಿ ಗಸ್ತು ತಿರುಗಲು ಪ್ರದೇಶದಲ್ಲಿತ್ತು. ವಾಡಿಕೆಯ ತಪಾಸಣೆ ನಡೆಯುತ್ತಿದ್ದಾಗ ಒಬ್ಬ ವ್ಯಕ್ತಿ ತನ್ನ ವಾಹನವನ್ನು ಪರಿಶೀಲಿಸುವುದನ್ನು ವಿರೋಧಿಸಿದ್ದಾನೆ. ನಂತರ ಅವನು ತನ್ನ ಕುಟುಂಬದ ಪುರುಷರು ಮತ್ತು ಮಹಿಳೆಯರೊಂದಿಗೆ ಹಿಂದಿರುಗಿ ಧರಣಿ ಪ್ರತಿಭಟನೆಯನ್ನು ಪ್ರಾರಂಭಿಸಿದನು. ಪೊಲೀಸರು ಅವರನ್ನು ಕೇಳಿದಾಗ ಸಂಚಾರವನ್ನು ನಿರ್ಬಂಧಿಸುವುದನ್ನು ನಿಲ್ಲಿಸಿ, ಅನೇಕ ಜನರು ಕಲ್ಲು ಎಸೆಯಲು ಪ್ರಾರಂಭಿಸಿದರು"ಎಂದು ಪೊಲೀಸ್ ಮುಖ್ಯಸ್ಥರು ತೀಲಿಸಿದರು. ಜೊತೆಗೆ ಅವರು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಿಲ್ಲ.

ಗುಂಪನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದರು ಮತ್ತು ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಲಾಗುತ್ತಿದೆ ಎಂದರು. ಘಟನೆಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದಾರೆ ಮತ್ತು ಕೆಲವು ಪೊಲೀಸ್ ವಾಹನಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.












Click it and Unblock the Notifications