Video: ಹೋಟೆಲ್ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಅಯ್ಯಯ್ಯೋ ಚೆಲ್ಲಿ ಹೋಯ್ತು ಅನ್ನ..
ಹೋಟೆಲ್ಗೆ ಆಹಾರ ಸೇವಿಸಲು ಬಂದ ಎರಡು ಗುಂಪುಗಳ ನಡುವೆ ಗಲಾಟೆ, ಹೊಡೆದಾಟ ನಡೆದ ವಿಡಿಯೋ ವೈರಲ್ ಆಗಿದೆ. ಗುಂಪು ಹೊಡೆದಾಟದಲ್ಲಿ ಹೋಟೆಲ್ನ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿಸಿ ಹಾನಿ ಮಾಡಲಾಗಿದೆ. ಅಲ್ಲದೆ ಆಹಾರವನ್ನೂ ಚೆಲ್ಲಲಾಗಿದೆ. ವೈರಲ್ ಆಗಿರುವ ವಿಡಿಯೋದ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಹೌದು.. ಉತ್ತರ ಪ್ರದೇಶದ ಬಿಜ್ನೋರ್ನಲ್ಲಿರುವ ಹೋಟೆಲ್ನಲ್ಲಿ ಎರಡು ಗುಂಪುಗಳ ನಡುವೆ ತೀವ್ರ ಗಲಾಟೆ ಹೊಡೆದಾಟ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಕೂಡ ವಿಷಯ ತಿಳಿದು ಕ್ರಮ ಕೈಗೊಂಡಿದ್ದಾರೆ. ಆದರೆ ಜಗಳಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

Kalesh b/w two groups of guys inside Hotel after some Heated Argument on Bijnor Up
— Ghar Ke Kalesh (@gharkekalesh) November 2, 2024
pic.twitter.com/9zQbJTUcQB
ವೀಡಿಯೊದಲ್ಲಿ ಎರಡು ಗುಂಪುಗಳ ನಡುವೆ ನಡೆದ ಯುದ್ಧವನ್ನು ನೋಡಿದ ಇಂಟರ್ನೆಟ್ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಪೋಸ್ಟ್ನ ಕಾಮೆಂಟ್ ವಿಭಾಗದಲ್ಲಿ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ತುಂಬಿವೆ. ಹೋಟೆಲ್ ಪೀಟೋಪಕರಣಗಳಿಗೆ ಯುವಕ ಗುಂಪು ಹಾನಿಯನ್ನು ಮಾಡಿರುವುದು ಮಾತ್ರವಲ್ಲದೆ ಆಹಾರವನ್ನೂ ವ್ಯರ್ಥ ಮಾಡಿದೆ.
ಈ ವೀಡಿಯೊದ ಆರಂಭದಲ್ಲಿ ಇಬ್ಬರು ವ್ಯಕ್ತಿಯನ್ನು ಹೊಡೆಯುವುದನ್ನು ಕಾಣಬಹುದು. ಈ ವೇಳೆ ಅಲ್ಲಿ ನಿಂತಿದ್ದ ಇತರ ವ್ಯಕ್ತಿಗಳೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆದರೆ ಈ ಇಡೀ ಕಾಳಗದಲ್ಲಿ ಹುಡುಗರು ಪೆಟ್ಟು ತಿಂದರೂ ನಂತರ ಪ್ರತಿದಾಳಿ ಪ್ರಾರಂಭಿಸುತ್ತಾರೆ.
ದಾಳಿ ಮಾಡಿದ ವ್ಯಕ್ತಿಯ ಮೇಲೆ ಕಬ್ಬಿಣದ ಕುರ್ಚಿಯನ್ನು ಎಸೆಯುತ್ತಾರೆ. ಸುಮಾರು 43 ಸೆಕೆಂಡ್ ಗಳ ಕಾದಾಟದ ಈ ವಿಡಿಯೋದಲ್ಲಿ ಭಯಾನಕ ಘರ್ಷಣೆ ಕಂಡು ಬಂದಿದೆ.
ಹೋಟೆಲ್ನಿಂದ ಹೊರಬಂದ ನಂತರವೂ ಜನರು ಹೊಡೆದಾಡುತ್ತಾ ನೆಲದ ಮೇಲೆ ಬೀಳುವುದನ್ನು ಕಾಣಬಹುದು. ಮಾಧ್ಯಮ ವರದಿಗಳ ಪ್ರಕಾರ, ಪೊಲೀಸರು ಕೂಡ ಈ ವಿಷಯದಲ್ಲಿ ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದ ಕಾಮೆಂಟ್ ವಿಭಾಗದಲ್ಲಿ ಬಿಜ್ನೋರ್ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಗೆ ಈ ಬಗ್ಗೆ ತನಿಖೆ ಮಾಡಿ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದಿದೆ.
ಎರಡು ಗುಂಪುಗಳ ನಡುವೆ ಘರ್ಷಣೆ...
X ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿ @gharkekalesh ಬರೆದಿದ್ದಾರೆ - ಯುಪಿಯ ಬಿಜ್ನೋರ್ನಲ್ಲಿ ಬಿಸಿಯಾದ ಚರ್ಚೆಯ ನಂತರ ಹೋಟೆಲ್ನೊಳಗೆ ಎರಡು ಗುಂಪಿನ ಹುಡುಗರ ನಡುವೆ ಭಾರೀ ಘರ್ಷಣೆ. ಈ ಪೋಸ್ಟ್ ಇದುವರೆಗೆ 18 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೂರಾರು ಬಳಕೆದಾರರು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದಾರೆ. ಈ ಘಟನೆಯ ಬಗ್ಗೆ ಅನೇಕರು ತಮ್ಮ ಪ್ರತಿಕ್ರಿಯೆಯನ್ನು ಕಾಮೆಂಟ್ ವಿಭಾಗದಲ್ಲಿ ನೀಡಿದ್ದಾರೆ.
ಬಿಜ್ನೋರ್ನಲ್ಲಿ ನಡೆದ ಈ ಘಟನೆಯ ಕುರಿತು ಕಾಮೆಂಟ್ ವಿಭಾಗದಲ್ಲಿ ಬಳಕೆದಾರರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬರು ಬರೆದಿದ್ದಾರೆ - ಜಗಳ ಮಾಡಲು ಏನೂ ಇಲ್ಲ, ಈ ಜನರು ನಿಷ್ಪ್ರಯೋಜಕರು, ಅವರು ಬಡ ಅಂಗಡಿಯವನಿಗೆ ಹಾನಿ ಮಾಡಿದ್ದಾರೆ. ಮತ್ತೊಬ್ಬ- 'ಓ ದೇವರೇ, ಓ ದೀನನಾಥ, ಏನಾಗುತ್ತಿದೆ? ಯಾರಾದರೂ ಅವರನ್ನು ತಡೆಯಿರಿ... ' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು 'ತಮ್ಮ ಹೋರಾಟದಲ್ಲಿ ಈ ಜನರು ಹೋಟೆಲ್ ಅನ್ನು ನಾಶಪಡಿಸಿದರು' ಎಂದು ಬರೆದಿದ್ದಾರೆ.












Click it and Unblock the Notifications