ಉತ್ತರ ಪ್ರದೇಶ: ಅಯೋಧ್ಯೆಯ ರಾಮಮಂದಿರದಲ್ಲಿ 3600 ವಿಗ್ರಹಗಳ ಕೆತ್ತನೆ

ಲಕ್ನೋ ಮೇ 19: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ದೇವಾಲಯವನ್ನು ಎಲ್ಲಾ ರೀತಿಯಲ್ಲೂ ಭವ್ಯವಾಗಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಅದರಲ್ಲಿ ಸನಾತನ ಧರ್ಮದ ಮೌಲ್ಯಗಳನ್ನು ಅಳವಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಈ ಕ್ರಮದಲ್ಲಿ ಇಲ್ಲಿನ ಕಲ್ಲುಗಳ ಮೇಲೆ 3600 ವಿಗ್ರಹಗಳನ್ನು ಕೆತ್ತಲಾಗುವುದು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗುರುವಾರ ಫೋಟೋವನ್ನು ಹಂಚಿಕೊಂಡಿದ್ದು, ಹಿಂದೂ ಧರ್ಮಗ್ರಂಥಗಳನ್ನು ಆಧರಿಸಿದ ದೇವಾಲಯದಲ್ಲಿ 3600 ಮೂರ್ತಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದೆ. ಶ್ರೀ ರಾಮ್ ಲಾಲಾ ವಿಗ್ರಹಗಳನ್ನು ಹೊರತುಪಡಿಸಿ, ಈ 3600 ವಿಗ್ರಹಗಳನ್ನು ಈ ದೇವಾಲಯದಲ್ಲಿ ಸ್ಥಾಪಿಸಲಾಗುವುದು.

Uttar Pradesh: 3600 idols to be carved in Ayodhyas Ram Mandir

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಚಿತ್ರಗಳೊಂದಿಗೆ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಶ್ರೀರಾಮ ಜನ್ಮಭೂಮಿ ದೇವಾಲಯದ ಕಂಬಗಳು, ಮೆಟ್ಟಿಲುಗಳು ಮತ್ತು ಇತರ ಸ್ಥಳಗಳನ್ನು ಅಲಂಕರಿಸಲು ಶಾಸ್ತ್ರೀಯ ಗ್ರಂಥಗಳಲ್ಲಿ ನಿರೂಪಿತವಾಗಿರುವ ಕಥೆಗಳ ಆಧಾರದ ಮೇಲೆ ಸುಂದರವಾದ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ ಎಂದು ಪೋಸ್ಟ್ ಹೇಳುತ್ತದೆ. ಈ ವಿಗ್ರಹಗಳನ್ನು ನಿರ್ಮಾಣ ಪ್ರಕ್ರಿಯೆಯ ವೇಳಾಪಟ್ಟಿಯಂತೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು.

ರಾಮಮಂದಿರ ನಿರ್ಮಾಣ ಕಾಮಗಾರಿ ಶೇ.50ಕ್ಕೂ ಹೆಚ್ಚು ಪೂರ್ಣಗೊಂಡಿದೆ. ಈ ವರ್ಷಾಂತ್ಯಕ್ಕೆ ಮಂದಿರ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 2023 ರ ವೇಳೆಗೆ ಭಗವಾನ್ ರಾಮನ ಭವ್ಯ ಸ್ಥಳ ಸಿದ್ಧವಾಗಲಿದೆ. ಜನವರಿ 2024 ರಲ್ಲಿ ಮಕರ ಸಂಕ್ರಾಂತಿಯ ದಿನದಂದು ಇದನ್ನು ಭಕ್ತರಿಗೆ ದರ್ಶನಕ್ಕೆ ತೆರೆಯಬಹುದು ಎನ್ನಲಾಗುತ್ತಿದೆ.

Uttar Pradesh: 3600 idols to be carved in Ayodhyas Ram Mandir

ಭಗವಾನ್ ರಾಮನ ವಿಗ್ರಹಕ್ಕೆ ಸಂಬಂಧಿಸಿದಂತೆ ಇದು 51 ಇಂಚುಗಳಷ್ಟು ಇದ್ದು ಶ್ರೀರಾಮನಿಗಾಗಿ ನಿರ್ಮಿಸಲಾದ ವೇದಿಕೆಯಲ್ಲಿ ಸ್ಥಾಪಿಸಲ್ಪಡುತ್ತದೆ. ಮೂಲಗಳ ಪ್ರಕಾರ ದೇವಾಲಯದ ವಿಸ್ತೀರ್ಣವನ್ನು 67 ಎಕರೆಯಿಂದ 110 ಎಕರೆಗೆ ಹೆಚ್ಚಿಸಲಾಗಿದೆ. ಈ ದೇವಾಲಯವನ್ನು 1000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಈ ದೇವಾಲಯದ ಅಡಿಪಾಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು 5 ಆಗಸ್ಟ್ 2020 ರಂದು ಹಾಕಿದರು ಎಂಬುದು ಗಮನಾರ್ಹ. ಆಗಸ್ಟ್ 5 ರಂದು ಆಯೋಜಿಸಲಾದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ದೇವಾಲಯವು ಮ್ಯೂಸಿಯಂ, ಡಿಜಿಟಲ್ ಆರ್ಕೈವ್ ಸೆಂಟರ್ ಮತ್ತು ಸಂಶೋಧನಾ ಕೇಂದ್ರವನ್ನು ಸಹ ಹೊಂದಿರುತ್ತದೆ.

Uttar Pradesh: 3600 idols to be carved in Ayodhyas Ram Mandir

ಅಯೋಧ್ಯಾದಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರವನ್ನು 2024ರ ಜನವರಿ 1ರಂದು ತೆರೆಯಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. 2024ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ರಾಮಮಂದಿರದ ಲೋಕಾರ್ಪಣೆಯು ಆಡಳಿತಾರೂಢ ಬಿಜೆಪಿಗೆ ಮೈಲುಗಲ್ಲಾಗಲಿದೆ. 1990ರ ದಶಕದಿಂದಲೂ ರಾಮಮಂದಿರ ನಿರ್ಮಾಣವನ್ನು ರಾಷ್ಟ್ರೀಯ ಚುನಾವಣಾ ಪ್ರಣಾಳಿಕೆ ಮತ್ತು ಪ್ರಚಾರದ ಪ್ರಮುಖ ಭಾಗವನ್ನಾಗಿಸಿಕೊಂಡು ಬಂದಿದ್ದ ಬಿಜೆಪಿಗೆ, ಇದು ಮಹತ್ವದ್ದಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+