PF Withdrawal: ಎಟಿಎಂ, ಯುಪಿಐ ಮೂಲಕ ಪಿಎಫ್ ವಿತ್ ಡ್ರಾ, ಅಪ್ಡೇಟ್
ನವದೆಹಲಿ, ಮಾರ್ಚ್ 26: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಇನ್ನಷ್ಟು ಉದ್ಯೋಗಿಗಳ ಸ್ನೇಹಿಯಾಗಲು ಮುಂದಾಗಿದೆ. ಇದಕ್ಕಾಗಿ ಹೊಸ ಹೊಸ ಆಯ್ಕೆಗಳನ್ನು ನೀಡುತ್ತಿದೆ. ಈ ಹಿಂದೆ ಘೋಷಣೆ ಮಾಡಿದಂತೆ ಪಿಎಫ್ ವಾಪಸ್ ಪಡೆಯುವುದು ಇನ್ನಷ್ಟು ಸುಲಭವಾಗಿಸುತ್ತಿದೆ. ಎಟಿಎಂ, ಯುಪಿಐ ಮೂಲಕ ಪಿಎಫ್ ವಾಪಸ್ ಪಡೆಯುವ ಕುರಿತು ಈಗ ಅಪ್ಡೇಟ್ ನೀಡಿದೆ. ಹೊಸ ಬದಲಾವಣೆಯನ್ನು ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಅನುಮೋದನೆ ನೀಡಿದೆ.
ಕೇಂದ್ರ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಸುಮಿತ್ರಾ ದಾವ್ರಾ ಈ ಕುರಿತು ಮಾಹಿತಿ ನೀಡಿದ್ದಾರೆ. ಗ್ರಾಹಕರ ಭವಿಷ್ಯ ನಿಧಿ (ಇಪಿಎಫ್) ಹಣವನ್ನು ಜೂನ್ ತಿಂಗಳಿನಿಂದ ಎಟಿಎಂ ಮತ್ತು ಯುಪಿಐ ಮೂಲಕ ವಾಪಸ್ ಪಡೆಯುವ ಆಯ್ಕೆಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಎಟಿಎಂ ಆಥವ ಯುಪಿಐ ಮೂಲಕ ಪಿಎಫ್ ವಾಪಸ್ ಪಡೆಯುವ ಆಯ್ಕೆಯನ್ನು ಜಾರಿಗೊಳಿಸಲು ಇಪಿಎಫ್ಒ ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಇದಕ್ಕೆ ಒಪ್ಪಿಗೆ ಸಿಕ್ಕಿದ್ದು, ಮೇ ಅಂತ್ಯ ಅಥವ ಜೂನ್ ಮೊದಲ ವಾರದಲ್ಲಿ ಈ ಆಯ್ಕೆ ಉದ್ಯೋಗಿಗಳಿಗೆ ಸಿಗಲಿದೆ.
ಪಿಎಫ್ ವಾಪಸ್ ಪಡೆಯುವುದು ಸುಲಭ: ಇನ್ನು ಮುಂದೆ ಪಿಎಫ್ ಪಡೆಯಲು ಉದ್ಯೋಗಿಗಳು ಕಛೇರಿಗೆ ಅಲೆದಾಟ ನಡೆಸಬೇಕಿಲ್ಲ ಅಥವ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿ ಕಾಯಬೇಕಿಲ್ಲ. ತಮ್ಮ ಪಿಎಫ್ ಖಾತೆಯ ಬಾಕಿಯನ್ನು ನೇರವಾಗಿ ಯುಪಿಐನಲ್ಲಿಯೇ ನೋಡಲು ಅವಕಾಶ ಸಿಗಲಿದೆ.
ಈ ವರ್ಷದ ಮೇ ಅಂತ್ಯ ಅಥವ ಜೂನ್ನಲ್ಲಿ ಗ್ರಾಹಕರು ಯುಪಿಐ ಅಥವ ಎಟಿಎಂ ಮೂಲಕ ಪಿಎಫ್ ಹಣವನ್ನು ವಾಪಸ್ ಪಡೆಯಬಹುದು. ಸ್ವಯಂ ಚಾಲಿತ ವ್ಯವಸ್ಥೆ ಇದಾಗಿದ್ದು, ತಮ್ಮ ಆದ್ಯತೆಯ ಬ್ಯಾಂಕ್ ಖಾತೆ ಮೂಲಕ ಉದ್ಯೋಗಿಗಳು 1 ಲಕ್ಷ ರೂ. ತನಕ ಪಿಎಫ್ ಹಣ ವರ್ಗಾವಣೆ, ವಾಪಸ್ ಪಡೆಯಲು ಅವಕಾಶವಿದೆ ಎಂದು ಸುಮಿತ್ರಾ ದಾವ್ರಾ ಹೇಳಿದ್ದಾರೆ.

ಯುಪಿಐ ಅಥವ ಬ್ಯಾಂಕ್ ಎಟಿಎಂಗಳ ಮೂಲಕ ಉದ್ಯೋಗಿಗಳು ಅನಾರೋಗ್ಯ, ವಸತಿ, ಶಿಕ್ಷಣ ಮತ್ತು ಮದುವೆ ಕಾರಣಕ್ಕೆ ಪಿಎಫ್ ಹಣವನ್ನು ಹಿಂಪಡೆಯಬಹುದು. ಡಿಲಿಟಲೀಕರಣದ ಭಾಗವಾಗಿ ಇಪಿಎಫ್ಒ ಮಹತ್ವದ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಇದಕ್ಕಾಗಿ 120ಕ್ಕೂ ಹೆಚ್ಚು ಡೇಟಾಬೇಸ್ಗಳನ್ನು ಏಕೀಕರಣಗೊಳಿಸುವ ಮೂಲಕ ಪಿಎಫ್ ಹಿಂಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ ಎಂದು ಹೇಳಿದ್ದಾರೆ.
ಇಪಿಎಫ್ಒನ ಇತ್ತೀಚಿನ ಹಲವು ಕ್ರಮಗಳಿಂದ ಉದ್ಯೋಗಿಗಳಿಗೆ ಸಹಾಯಕವಾಗಿದೆ. ಯಾವುದೇ ಬ್ಯಾಂಕ್ ಎಟಿಎಂನಿಂದ ಪಿಎಫ್ ವಾಪಸ್ ಪಡೆಯುವ ಆಯ್ಕೆಯನ್ನು ನೀಡಲಾಗುತ್ತದೆ. ಪಿಎಫ್ ಖಾತೆಯಲ್ಲಿ ಇರುವ ಹಣದ ಬಗ್ಗೆ ಉದ್ಯೋಗಿಗಳಿಗೆ ಮೊಬೈಲ್ನಲ್ಲಿಯೇ ಮಾಹಿತಿ ಸಿಗಲಿದ್ದು, ಅನುಕೂಲವಾಗಲಿದೆ ಎಂದು ಸುಮಿತ್ರಾ ದಾವ್ರಾ ವಿವರಣೆ ನೀಡಿದ್ದಾರೆ.
2024ರಲ್ಲಿಯೇ ಕೇಂದ್ರ ಸರ್ಕಾರ ಆಧಾರ್ ಮೊಬೈಲ್ ನಂಬರ್ ಆಧಾರಿತ ಒಟಿಪಿ ಮೂಲಕ ಪಿಎಫ್ ವಾಪಸ್ ಪಡೆಯುವ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗುತ್ತದೆ ಎಂದು ಹೇಳಿತ್ತು. ಅಲ್ಲದೇ ಉದ್ಯೋಗಿಗಳ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಸಕ್ರಿಯಗೊಳಿಸುವಿಕೆ ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುವಂತೆ ಇಪಿಎಫ್ಒ ವಲಯ ಮತ್ತು ಪ್ರಾದೇಶಿಕ ಕಚೇರಿಗಳಿಗೆ ಸೂಚನೆ ನೀಡಿತ್ತು.
ಆಧಾರ್ ನಂಬರ್ ಅನ್ನು ಗುರುತಿನ ದಾಖಲೆಯಾಗಿ ಬಳಕೆ ಮಾಡುವ ಮೂಲಕ ಪಿಎಫ್ ವಾಪಸ್ ಪಡೆಯುವ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗುತ್ತಿದೆ. ಇದರಿಂದಾಗಿ ಫಲಾನುಭವಿಗಳು ತಮ್ಮ ಹಕ್ಕುಗಳನ್ನು ಸುಲಭವಾಗಿ ಪಡೆಯಬಹುದು. ಆಧಾರ್ ಆಧಾರಿತ ಪರಿಶೀಲನೆಯು ಇರುವ ಕಾರಣ ಈ ವ್ಯವಸ್ಥೆ ಪಾರದರ್ಶಕವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications