ಯುಪಿ: 35 ಕೋಟಿ ಸಸಿ ನೆಡುವ ಮೂಲಕ ದಾಖಲೆ ಸೃಷ್ಟಿಸಲಿರುವ ಯೋಗಿ ಸರ್ಕಾರ

ಪ್ರತೀ ಬಾರಿ ಒಂದಲ್ಲಾ ಒಂದು ಯೋಜನೆ ಪ್ರಯೋಗಗಳ ಮೂಲಕ ಜನರಿಗೆ ಹತ್ತಿರವಾಗುತ್ತಿರುವ ಉತ್ತರಪ್ರದೇಶ ಸರ್ಕಾರ ಈ ಬಾರಿ ಮತ್ತೊಂದು ಯೋಜನೆಯೊಂದಿಗೆ ಜನರಿಗೆ ಹತ್ತಿರವಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಮತ್ತೊಮ್ಮೆ ದಾಖಲೆ ಸೃಷ್ಟಿಸಲು ಹೊರಟಿದೆ. ಈ ಬಾರಿ ಜುಲೈನಲ್ಲಿ 35 ಕೋಟಿ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಮುಂದಾಗಿದೆ. ಈ ಬಾರಿ ಗಿಡ ನೆಡುವ ಕಾರ್ಯಕ್ಕೆ ಅರಣ್ಯ ಇಲಾಖೆಯನ್ನು ನೋಡಲ್ ಇಲಾಖೆಯನ್ನಾಗಿ ಮಾಡಲಾಗಿದೆ.

ಈಗಾಗಲೇ ಗಿಡ ನೆಡುವ ಅಭಿಯಾನಕ್ಕೆ ಸಿದ್ಧತೆ ಆರಂಭಿಸಲಾಗಿದೆ. ಈ ವರ್ಷ ಒಂದೇ ದಿನದಲ್ಲಿ 35 ಕೋಟಿ ಮರಗಳನ್ನು ನೆಡುವ ಮೂಲಕ ದಾಖಲೆಯನ್ನು ರಚಿಸಲು ರಾಜ್ಯ ಸಜ್ಜಾಗಿದೆ. ಇದಕ್ಕಾಗಿ ನಿಖರವಾದ ದಿನಾಂಕವನ್ನು ನಿಗದಿಪಡಿಸದಿದ್ದರೂ, ಜುಲೈನಲ್ಲಿ ಯಾವುದೇ ದಿನ ಈ ಕಾರ್ಯಕ್ಕೆ ಚಾಲನೆ ನೀಡಬಹುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

UP: Uttar Pradesh government has planned to plant 35 crore trees

ಈ ಅಭಿಯಾನದಲ್ಲಿ 27 ಸರ್ಕಾರಿ ಇಲಾಖೆಗಳು ಭಾಗವಹಿಸಲಿವೆ. ಅರಣ್ಯ ಇಲಾಖೆ ಗಿಡ ನೆಡಲು ನೋಡಲ್ ಇಲಾಖೆಯಾಗಿದೆ. ಯೋಗಿ ಸರ್ಕಾರ ತನ್ನ ಹಿಂದಿನ ಸರ್ಕಾರದಿಂದ ಪ್ರತಿ ವರ್ಷ ಮರ ನೆಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದು, ಇದುವರೆಗೆ ರಾಜ್ಯದಲ್ಲಿ 100 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಇದು ಕಳೆದ ಎಂಟು ವರ್ಷಗಳಲ್ಲಿ ರಾಜ್ಯದ ಹಸಿರು ಹೊದಿಕೆಯನ್ನು 8.8% ರಿಂದ 9.2% ಕ್ಕೆ ಹೆಚ್ಚಿಸಿದೆ. ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ (SOFR) ಪ್ರಕಾರ, 2013 ರಲ್ಲಿ ಯುಪಿಯಲ್ಲಿ ಹಸಿರು ಹೊದಿಕೆಯು 8.8% ಆಗಿತ್ತು. ಆದರೀಗ ಅದು 9.2% ಕ್ಕೆ ಹೆಚ್ಚಾಗಿದೆ.

2019ರ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಹಸಿರು ಹೊದಿಕೆಯು 91 ಚದರ ಕಿಲೋಮೀಟರ್ಗಳಷ್ಟು ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ. 2030ರ ವೇಳೆಗೆ ಇದನ್ನು ಶೇ 15ಕ್ಕೆ ಹೆಚ್ಚಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಯೋಗಿ ಸರ್ಕಾರವು ತನ್ನ ಎರಡನೇ ಅವಧಿಯಲ್ಲಿ ಐದು ವರ್ಷಗಳಲ್ಲಿ 175 ಕೋಟಿ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ. ಅಂದರೆ ವರ್ಷಕ್ಕೆ 35 ಕೋಟಿ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಯೋಜನೆಯಡಿ ಕಳೆದ ವರ್ಷ 35 ಕೋಟಿ ಗಿಡಗಳನ್ನು ನೆಡಲಾಗಿದ್ದು, ಈ ವರ್ಷ 35 ಕೋಟಿ ಗಿಡಗಳನ್ನು ನೆಡಲಾಗುವುದು. ಕೃಷಿ-ಹವಾಮಾನ ವಲಯಕ್ಕೆ ಅನುಗುಣವಾಗಿ ಸಸಿ ನೆಡುವಿಕೆ ಮಾಡಲಾಗುತ್ತದೆ. ವಿವಿಧ ಜಿಲ್ಲೆಗಳಲ್ಲಿ ಸಾಗುವಳಿ ಮಾಡಲು 29 ಜಾತಿಗಳನ್ನು ಗುರುತಿಸಲಾಗಿದೆ. ಆಲದ, ಪೀಪಲ್, ಪಾಕರ್, ಅರ್ಜುನ, ಆಮ್ಲ, ಸಹಜನ್, ಕಥಲ್, ಬೈಲ ಮತ್ತಿತರ ಜಾತಿಯ ಸಸಿಗಳನ್ನು ನೆಡಲಾಗುವುದು.

ಯುಪಿ ಅಭಿವೃದ್ಧಿಗೆ ರೈತರ ಪರಿಶ್ರಮವೇ ಕಾರಣ- ಸಿಎಂ

ರೈತರ ಪರಿಶ್ರಮದಿಂದ ಉತ್ತರ ಪ್ರದೇಶ ಇಂದು ರಾಷ್ಟ್ರದಲ್ಲಿ ಅತ್ಯಂತ ಆರ್ಥಿಕವಾಗಿ ಶಕ್ತಿಶಾಲಿ ರಾಜ್ಯವಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ. ಅದು ಯಶಸ್ವಿಯಾಗಬೇಕಾದರೆ ಬಹುತೇಕ ಸಂಸದರು ಬಿಜೆಪಿಯವರೇ ಆಗಬೇಕು. ಹಾಗಾಗಿ ಹೆಚ್ಚು ಸಂಸದ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶವನ್ನು ಬಿಜೆಪಿ ಟಾರ್ಗೆಟ್ ಮಾಡಿದೆ. ಬಿಜೆಪಿ ಈಗಾಗಲೇ ಇಲ್ಲಿ ಆಡಳಿತ ನಡೆಸುತ್ತಿರುವುದರಿಂದ ಪಕ್ಷದ ಸಾಧನೆಗಳನ್ನು ಜನರಲ್ಲಿ ಬಿತ್ತರಿಸಲು ಮುಂದಾಗಿದೆ.

ಆ ನಿಟ್ಟಿನಲ್ಲಿ ಪ್ರಧಾನಿಯವರು ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರನ್ನು ಸಂಪರ್ಕಿಸುವ ಮೆಗಾ ಅಭಿಯಾನವನ್ನು ಕೈಗೊಂಡಿದ್ದಾರೆ. ಈ ಅಭಿಯಾನದ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 'ಡಬಲ್ ಇಂಜಿನ್ ಸರ್ಕಾರವನ್ನು ಕೊಮಡಾಡಿದರು. ಕಳೆದ 9 ವರ್ಷಗಳಲ್ಲಿ ಬಿಜೆಪಿ ಸರ್ಕಾರ ದೇಶದಾದ್ಯಂತ ರೈತರಿಗೆ ಕಲ್ಯಾಣ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ತಂದಿದೆ' ಎಂದು ಡಬಲ್ ಇಂಜಿನ್ ಸರ್ಕಾರವನ್ನು ಹೊಗಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+