ಮಕ್ಕಳ ಶಿಕ್ಷಣದ ಸಲುವಾಗಿ ಕಿಡ್ನಿ ಮಾರಲು ಮುಂದಾದ ಮಹಾತಾಯಿ
ಆಗ್ರಾ, ಜೂನ್ 1: ಮಕ್ಕಳ ಸಲುವಾಗಿ ತಾಯಿ ಎಂಥ ತ್ಯಾಗಕ್ಕೂ ಸಿದ್ಧಳಾಗುತ್ತಾಳೆ ಅನ್ನೋದು ಕಾಲಾಂತರದಿಂದಲೂ ಸಾಬೀತಾಗುತ್ತಿರುವ ವಿಚಾರ. ಉತ್ತರಪ್ರದೇಶದಲ್ಲಿನ ಆಗ್ರಾದ ರೋಹ್ತಾ ವಲಯದಲ್ಲಿ ತನ್ನ ನಾಲ್ಕು ಮಕ್ಕಳ ವಿದ್ಯಾಭ್ಯಾಸ ಹಾಗೂ ಭವಿಷ್ಯಕ್ಕಾಗಿ ಮಹಿಳೆಯೊಬ್ಬರು ಕಿಡ್ನಿಯನ್ನೇ ಮಾರಾಟಕ್ಕೆ ಇಟ್ಟಿದ್ದಾರೆ.
ಸಾಮಾಜಿಕ ಸಂಘಟನೆಯೊಂದರ ಸಹಾಯದಿಂದ ಆರತಿ ಶರ್ಮಾ ಸಾಮಾಜಿಕ ಜಾಲ ತಾಣದಲ್ಲಿ ಪತ್ರವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ದೇಶದಲ್ಲಿ ಅಗತ್ಯ ಇರುವ ಯಾರಿಗಾದರೂ ಕಿಡ್ನಿ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಆರತಿ ಅವರಿಗೆ ಮೂವರು ಹೆಣ್ಣು ಹಾಗೂ ಒಂದು ಗಂಡು ಮಗು.[ಅಣ್ಣನಿಗೆ ಕಿಡ್ನಿ ದಾನ ಮಾಡಿದ ತಮ್ಮ ಅನಿಲ್ - ಸಂದರ್ಶನ]

ಸಿಬಿಎಸ್ ಇ ಶಾಲೆಯಲ್ಲಿ ಓದುತ್ತಿರುವ ಈ ಮಕ್ಕಳ ಶಾಲೆ ಫೀ ಕಟ್ಟುವುದಕ್ಕೆ ಆಗಿಲ್ಲ. ಆಗ ಶಾಲೆ ಆಡಳಿತ ಮಂಡಳಿ ಹೊರಗೆ ಕಳುಹಿಸಿದೆ. ಆರತಿ ಅವರ ಪತಿಯದು ರೆಡಿಮೇಡ್ ಬಟ್ಟೆ ವ್ಯಾಪಾರ. ಅಪನಗದೀಕರಣ ಘೋಷಣೆ ಆಗುವವರೆಗೆ ಈ ಕುಟುಂಬದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಇರಲಿಲ್ಲ. ಆದರೆ ಆ ನಂತರ ತೊಂದರೆಗೆ ಸಿಕ್ಕಿಕೊಂಡು, ಶಾಲೆಗೆ ಫೀ ಕಟ್ಟಲು ಸಾಧ್ಯವಾಗಿಲ್ಲ.
ಸ್ಥಳೀಯ ಅಧಿಕಾರಿಗಳನ್ನು ಬೇಟಿಯಾಗಿ ಮಕ್ಕಳಿಗೆ ಸಹಾಯ ಮಾಡುವುದಕ್ಕೆ ಆರತಿ ಕೇಳಿಕೊಂಡಿದ್ದಾರೆ. 'ಯೋಗ್ಯತೆಗೆ ತಕ್ಕಂತೆ ಮಕ್ಕಳನ್ನು ಓದಿಸಬೇಕು' ಎಂಬ ಒರಟು ಉತ್ತರಗಳೇ ಅವರಿಗೆ ಎದುರಾಗಿವೆ. ಕಡೆಗೆ ಮುಖ್ಯಮಂತ್ರಿ ಆದಿತ್ಯನಾಥ್ ರನ್ನೇ ಭೇಟಿಯಾಗಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಆದರೆ ಇನ್ನೂ ಯಾವ ನೆರವೂ ಸಿಕ್ಕಿಲ್ಲ.[ತೀರಿಕೊಂಡ ತಾಯಿಯ ಎದೆಹಾಲು ಕುಡಿಯಲು ಯತ್ನಿಸುತ್ತಿದ್ದ ಮಗು]
Agra (UP): Mother offers to sell kidney for her 4 kid's studies, claims demonetisation hit their business & CM didn't help despite assurance pic.twitter.com/VdBazz6Mb6
— ANI UP (@ANINewsUP) 1 June 2017
ಅಸಹಾಯಕರಾದ ಆರತಿ ಸಂಯಮ ಕಳೆದುಕೊಂಡು, ಬೇಟಿ ಬಚಾವೋ-ಬೇಟಿ ಪಡಾವೋ ಅನ್ನೋದೆಲ್ಲ ಬರೀ ಘೋಷಣೆ. ವಾಸ್ತವದಲ್ಲಿ ಯಾರೂ ಏನೂ ಮಾಡಲ್ಲ. ಎಲ್ಲರೂ ಭ್ರಷ್ಟರೇ. ಮತಕ್ಕಾಗಿ ಮಾತನಾಡುತ್ತಾರೆ ಅಷ್ಟೇ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಆರತಿ ಅವರ ಮಕ್ಕಳಿಗೆ ಐಎಎಸ್ ಆಗಿ, ಈ ದೇಶಕ್ಕಾಗಿ ಸೇವೆ ಮಾಡುವ ಕನಸಿದೆ. ಆದರೆ ಶಿಕ್ಷಣ ಪಡೆಯುವುದಕ್ಕೇ ಎಷ್ಟೆಲ್ಲ ಶ್ರಮ ಪಡಬೇಕಿದೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications