ಉ.ಪ್ರ ಸಿಎಂ ಕುರ್ಚಿಗೆ ಕಾದಾಟ: ಯೋಗಿ, ಮೌರ್ಯ ಬಣ ಪ್ರತಿಭಟನೆ
ಉತ್ತರಪ್ರದೇಶ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆದಿರುವ ಪೈಪೋಟಿ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಶನಿವಾರ ಸಂಜೆಯೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಚೇರಿಯಿಂದ ಸುದ್ದಿ ಬಂದಿದೆ.
ಲಕ್ನೋ, ಮಾರ್ಚ್ 18: ಉತ್ತರಪ್ರದೇಶ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆದಿರುವ ಪೈಪೋಟಿ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಶನಿವಾರ ಸಂಜೆಯೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಚೇರಿಯಿಂದ ಸುದ್ದಿ ಬಂದಿದೆ.
ಈ ನಡುವೆ ರೇಸಿನಲ್ಲಿ ಮುಂಚೂಣಿಯಲ್ಲಿರುವ ಕೇಶವ್ ಪ್ರಸಾದ್ ಮೌರ್ಯ, ಯೋಗಿ ಆದಿತ್ಯನಾಥ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಯೋಗಿ ಆದಿತ್ಯನಾಥ್ ಅವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಮುಂದಾಗಿದ್ದಾರೆ.[ಮುಖ್ಯಮಂತ್ರಿ ಯಾರೆಂದು ತಿಳಿಯಲು ಸಂಜೆವರೆಗೆ ತಡೀರಿ]
ಶನಿವಾರ
ಸಂಜೆ
4
ಗಂಟೆಗೆ
ಬಿಜೆಪಿ
ಶಾಸಕಾಂಗ
ಸಭೆ
ನಿಗದಿಯಾಗಿದೆ.
ದೆಹಲಿಯಿಂದ
ಹಿರಿಯ
ನಾಯಕರು
ಈಗಾಗಲೇ
ಲಕ್ನೋದಲ್ಲಿ
ಬೀಡು
ಬಿಟ್ಟಿದ್ದಾರೆ.
ವೆಂಕಯ್ಯನಾಯ್ಡು
ಅವರು
ಸರಣಿ
ಸಭೆಗಳನ್ನು
ನಡೆಸುತ್ತಿದ್ದಾರೆ.
[ಮೋದಿ
ವಿರುದ್ಧ
ಸೆಣೆಸುವ
ಮೈತ್ರಿಕೂಟಕ್ಕೆ
ಮುಂದಾಳು
ಯಾರು?]
ಈ ನಡುವೆ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರ ಹೆಸರು ಸಿಎಂ ಸ್ಥಾನಕ್ಕೆ ಕೇಳಿ ಬಂದಿತ್ತು. ಆದರೆ, ನಾನು ಸಿಎಂ ಸ್ಥಾನದ ರೇಸಿನಲ್ಲಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. [ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಮನೋಜ್ ಸಿನ್ಹಾ!]
Lucknow: Yogi Adityanath's supporters demonstrate demanding that Adityanath be made Chief Minister of Uttar Pradesh pic.twitter.com/kDmVWpGfiT
— ANI UP (@ANINewsUP) March 18, 2017
ಶಾಸಕಾಂಗ
ಸಭೆ
ನಂತರವಷ್ಟೇ
ಎಲ್ಲಾ
ಪ್ರಶ್ನೆಗಳಿಗೂ
ಉತ್ತರ
ಸಿಗಲಿದೆ
ಎಂದು
ಬಿಜೆಪಿ
ಹೈಕಮಾಂಡ್
ಕೂಡಾ
ಹೇಳಿದೆ.
ಕಳೆದ
ಕೆಲ
ದಿನಗಳಿಂದ
ಕೇಂದ್ರ
ಸಚಿವ
ರಾಜನಾಥ್
ಸಿಂಗ್
ಸೇರಿದಂತೆ
ಅನೇಕ
ಮುಖಂಡರ
ಹೆಸರುಗಳು
ಸಿಎಂ
ಸ್ಥಾನಕ್ಕೆ
ಕೇಳಿ
ಬಂದಿದೆ.
Lucknow: UP BJP Chief Keshav Prasa Maurya's supporters stage demonstration demanding that Maurya be made the CM of UP pic.twitter.com/qwAR0WsJTl
— ANI UP (@ANINewsUP) March 18, 2017
ಪ್ರಕಾಶ್ ಪಂತ್, ಮದನ್ ಕೌಶಿಕ್, ಯಶ್ಪಾಲ್ ಆರ್ಯ, ಸುಬೋಧ್ ಉನಿಯಾಲ್, ರೇಖಾ ಆರ್ಯ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ.