ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಪನ್ ದಾಸ್‌ಗುಪ್ತಾ ರಾಜ್ಯಸಭೆಗೆ ಮರು ನಾಮಕರಣ

|
Google Oneindia Kannada News

ನವದೆಹಲಿ, ಜೂನ್ 01; ಸ್ವಪನ್ ದಾಸ್‌ಗುಪ್ತಾ ಮತ್ತು ವಕೀಲ ಮಹೇಶ್ ಜೆಠ್ಮಲಾನಿಯನ್ನು ಕೇಂದ್ರ ಸರ್ಕಾರ ರಾಜ್ಯಸಭೆ ಸದಸ್ಯರಾಗಿ ನಾಮಕರಣ ಮಾಡಿದೆ. 24/4/2022ರ ತನಕ ಇಬ್ಬರ ರಾಜ್ಯಸಭೆ ಸದಸ್ಯತ್ವದ ಅವಧಿ ಇದೆ.

ಮಾಜಿ ಪತ್ರಕರ್ತ ಸ್ವಪನ್ ದಾಸ್‌ಗುಪ್ತಾ ಕೆಲವು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿ ಟಿಕೆಟ್‌ನಿಂದ ಪಶ್ಚಿಮ ಬಂಗಾಳ ವಿಧಾಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಈಗ ಅವರನ್ನು ರಾಜ್ಯಸಭೆಗೆ ಮರು ನಾಮರಕರಣ ಮಾಡಲಾಗಿದೆ.

ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೇರಿದ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೇರಿದ ಮಲ್ಲಿಕಾರ್ಜುನ ಖರ್ಗೆ

ರಘುನಾಥ್ ಮೊಹಾಪಾತ್ರ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಖ್ಯಾತ ವಕೀಲರಾದ ಮಹೇಶ್ ಜೆಠ್ಮಲಾನಿ ನಾಮಕರಣ ಮಾಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ. ಸರ್ಕಾರ ಕಳಿಸಿದ್ದ ಎರಡು ನಾಮ ನಿರ್ದೇಶನಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

ರಾಜ್ಯಸಭೆ ಸುದ್ದಿ: ಲಡಾಖ್ ಗಡಿ ಸ್ಥಿತಿ ಬಗ್ಗೆ ರಾಜನಾಥ್ ಸಿಂಗ್ ಸಂದೇಶ ರಾಜ್ಯಸಭೆ ಸುದ್ದಿ: ಲಡಾಖ್ ಗಡಿ ಸ್ಥಿತಿ ಬಗ್ಗೆ ರಾಜನಾಥ್ ಸಿಂಗ್ ಸಂದೇಶ

Union Govt Renominated Swapan Dasgupta To Rajya Sabha

ವಿವಿಧ ರಾಜ್ಯಗಳ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರು ಆಯ್ಕೆಯಾಗುತ್ತಾರೆ. ಸಾಹಿತ್ಯ, ವಿಜ್ಞಾನ, ಕ್ರೀಡೆ, ಕಲೆ ಮತ್ತು ಸಾಮಾಜ ಸೇವೆಯಂತಹ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡಿದ ಸಾಧಕರನ್ನು ಸರ್ಕಾರ ನೇರವಾಗಿ ನಾಮ ನಿರ್ದೇಶನ ಮಾಡಲು ಅವಕಾಶವಿದೆ.

'ಪಶ್ಚಿಮ ಬಂಗಾಳ ರಾಜ್ಯಪಾಲ ಧಂಕರ್ ನಿವೃತ್ತರಾದ ಬಳಿಕ ಜೈಲಿಗಟ್ಟಬಹುದು'- ಟಿಎಂಸಿ ಸಂಸದ 'ಪಶ್ಚಿಮ ಬಂಗಾಳ ರಾಜ್ಯಪಾಲ ಧಂಕರ್ ನಿವೃತ್ತರಾದ ಬಳಿಕ ಜೈಲಿಗಟ್ಟಬಹುದು'- ಟಿಎಂಸಿ ಸಂಸದ

ಭಾರತದ ಸಂವಿಧಾನದ 80ನೇ ಪರಿಚ್ಛೇಧ (1) ರ ಉಪ-ಷರತ್ತು (ಎ) ಅಡಿ ಇರುವ ಅಧಿಕಾರವನ್ನು ಉಪಯೋಗಿಸಿ ಸ್ವಪನ್ ದಾಸ್‌ಗುಪ್ತಾರನ್ನು ಮರುನಾಮಕರಣ ಮಾಡಲಾಗಿದೆ.

English summary
Former journalist Swapan Dasgupta and Noted lawyer Mahesh Jethmalani nominated to Rajya Sabha by the union government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X