Get Updates
Get notified of breaking news, exclusive insights, and must-see stories!

Nipah Virus: ನಿಫಾ ವೈರಸ್ ಪ್ರಕರಣದ ತನಿಖೆಯಲ್ಲಿ ಕೇರಳಕ್ಕೆ ಸಹಾಯ ನೀಡಲಿದೆ ಕೇಂದ್ರ ಸರ್ಕಾರ

ನವದೆಹಲಿ, ಜುಲೈ. 21: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಪತ್ತೆಯಾದ ನಿಫಾ ವೈರಸ್ ಪ್ರಕರಣದ ತನಿಖೆಗೆ ಕೇಂದ್ರ ಸರ್ಕಾರ ಸಹಾಯ ನೀಡಲಿದೆ. ಸಾಂಕ್ರಾಮಿಕ ರೋಗದ ಸಂಪರ್ಕಗಳನ್ನು ಗುರುತಿಸುವುದು ಮತ್ತು ತಾಂತ್ರಿಕ ನೆರವು ನೀಡಲು ಕೇರಳಕ್ಕೆ ಸಹಾಯ ಮಾಡಲು ಸರ್ಕಾರವು ಬಹುಸದಸ್ಯ ಜಂಟಿ ಪ್ರತಿಕ್ರಿಯೆ ತಂಡವನ್ನು ನಿಯೋಜಿಸಲಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಭಾನುವಾರ ನೀಡಿರುವ ಹೇಳಿಕೆಯಲ್ಲಿ ಮಲ್ಲಪುರಂ ಜಿಲ್ಲೆಯ 14 ವರ್ಷದ ಬಾಲಕನಿಗೆ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ ಇರುವುದು ಪತ್ತೆಯಾಗಿತ್ತು. ಕೋಝಿಕ್ಕೋಡ್‌ನ ಉನ್ನತ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸುವ ಮೊದಲು ಪೆರಿಂತಲ್ಮನ್ನಾದಲ್ಲಿನ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು ಎಂದಯ ಹೇಳಿದೆ.

Union government to deploy team to support Kerala in Nipah virus case

ನಿಫಾ ವೈರಸ್ ಕಾಯಿಲೆಗೆ ಬಾಲಕ ಬಲಿಯಾಗಿದ್ದಾರೆ. ಅವರ ಮಾದರಿಗಳನ್ನು ಪುಣೆ ಮೂಲದ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಇದು ನಿಫಾ ವೈರಸ್ ಸೋಂಕು ಎಂಬುದನ್ನು ದೃಢಪಡಿಸಿದೆ ಎಂದು ಅದು ಹೇಳಿದೆ. ಕೇರಳದಲ್ಲಿ ನಿನ್ನೆಯಷ್ಟೇ ನಿಫಾ ವೈರಸ್ ಪತ್ತೆಯಾಗಿತ್ತು. ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕ ನಿಫಾ ಭಾನುವಾರ ಕೋಝಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಬಾವಲಿಗಳು ನಿಫಾ ವೈರಸ್‌ನ ಸಾಮಾನ್ಯ ಮೂಲವಾಗಿದ್ದು, ಬಾವಲಿ ಕಚ್ಚಿದ ಅಥವಾ ತಿಂದು ಬಿಸಾಕಿದ ಹಣ್ಣುಗಳನ್ನು ಆಕಸ್ಮಿಕವಾಗಿ ಸೇವಿಸುವುದರಿಂದ ಮನುಷ್ಯರು ಈ ನಿಫಾ ಸೋಂಕಿಗೆ ಒಳಗಾಗಬಹುದು. ನಿಫಾ ವೈರಸ್ ಕಾಯಿಲೆ ಏಕಾಏಕಿ ಕೇರಳದಲ್ಲಿ ಈ ಹಿಂದೆ ವರದಿಯಾಗಿದೆ. 2023 ರಲ್ಲಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗಿತ್ತು ಎಂದು ಹೇಳಿಕೆ ತಿಳಿಸಿದೆ.

ನಿಫಾ ವೈರಸ್‌ಗೆ ಬಲಿಯಾದ ಬಾಲಕನ ಕುಟುಂಬ ಮತ್ತು ಅವರ ನೆರೆಹೊರೆಯಲ್ಲಿ ಸಕ್ರಿಯ ಪ್ರಕರಣಗಳ ಹುಡುಕಾಟದಂತಹ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ತಕ್ಷಣವೇ ಜಾರಿಗೆ ತರಲು ಸಚಿವಾಲಯವು ರಾಜ್ಯಕ್ಕೆ ಸಲಹೆ ನೀಡಿದೆ. ಪ್ರಕರಣವು ಪತ್ತೆಯಾದ ಪ್ರದೇಶಗಳಲ್ಲಿ ಎಲ್ಲಾ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಳೆದ 12 ದಿನಗಳಲ್ಲಿ ರೋಗಿಯೊಂದಿಗೆ ಸಂಪರ್ಕಕ್ಕೆ ಬಂದ ಜನರನ್ನು ಪತ್ತೆಹಚ್ಚಲು ಪ್ರಾರಂಭಿಸಲು ಮತ್ತು ಅವರಿಗೆ ಕಟ್ಟುನಿಟ್ಟಾದ ಕ್ವಾರಂಟೈನ್ ಮತ್ತು ಶಂಕಿತರನ್ನು ಪ್ರತ್ಯೇಕಿಸಲು ಕೇರಳಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

ಆರೋಗ್ಯ ಸಚಿವಾಲಯದ 'ಒನ್ ಹೆಲ್ತ್' ಮಿಷನ್‌ನ ಬಹು ಸದಸ್ಯ ಜಂಟಿ ಪ್ರತಿಕ್ರಿಯೆ ತಂಡವನ್ನು ಪ್ರಕರಣದ ತನಿಖೆಯಲ್ಲಿ ರಾಜ್ಯಕ್ಕೆ ಸಹಾಯ ಮಾಡಲು ಸಾಂಕ್ರಾಮಿಕ ರೋಗ ಸಂಪರ್ಕಗಳನ್ನು ಗುರುತಿಸಲು ಮತ್ತು ತಾಂತ್ರಿಕ ನೆರವು ನೀಡಲು ನಿಯೋಜಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.

ಇನ್ನು, ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಪ್ರಕಾರ, ಬಾಲಕನಿಗೆ ಭಾನುವಾರ ಬೆಳಗ್ಗೆ 10.50 ಕ್ಕೆ ತೀವ್ರ ಹೃದಯಾಘಾತ ಉಂಟಾಗಿತ್ತು. ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. "ಬಾಲಕ ವೆಂಟಿಲೇಟರ್ ಬೆಂಬಲದಲ್ಲಿದ್ದರು. ಇಂದು ಬೆಳಗ್ಗೆ ಮೂತ್ರದ ಉತ್ಪಾದನೆಯು ಕಡಿಮೆಯಾಗಿತ್ತು. ತೀವ್ರ ಹೃದಯಾಘಾತ ನಂತರ, ಅವರನ್ನು ಉಳಿಸುವ ಎಲ್ಲಾ ಪ್ರಯತ್ನಗಳು ವಿಫಲವಾದವು. ಅವರು 11.30 ಕ್ಕೆ ನಿಧನರಾದರು" ಎಂದು ತಿಳಿಸಿದ್ದಾರೆ.

ಈ ಹಿಂದೆ ಕೇರಳದಲ್ಲಿ 2018, 2019, 2021 ಮತ್ತು 2023 ರಲ್ಲಿ ನಿಫಾ ವೈರಸ್ ಪ್ರಕರಣಗಳು ಏಕಾಏಕಿ ವರದಿಯಾಗಿವೆ. ಕೋಝಿಕ್ಕೋಡ್, ವಯನಾಡ್, ಇಡುಕ್ಕಿ, ಮಲಪ್ಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಬಾವಲಿಗಳಲ್ಲಿ ನಿಫಾ ವೈರಸ್ ಪತ್ತೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+