ನೋಟ್ ಬ್ಯಾನ್ಗೆ 2 ವರ್ಷ: ಅರುಣ್ ಜೇಟ್ಲಿ ನೀಡಿದರು ಅಂಕಿ-ಅಂಶ
ನವದೆಹಲಿ, ನವೆಂಬರ್ 08: ನೋಟು ರದ್ಧತಿ ನಿರ್ಧಾರಕ್ಕೆ ಇಂದು ಎರಡು ವರ್ಷ ಆಗಿರುವ ಕಾರಣ ಕೇಂದ್ರ ಹಣಕಾಸು ಸಚಿವ ಅಪನಗದೀಕರಣದಿಂದ ಆಗಿರುವ ಲಾಭಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
ನೋಟು ರದ್ಧತಿಯ ಬಳಿಕ 2018-19 ನೇ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹವು ಭಾರಿ ಹೆಚ್ಚಳ ಕಂಡಿದೆ. ಕಳೆದ ಹಣಕಾಸು ವರ್ಷಕ್ಕಿಂತಲೂ ಈ ಬಾರಿ 20.2% ಪಟ್ಟು ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಅರುಣ್ ಜೇಟ್ಲಿ ಮಾಹಿತಿ ನೀಡಿದರು.
ಆದಾಯ ತೆರಿಗೆ ಮಾತ್ರವಲ್ಲದೆ ಕಾರ್ಪೊರೇಟ್ ತೆರಿಗೆ ಕೂಡ ಭಾರಿ ಹೆಚ್ಚಳ ಕಂಡಿದ್ದು, ಕಳೆದ ವರ್ಷಕ್ಕಿಂತಲೂ ಈ ಹಣಕಾಸು ವರ್ಷದಲ್ಲಿ 19.5% ಪ್ರತಿಶತ ಹೆಚ್ಚಳವಾಗಿದೆ. ನೇರ ತೆರಿಗೆ ಸಂಗ್ರಹದಲ್ಲಿ ಮೊದಲ ವರ್ಷ 6.6% ಹೆಚ್ಚಳ ಆದರೆ ಎರಡನೇ ವರ್ಷದಲ್ಲಿ 9% ಹೆಚ್ಚಳ ಆಗಿದೆ ಎಂದು ಜೇಟ್ಲಿ ಮಾಹಿತಿ ನೀಡಿದ್ದಾರೆ.

ಹಣಕಾಸು ಅಪರಾಧಿಗಳಿಗೆ ಶಿಕ್ಷೆ
ಅಪನಗದೀಕರಣ ವೇಳೆ ಅಧಿಕ ಆಸ್ತಿ ಹೊಂದಿದ್ದವರಿಗೆ, ಹಣಕಾಸು ತಪ್ಪಿತಸ್ತರು ಎಂದು ಗೊತ್ತಾದವರಿಗೆ ಶಿಕ್ಷೆ ಆಗಿದೆ ಎಂದ ಅವರು, ಅಪನಗದೀಕರಣ ನಂತರ ಬ್ಯಾಂಕುಗಳಿಗೆ ಶಕ್ತಿ ಬಂದಿವೆ, ಅವು ಹೆಚ್ಚು ಸಾಲ ನೀಡುವ ಶಕ್ತಿ ಪಡೆದುಕೊಂಡಿವೆ ಎಂದು ಹೇಳಿದರು.

ದಾಸ್ತಾನು ಮಾಡಿದ್ದ ಹಣ ಚಲಾವಣೆಗೆ
ಬ್ಯಾಂಕ್ಗಳ ಸಂಪರ್ಕಕ್ಕೆ ಬಾರದೆ ದಾಸ್ತಾನು ಮಾಡಲ್ಪಟ್ಟಿದ್ದ ಹಣ ಬ್ಯಾಂಕಿಗೆ ಸೇರಿ ಆ ಮೂಲಕ ಹಣಕಾಸು ವಲಯಕ್ಕೆ ಸೇರಿಕೊಂಡಿತು, ಅಧಿಕ ಮೊತ್ತವನ್ನು ಬ್ಯಾಂಕುಗಳಿಗೆ ಡೆಪಾಸಿಟ್ ಮಾಡಿದ 17.42 ಲಕ್ಷ ಜನರಿಗೆ ನೊಟೀಸ್ ನೀಡಿ ಉತ್ತರ ಪಡೆದುಕೊಳ್ಳಲಾಗಿದೆ. ಇದನ್ನು ಸೌಮ್ಯರೀತಿಯಲ್ಲಿ ನಿರ್ವಹಿಸಲಾಗಿದೆ ಎಂದು ಜೇಟ್ಲಿ ಮಾಹಿತಿ ನೀಡಿದರು.

ಅಪನಗದೀಕರಣ ಅತ್ಯಂತ ಮಹತ್ವದ ನಿರ್ಧಾರ
ಅಪನಗದೀಕರಣವು ಕೇಂದ್ರ ಸರ್ಕಾರ ಇಷ್ಟು ವರ್ಷ ತೆಗೆದುಕೊಂಡಿರುವ ನಿರ್ಧಾರಗಳಲ್ಲಿ ಅತ್ಯಂತ ಪ್ರಮುಖ ಮತ್ತು ಯಶಸ್ವಿಯಾದದ್ದು ಎಂದು ನೋಟ್ ಬ್ಯಾನ್ ಅನ್ನು ಸಮರ್ಥಿಸಿಕೊಂಡ ಅರುಣ್ ಜೇಟ್ಲಿ ಇದರಿಂದ ಭಾರತದ ಆರ್ಥಿಕತೆಗೆ ಬಲ ಬಂದಿತು ಎಂದು ಹೇಳಿದರು.

ವಿದೇಶದ ಕಪ್ಪು ಹಣ ಸರ್ಕಾರದ ಗುರಿ ಆಗಿತ್ತು
ಸರ್ಕಾರವು ಮೊದಲಿಗೆ ವಿದೇಶದಲ್ಲಿರುವ ಕಪ್ಪುಹಣವನ್ನು ಗುರಿಯಾಗಿಸಿಕೊಂಡಿತು, ಅದನ್ನು ತೆರಿಗೆ ಒಳಕ್ಕೆ ತರಲು ಯಶಸ್ವಿಯಾಯಿತು, ಯಾರು ತೆರಿಗೆ ವ್ಯಾಪ್ತಿಗೆ ಬರಲಿಲ್ಲವೋ ಅವರ ಮೇಲೆ ಕಪ್ಪುಹಣ ಆರೋಪ ಹೊರಿಸಲಾಯಿತು, ಅವರ ವಿದೇಶಿ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಜಪ್ತು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications