ಆರೋಗ್ಯ ಇಲಾಖೆಯ ಟ್ವೀಟ್ ಅವಾಂತರಕ್ಕೆ ತಪರಾಕಿ
ನವದೆಹಲಿ, ಏಪ್ರಿಲ್ 26: ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಇತ್ತೀಚೆಗೆ ಸ್ವಾಸ್ಥ್ಯ ಭಾರತ ಎಂದು ಅಭಿಯಾನದಡಿಯಲ್ಲಿ ಮಾಡಿದ್ದ ಟ್ವೀಟ್ ಒಂದು ವಿವಾದಕ್ಕೆ ಕಾರಣವಾಗಿತ್ತು. ಮಾಂಸಾಹಾರ, ಪ್ರೋಸೆಸ್ಡ್ ಫುಡ್ ಹಾಗೂ ಸಸ್ಯಾಹಾರ ಸೇವನೆಯ ಪರಿಣಾಮಗಳನ್ನು ಬಿಂಬಿಸುವ ಎರಡು ಚಿತ್ರಗಳನ್ನು ಇಲಾಖೆ ಪೋಸ್ಟ್ ಮಾಡಿತ್ತು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸಾರ್ವಜನಿಕರಿಂದ ಭಾರಿ ಟೀಕೆ ಕೇಳಿ ಬಂದ ಹಿನ್ನಲೆಯಲ್ಲಿ ಹೊಸದಾಗಿ ಟ್ವೀಟ್ ಮಾಡಲಾಗಿದೆ.
ಟ್ವೀಟ್ ನಲ್ಲಿ ಒಂದು ಕಡೆ ದಪ್ಪಗಿರುವ ಮಹಿಳೆ ದೇಹದ ಚಿತ್ರವಿದ್ದು, ಅದರಲ್ಲಿ ಚಿಕನ್, ಮಾಂಸ, ಬರ್ಗರ್, ಡೋನಟ್, ಫ್ರೆಂಚ್ ಫ್ರೈಸ್, ಕೋಲಾ, ಅಲ್ಕೋಹಾಲ್ ಸೇವಿಸಿದ್ದಾಳೆಂದು ಬಿಂಬಿಸಲಾಗಿತ್ತು. ಇನ್ನೊಂದೆಡೆ ತೆಳ್ಳಗಿರುವ ಮಹಿಳೆ ಹಣ್ಣು, ಹಸಿರು ತರಕಾರಿ ಸೇವನೆಯಿಂದ ಆರೋಗ್ಯವಾಗಿದ್ದಾಳೆಂದು ಬಿಂಬಿಸಲಾಗಿತ್ತು. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.
ಸಚಿವಾಲಯ ಈ ಟ್ವೀಟ್ ಮೂಲಕ ಬಾಡಿ ಶೇಮಿಂಗ್ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ನಂತರ ಶಾಖಾಹಾರಿ, ಮಾಂಸಹಾರಿ ಪದಾರ್ಥಗಳನ್ನು ಒಟ್ಟುಗೂಡಿಸಿ, ಹೊಸ ಚಿತ್ರವೊಂದನ್ನು ಟ್ವೀಟ್ ಮಾಡಲಾಗಿದೆ.

ಬಾಡಿ ಶೇಮಿಂಗ್ ಅನ್ನೋ ಆರೋಪ
ಆರೋಗ್ಯ ಇಲಾಖೆ ಟ್ವೀಟ್ ಅವಾಂತರದಲ್ಲಿ ಬಾಡಿ ಶೇಮಿಂಗ್ ಅನ್ನೋ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ ಸಸ್ಯಾಹಾರ ವಾದವನ್ನು ಆರೋಗ್ಯ ಇಲಾಖೆ ಮಂಡಿಸಿದೆ ಹಲವರು ಮಂದಿ ಕಿಡಿಕಾರಿದ್ದಾರೆ.
|
ಸೆಲೆಬ್ರಿಟಿ ಶಿರಿಷ್ ಕುಂದರ್ ಟ್ವೀಟ್
ಮಾಂಸಾಹಾರ ಹಾಗೂ ಮೊಟ್ಟೆಯಂತಹ ಪದಾರ್ಥಗಳು ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ಅವನ್ನೆಲ್ಲ ಬೊಜ್ಜಿನ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
|
ಸಮತೋಲನ ಆಹಾರ ಎಂದರೇನು?
ಸಮತೋಲನ ಆಹಾರ ಎಂದರೇನು? ಎಂಬುದರ ಬಗ್ಗೆ ಪಾಠ ಮಾಡಬೇಕಿದೆ. ಸಸ್ಯಾಹಾರ, ಮಾಂಸಾಹಾರ ಎಂಬ ಪ್ರತ್ಯೇಕ ಆಹಾರ ಪದ್ಧತಿಗಿಂತ ಪೌಷ್ಟಿಕ ಆಹಾರ ಕ್ರಮದ ಅರಿವು ಮೂಡಿಸುವುದು ಮುಖ್ಯ ಎಂದು ಡಾ. ಸುಮಯ್ಯ ಶೇಖ್ ಟ್ವೀಟ್ ಮಾಡಿದ್ದಾರೆ.
|
ಮೊಟ್ಟೆ, ಮೀನು, ಮಾಂಸ ಆರೋಗ್ಯಕರವಲ್ಲವೇ?
ಆರೋಗ್ಯ ಇಲಾಖೆ ಪ್ರಕಾರ ಮೊಟ್ಟೆ, ಮೀನು, ಮಾಂಸ ಆರೋಗ್ಯಕರವಲ್ಲವೇ? ಇವು ಸಮತೋಲನ ಆಹಾರ ಪದ್ಧತಿಯಲ್ಲಿ ಸೇರಿಲ್ಲವೇ? ಸ್ಟಾಕ್ ಫೋಟೊ ಬಳಸಿ ನಂತರ ಡಿಲೀಟ್ ಮಾಡಿರುವುದು ಎಷ್ಟು ಸರಿ?
|
ಜೀರೋ ಫಿಗರ್ ಬರಲು ಯೋಗಿಯಾಗಬೇಕೆ?
ಜೀರೋ ಫಿಗರ್ ಬರಬೇಕಾದರೆ ಯೋಗಿಗಳಂತೆ ಆಹಾರ ಸೇವಿಸಬೇಕೇ? ಸ್ಥೂಲಕಾಯಕ್ಕೆ ಆಹಾರ ಪದ್ಧತಿಯೇ ಕಾರಣವೇ? ಆರೋಗ್ಯ ಇಲಾಖೆಯಿಂದ ಇದೆಂಥ ಟ್ವೀಟ್.
|
ಅತಿ ಹೆಚ್ಚು ಪೋಷಕಾಂಶವುಳ್ಳ ಆಹಾರ
ಮಾಂಸಾಹಾರ ಹಾಗೂ ಮೊಟ್ಟೆಯಂತಹ ಪದಾರ್ಥಗಳು ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ಅವನ್ನೆಲ್ಲ ಬೊಜ್ಜಿನ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
-
Summer Super Drink: ಪ್ರತಿದಿನ ಎರಡು ಗ್ಲಾಸ್ ಕಬ್ಬಿನ ರಸ: ಬೇಸಿಗೆಯ ಸೂಪರ್ ಡ್ರಿಂಕ್ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ












Click it and Unblock the Notifications