Get Updates
Get notified of breaking news, exclusive insights, and must-see stories!

karnataka Rain: ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಇಂದಿನ ಹವಮಾನ ವರದಿ

ದೇಶದ ಹಲವೆಡೆ ವರುಣನ ಅರ್ಭಟ ಜೋರಾಗಿದೆ. ಇಂದಿನಿಂದ ಹಲವು ರಾಜ್ಯಗಳಲ್ಲಿ ಅಧಿಕ ಮಳೆಯಾಗುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಹಾಗಾದರೆ ಎಲೆಲ್ಲಿ ಆಲರ್ಟ್ ಗೋಷಣೆ ಮಾಡಲಾಗಿದೆ ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ರಾಜ್ಯದಲ್ಲಿ ಮುಂದಿನ ಮೂರು ದಿನ ಉತ್ತಮ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಹೇಳಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಉತ್ತಮ ಮಳೆಯಾಗಲಿದೆ.

Todays weather report for other states including Karnataka

ಹಾಗೆಯೇ, ರಾಯಚೂರು, ಯಾದಗಿರಿ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ. ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಬೇಳಗಾವಿ, ಹಾಸನ, ಮಡಿಕೇರಿ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರಖಂಡ, ಹಿಮಾಚಲದಲ್ಲಿ ಮಳೆ

ಹವಾಮಾನ ಇಲಾಖೆ ಪ್ರಕಾರ ಉತ್ತರಾಖಂಡದಲ್ಲಿ ಇಂದು ಕೂಡ ಮಳೆ ಮುಂದುವರೆಯಲಿದೆ. ಕಳೆದ ಹಲವು ದಿನಗಳಿಂದ ಸುರಿದ ಭಾರೀ ಮಳೆ ಹಾಗೂ ಭೂಕುಸಿತದಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಇಂದು ರಾಜ್ಯಾದ್ಯಂತ ಮಳೆಯ ಎಚ್ಚರಿಕೆಯನ್ನು ಇಲಾಖೆ ನೀಡಿದೆ.

ಒಂದು ತಿಂಗಳಿನಿಂದ ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆ ಅನೇಕ ಅವಾಂತರವನ್ನು ಸೃಷ್ಟಿ ಮಾಡಿದೆ. ಅನೇಕ ಭೂಕುಸಿತ ಮತ್ತು ಮೇಘಸ್ಫೋಟಗಳನ್ನು ಉಂಟುಮಾಡಿದೆ. 2023 ರಲ್ಲಿ ಮಳೆ ಸಂಬಂಧಿತ ಘಟನೆಗಳಿಂದ ರಾಜ್ಯದಲ್ಲಿ ಇಲ್ಲಿಯವರೆಗೆ ಸುಮಾರು 367 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

Todays weather report for other states including Karnataka

ಜೂನ್ 24 ರಂದು ಮಾನ್ಸೂನ್ ಪ್ರಾರಂಭವಾದಾಗಿನಿಂದ ಗುಡ್ಡಗಾಡು ರಾಜ್ಯದಲ್ಲಿ ಮಳೆಯ ಸಂಬಂಧಿತ ಘಟನೆಗಳಲ್ಲಿ ಪ್ರತಿದಿನ ಸರಾಸರಿ ಏಳು ವ್ಯಕ್ತಿಗಳು ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸುತ್ತವೆ. ಜೊತೆಗೆ 12,000 ಕೋಟಿ ಆಸ್ತಿ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಸದ್ಯ ಈ ಭಾಗದಲ್ಲಿ ಕೊಂಚ ಮಳೆ ತಗ್ಗಿದೆ.

ದೆಹಲಿ ಮಳೆ

ದೆಹಲಿಯಲ್ಲಿ ಆಗಸ್ಟ್‌ನ ಸುಡುವ ಶಾಖಕ್ಕೆ ಮಳೆ ವಿರಾಮ ನೀಡಿದೆ. ಭಾನುವಾರ ತಡರಾತ್ರಿ ಸುರಿದ ಗುಡುಗು ಸಹಿತ ಮಳೆ ಬೇಸಿಗೆಯ ಬಿಸಿ ತಣಿಸಿದೆ. ಭಾನುವಾರ ಬೆಳಿಗ್ಗೆ ಬಿಸಿಗಾಳಿಯನ್ನು ಜನ ಅನುಭವಿಸಿದ್ದಾರೆ. ಆದರೆ ಸಂಜೆ ವೇಳೆಗೆ ವಾತಾವರಣ ತಣ್ಣಗಾಯಿತು. ತಂಪಾದ ಗಾಳಿಯೊಂದಿಗೆ ಕಪ್ಪು ಮೋಡಗಳು ನಗರದಲ್ಲಿ ಸುಳಿದಾಡಿ ಮಳೆ ತಂದಿದೆ.

ರಕ್ಷಾಬಂಧನದವರೆಗೆ ಹವಾಮಾನ ಆಹ್ಲಾದಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಹವಾಮಾನ ಕೇಂದ್ರವು ಈ ಊಹಾಪೋಹಗಳನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಭಾರತದ ಹವಾಮಾನ ಇಲಾಖೆ (ಐಎಂಡಿ) ಆಗಸ್ಟ್‌ನ ಉಳಿದ ಭಾಗದಲ್ಲಿ ಸರಿಯಾದ ಮಳೆಯಾಗುವುದಿಲ್ಲ ಎಂದು ಭವಿಷ್ಯ ನುಡಿದಿದೆ. ಎರಡು-ಮೂರು ದಿನಗಳ ಹಿಂದೆ ದೆಹಲಿ-ಎನ್‌ಸಿಆರ್‌ನಲ್ಲಿ ಕೆಲವೆಡೆ ಲಘು ಮಳೆಯಾಗಿತ್ತು. ಆದರೆ ಬಿಸಿಲಿನ ತಾಪಕ್ಕೆ ಇದು ಹೆಚ್ಚು ಸಮಾಧಾನ ತಂದಿಲ್ಲ.

ಆಗಸ್ಟ್ ನಲ್ಲಿ 91.8 ಮಿ.ಮೀ ಮಳೆ ದಾಖಲು

ನಗರದಲ್ಲಿ ಜುಲೈನಲ್ಲಿ ವಾಡಿಕೆಗಿಂತ ಶೇ.83ರಷ್ಟು ಹೆಚ್ಚು ಮಳೆಯಾಗಿದ್ದು, ಆಗಸ್ಟ್ ನಲ್ಲಿ ಇದುವರೆಗೆ ವಾಡಿಕೆಗಿಂತ ಶೇ.48ರಷ್ಟು ಮಾತ್ರ ಮಳೆಯಾಗಿದೆ. ಆಗಸ್ಟ್ ತಿಂಗಳ ಸರಾಸರಿ ಮಳೆ 191.1 ಮಿ.ಮೀ. ಆದರೆ, ಆಗಸ್ಟ್ 24ರವರೆಗೆ ಕೇವಲ 91.8 ಮಿ.ಮೀ ಮಳೆ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗುವ ನಿರೀಕ್ಷೆಯಿಲ್ಲ ಎಂದು ಐಎಂಡಿ ಹೇಳಿದೆ.

ಇಂದು ತೆಲುಗು ರಾಜ್ಯಗಳಲ್ಲಿ ಮಳೆಯ ಮುನ್ಸೂಚನೆ..

ತೆಲುಗು ರಾಜ್ಯಗಳಲ್ಲಿ ಇಂದು (ಸೋಮವಾರ) ಮೋಡ ಕವಿದ ವಾತಾವರಣ ಇರಲಿದೆ. ಆದರೆ ಭಾರಿ ಮಳೆಯಾಗುವ ಸಾಧ್ಯತೆ ಕಡಿಮೆ ಇದ್ದು ತುಂತುರು ಮಳೆಯಾಗುವ ಸಂಭವವಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಪ್ರಮುಖವಾಗಿ.. ಹೈದರಾಬಾದ್, ದಕ್ಷಿಣ ತೆಲಂಗಾಣ, ರಾಯಲಸೀಮಾ, ಕರಾವಳಿ, ಉತ್ತರಾಂಧ್ರದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಆದರೆ.. ಬಹುತೇಕ ಪ್ರದೇಶಗಳಲ್ಲಿ ಮಾತ್ರ ಮೋಡ ಕವಿದ ವಾತಾವರಣವಿದೆ.

ಇಂದು ಸಂಜೆ ರಾಯಲಸೀಮಾ, ಕರಾವಳಿ, ದಕ್ಷಿಣ ಮತ್ತು ಹೈದರಾಬಾದ್‌ನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಪ್ರಸ್ತುತ, ಪೂರ್ವ ಏಷ್ಯಾ ಮತ್ತು ಆಗ್ನೇಯ ಏಷ್ಯಾದಿಂದ ಬರುವ ಬಲವಾದ ಗಾಳಿಯು ಮೋಡಗಳನ್ನು ತರುತ್ತಿದೆ. ಹೀಗಾಗಿ ತೆಲುಗು ರಾಜ್ಯಗಳಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇರಲಿದೆ.

ಸದ್ಯ ಈಶಾನ್ಯ ಭಾರತದಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲದೆ.. ಚೀನಾ, ವಿಯೆಟ್ನಾಂ, ಮಲೇಷ್ಯಾ ಮತ್ತು ಫಿಲಿಪೈನ್ಸ್ ನಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ನಮ್ಮ ತೆಲುಗು ರಾಜ್ಯಗಳ ಮೇಲೆ ಅಷ್ಟಾಗಿ ಇಲ್ಲದಿದ್ದರೂ.. ಗಾಳಿಯ ಬಲವನ್ನು ಹೆಚ್ಚಾಗಬಹುದು. ಇದರಿಂದ ಮಳೆಯಾಘುವ ಸಾಧ್ಯತೆ ಇದೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+