ಚಿತ್ರಗಳಲ್ಲಿ: ಫಿಕ್ಕಿ ಸಭೆಯಲ್ಲಿ ಕಮಲ್ ಜತೆ ಸಂಸದೆ ರಮ್ಯಾ
ಬೆಂಗಳೂರು, ಅ.30: ನಗರದಲ್ಲಿ 'ಮಾಧ್ಯಮ ಮತ್ತು ಮನರಂಜನೆ' ವಿಷಯ ಕುರಿತ ಎರಡು ದಿನಗಳ ಮಾಧ್ಯಮ ಕಮ್ಮಟ ನಡೆಯಿತು. ಖ್ಯಾತ ನಟ ಹಾಗೂ ಫಿಕ್ಕಿಯ ಮಾಧ್ಯಮ ಮತ್ತು ಮನರಂಜನೆ ವ್ಯಾಪಾರ ಕಮ್ಮಟದ ಮುಖ್ಯಸ್ಥ ಡಾ.ಕಮಲ್ ಹಾಸನ್ ಅವರು ಕಾರ್ಯಕ್ರಮದ ಆಕರ್ಷಣೆಯಾಗಿದ್ದರು.
ಮಂಡ್ಯ ಕ್ಷೇತ್ರ ಸಂಸದೆ ರಮ್ಯಾ ಅವರು ಹಾಗೂ ಹೀಗೂ ಬಿಡುವು ಮಾಡಿಕೊಂಡು ಕಮಲ್ ಹಾಸನ್ ಅವರ ಜತೆ ನಿಂತು ಒಂದು ಫೋಟೊ ಪ್ಲೀಸ್ ಎಂದು ಸ್ಮೈಲ್ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಚಲನಚಿತ್ರ ಹಾಗೂ ಮಾಧ್ಯಮ ರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
'ದೇಶದ ಶೇ.60ರಿಂದ 70ರಷ್ಟು ಸಿನಿಮಾಗಳು ತಯಾರು ಆಗುತ್ತಿವೆ. ದಕ್ಷಿಣ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಹುಭಾಷಾ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಸಿನಿಮಾ ಉದ್ಯಮದಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆಎಂದು ಕಮಲ್ ಹಾಸನ್ ತಮ್ಮ ಭಾಷಣದಲ್ಲಿ ಹೇಳಿದರು.
'ನಮ್ಮಲ್ಲಿ ಚಿತ್ರಕಥೆ ಬರವಣಿಗೆ ಬಗ್ಗೆ ಪ್ರತ್ಯೇಕ ತರಬೇತಿ ಶಾಲೆಗಳನ್ನು ಸ್ಥಾಪಿಸಬೇಕು. ಅಲ್ಲದೆ, ಸಿನಿಮಾ ರಂಗದಲ್ಲಿ ದುಡಿಯಲು ಮುಂದಾಗುವ ತಂತ್ರಜ್ಞರಿಗೂ ವೃತ್ತಿಪರ ತರಬೇತಿ ನೀಡುವ ಕೋರ್ಸ್ ಪ್ರಾರಂಭಿಸಬೇಕು. ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಉತ್ತಮ ಚಲನಚಿತ್ರ ನಿರ್ಮಿಸುವುದಕ್ಕೆ ಮುಂದಾಗಬೇಕು' ಎಂದರು
ಉಳಿದಂತೆ, ರಣಜಿ ಕೊನೆ ಇನ್ನಿಂಗ್ಸ್ ಆಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಚೊಚ್ಚಲ ದ್ವಿಶತಕ ಸಿಡಿಸಿದ ಸಂಜು ಸ್ಯಾಮ್ಸನ್, ಮುಸ್ಲಿಂ ಮಹಿಳೆ ಕೈ ಸೇರಿದ ಕಮಲ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ ಅವರ ಮುಖಾಮುಖಿ, ಮುಂದುವರೆದ ಪ್ರಿಯಾಂಕಾ ಗಾಂಧಿ ರಾಯ್ ಬರೇಲಿ ಯಾತ್ರೆ ಇನ್ನಷ್ಟು ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ.

ಕಮಲ್ ಜತೆ ಸಂಸದೆ ರಮ್ಯಾ
ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಮತ್ತು ಮನರಂಜನೆ' ವಿಷಯ ಕುರಿತ ಎರಡು ದಿನಗಳ ಕಮ್ಮಟದಲ್ಲಿ ಕಮಲ್ ಜತೆ ಸಂಸದೆ ರಮ್ಯಾ ಹಾಗೂ ಚಿತ್ರರಂಗದ ಇನ್ನಿತರ ಗಣ್ಯರು

ಫಿಕ್ಕಿ ಸಭೆಯಲ್ಲಿ ಕಮಲ್
ಬೆಂಗಳೂರಿನಲ್ಲಿ ನಡೆದ ಫಿಕ್ಕಿ ಸಭೆಯಲ್ಲಿ ಕಮಲ್ ಜತೆ ಮುಖ್ಯಮಂತ್ರ್ರಿ ಸಿದ್ದರಾಮಯ್ಯ, ಸಚಿವ ಅಂಬರೀಷ್, ಸಂಸದೆ ರಮ್ಯಾ

ರಣಜಿ ಕೊನೆ ಇನ್ನಿಂಗ್ಸ್
ಹರ್ಯಾಣ ವಿರುದ್ಧ ರಣಜಿ ಕೊನೆ ಇನ್ನಿಂಗ್ಸ್ ಆಡಿದ ಮಾಸ್ಟರ್ ಬ್ಲಾಸ್ಟರ್ ಮುಂಬೈ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಇತರೆ ಆಟಗಾರು, ಅಭಿಮಾನಿಗಳಿಂದ ಅಭಿನಂದನೆ

ಅಹಮದಾಬಾದಿನಲ್ಲಿ ಮಿಲನ
ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಗುಜರಾತ್ ರಾಜ್ಯಪಾಲೆ ಕಮಲಾ ಬೆನಿವಾಲ್, ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇನ್ನಿತರ ಗಣ್ಯರ ಜತೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮ್ಯೂಸಿಯಂನಲ್ಲಿ

ಕಾಶ್ಮೀರದಲ್ಲಿ
ಕಾಶ್ಮೀರದಲ್ಲಿ ಹೂ ಕೀಳುತ್ತಿರುವ ಯುವತಿಯರು

ಗುರ್ ಗಾಂವ್ ನಲ್ಲಿ
ಸಿಆರ್ ಪಿಎಫ್ ನ ಮಹಿಳಾ ಯೋಧರು 74ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಂಗಳವಾರ ನಡೆಸಿದ ಕವಾಯತು

ಪಾಟ್ನದಲ್ಲಿ
ಪಾಟ್ನದ ಮಹಿಳಾ ಕಾಲೇಜಿನ ವಾರ್ಷಿಕೋತ್ಸವದ ದೃಶ್ಯ

ಮುಂಬೈನಲ್ಲಿ
ಬಾಲಿವುಡ್ ನಲ್ಲಿ ಚಿತ್ರಾಂಗದಾ ಸಿಂಗ್ ಅವರು ಫೆಮಿನಾ ಕವರ್ ಪುಟ ಅಲಂಕರಿಸಿದ್ದಾರೆ. PTI Photo by Mitesh Bhuvad

ರಾಯ್ ಬರೇಲಿ
ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಸಂಚಾರ ಮುಂದುವರೆದಿದೆ

ಸೂರತ್ ನಲ್ಲಿ
ಬಿಜೆಪಿ ಮಹಿಳಾ ಮೋರ್ಚಾದ ಮುಸ್ಲಿಂ ಕಾರ್ಯಕರ್ತರು ಕೈ ಮೇಲೆ ಕಮಲ ಚಿತ್ರಗಳನ್ನು ಮೂಡಿಸಿಕೊಂಡು ಪ್ರದರ್ಶಿಸಿದರು

ಮುಂಬೈನಲ್ಲಿ
ಪಾಕಿಸ್ತಾನದ ಕವಯತ್ರಿ ಫಾತಿಮಾ ಭುಟ್ಟೋ ಹಾಗೂ ಅಂಕಣಕಾರ್ತಿ ಶೋಭಾ ಡೇ ಅವರು 'The Shadow of the Crescent Moon' ಕೃತಿ ಯ ಜತೆ PTI Photo by Mitesh Bhuvad

ಸಚಿನ್ ಗೆ ವಿದಾಯ
ರಣಜಿ ಕ್ರಿಕೆಟ್ ಸಚಿನ್ ಅವರಿಗೆ ಹರ್ಯಾಣ ಕ್ರಿಕೆಟರ್ ಗಳಿಂದ ಸೆಲ್ಯೂಟ್
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications