ಚಿತ್ರಸುದ್ದಿ: ಅಂತೂ ಶಾಲೆ ಮುಖ ನೋಡಿದ ವಿದ್ಯಾರ್ಥಿಗಳು
ಬೆಂಗಳೂರು, ಮಾ.4: ಎಷ್ಟೋ ತಿಂಗಳ ನಂತರ ಶಾಲೆ ಮುಖ ನೋಡಿದ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರೆಸಿದ್ದಾರೆ. ಈ ಬಾರಿ ಚಳಿಗಾಲ ಮುರ್ನಾಲ್ಕು ತಿಂಗಳುಗಳ ಕಾಲ ಶಾಲೆಯಿಂದ ವಿದ್ಯಾರ್ಥಿಗಳನ್ನು ದೂರುವುಳಿಸಿತ್ತು. ಈಗ ಎಂದಿನಂತೆ ತರಗತಿಗಳು ಆರಂಭವಾಗಿದ್ದು, ತರಗತಿಯಲ್ಲಿ ಕುಳಿತ ವಿದ್ಯಾರ್ಥಿಗಳ ಚಿತ್ರ ಇಲ್ಲಿದೆ.
ಇತ್ತ ಅಲಹಾಬಾದಿನಲ್ಲಿ ಕಿರಿಯ ವೈದ್ಯರು ಮುಷ್ಕರ ನಿಲ್ಲಿಸಿದ್ದಾರೆ. ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರಿಂದ ಸಾರ್ವಜನಿಕರು ನಿನ್ನೆ ಕೂಡಾ ಸಂಕಷ್ಟಕ್ಕೆ ಸಿಲುಕಿದ್ದರು. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಬ್ಲಡ್ ರನ್ನರ್ ಕಣ್ಣೀರಿಟ್ಟ ಚಿತ್ರ, ಅಹಮದಾಬಾದಿಗೆ ಅರವಿಂದ ಪ್ರವೇಶ, ನಾಸಿಕ್ ನ ಹೊಸ ಏರ್ ಟರ್ಮಿನಲ್, ಮೈಸೂರು ಅರಮನೆ ಮೇಲೆ ಮಿಂಚು, ಯುನಿಸೆಫ್ ರಾಯಭಾರಿಯಾಗಿ ಸಚಿನ್ ಮಕ್ಕಳೊಂದಿಗೆ ಕ್ರಿಕೆಟ್ ಮುಂತಾದ ಚಿತ್ರಗಳಿವೆ

ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು
ಫುಲ್ವಾಮಾ: ಈ ಬಾರಿ ಚಳಿಗಾಲ ಮುರ್ನಾಲ್ಕು ತಿಂಗಳುಗಳ ಕಾಲ ಶಾಲೆಯಿಂದ ವಿದ್ಯಾರ್ಥಿಗಳನ್ನು ದೂರುವುಳಿಸಿತ್ತು. ಈಗ ಎಂದಿನಂತೆ ತರಗತಿಗಳು ಆರಂಭವಾಗಿದ್ದು, ತರಗತಿಯಲ್ಲಿ ಕುಳಿತ ವಿದ್ಯಾರ್ಥಿಗಳ ಚಿತ್ರ

ಅಲಹಾಬಾದಿನಲ್ಲಿ ವೈದ್ಯರ ಮಷ್ಕರ ಅಂತ್ಯ
ಕಾನ್ ಪುರದಲ್ಲಿ ಕಿರಿಯ ವೈದ್ಯರ ಮೇಲೆ ನಡೆದ ದಬ್ಬಾಳಿಕೆ ಖಂಡಿಸಿ ಅಲಹಾಬಾದ್ ಸೇರಿದಂತೆ ಉತ್ತರಪ್ರದೇಶದ ಹಲವೆಡೆ ನಡೆಯುತ್ತಿದ್ದ ಪ್ರತಿಭಟನೆ, ಮುಷ್ಕರ ಕೊನೆಗೂ ಅಂತ್ಯ ಕಂಡಿದೆ.

ಲಕ್ನೋದಲ್ಲಿ ಬಿಜೆಪಿ ಮೇಲೆ ಲಾಠಿಚಾರ್ಜ್
ಲಕ್ನೋದಲ್ಲಿ ಕಿರಿಯ ವೈದ್ಯರ ಮುಷ್ಕರ ಬೆಂಬಲಿಸಿ ಬಿಜೆಪಿ ಯುವ ಮೋರ್ಚಾ ಸದಸ್ಯರ ಮೇಲೆ ಮೇಲೆ ಲಾಠಿಚಾರ್ಜ್ ನಡೆಸಿದಾಗ ಸಿಕ್ಕ ದೃಶ್ಯ PTI Photo by Nand Kumar

ಸಂಜೆ ಹೊತ್ತಲ್ಲಿ ಮೈಸೂರಿನ ಅರಮನೆ ಚೆಂದ
ಇತ್ತೀಚೆಗೆ ಸಂಜೆ ಹೊತ್ತಲ್ಲಿ ಮೈಸೂರಿನ ಅರಮನೆ ಮಿಂಚು ಕಾಣಿಸಿಕೊಂಡ ರೀತಿ

ಬ್ಲಡ್ ರನ್ನರ್ ಕಣ್ಣೀರಿಟ್ಟ ಚಿತ್ರ,
ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಬ್ಲಡ್ ರನ್ನರ್ ಖ್ಯಾತಿಯ ಆಸ್ಕರ್ ಪಿಸ್ಟೋರಿಯಸ್ ಅವರು ಕೋರ್ಟಿನಲ್ಲಿ ವಿಚಾರಣೆ ವೇಳೆ ಕಣ್ಣೀರಿಟ್ಟರು. ಅನೈತಿಕ ಸಂಬಂಧದ ಶಂಕೆಯಿಂದ ತನ್ನ ಗೆಳತಿ ರೀವಾ ಅವರನ್ನು 2013ರಲ್ಲಿ ಪ್ರೇಮಿಗಳ ದಿನದಂದು ಆಸ್ಕರ್ ಭೀಕರವಾಗಿ ಹತ್ಯೆ ಮಾಡಿದ್ದರು. AP/PTI

ನಾಸಿಕ್ ನ ಹೊಸ ಏರ್ ಟರ್ಮಿನಲ್
ನಾಸಿಕ್ ನ ಏಝಾರ್ ವಿಮಾನ ನಿಲ್ದಾಣದ ಹೊಸ ಏರ್ ಟರ್ಮಿನಲ್ ರಾತ್ರಿ ವೇಳೆ ಕಂಡಿದ್ದು ಹೀಗೆ

ಚುನಾವಣೆ ದಿನಾಂಕ ಎಲ್ಲಿ ಯಾವತ್ತು?
ಲೋಕಸಭೆ ಚುನಾವಣೆ 2014ra ದಿನಾಂಕ ಎಲ್ಲಿ ಯಾವತ್ತು? ಪಿಟಿಐ ಗ್ರಾಫಿಕ್ಸ್

ಅಹಮದಾಬಾದಿಗೆ ಅರವಿಂದ ಪ್ರವೇಶ
ಅಹಮದಾಬಾದಿಗೆ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಪ್ರವೇಶಿಸಿದಾಗ ಸಿಕ್ಕ ಸುಸ್ವಾಗತ ಹೀಗಿತ್ತು.. ಮುಂದೇನಾಯ್ತು ಚಿತ್ರಗಳನ್ನು ನಿರೀಕ್ಷಿಸಿ












Click it and Unblock the Notifications