ಚಿತ್ರಗಳಲ್ಲಿ : ಕಾಶ್ಮೀರದ ಕಣಿವೆ ಮೇಲ್ ಮಂಜು
ಬೆಂಗಳೂರು, ಜ.10: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀತ ಗಾಳಿ ಬೀಸುವುದು ಕೊಂಚ ಕಡಿಮೆಯಾಗಿದೆ ಆದರೆ, ಹಿಮಪಾತ ಮಾತ್ರ ಹಾಗೆ ಮುಂದುವರೆದಿದೆ. ಲಡಾಕ್, ಜೋಗಿಲ, ಡ್ರಾಸ್, ಕಾರ್ಗಿಲ್ ಮುಂತಾದ ಪರ್ವತ ಪ್ರದೇಶಗಳಲ್ಲಿ ಹಿಮಪಾತ ಮುಂದುವರೆದಿದೆ.
ಸಾರಿಗೆ ಸಂಪರ್ಕ ಎಲ್ಲೆಡೆ ಕಡಿತಗೊಂಡಿದೆ. ಇನ್ನೂ 5-6 ಡಿಗ್ರಿಯಷ್ಟು ವಾತಾವರಣ ತಂಪಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ಸನಮ್ ಲೋಟಸ್ ಹೇಳಿದ್ದಾರೆ. ಸದ್ಯಕ್ಕೆ ಹಿಮದಿಂದ ಆವೃತಗೊಂಡ ಶ್ರೀನಗರ ಉಳಿದಂತೆ ಇಂದಿನ ಚಿತ್ರಗಳಲ್ಲಿ ಸುದ್ದಿಯಲ್ಲಿ ಕೇರಳದ ಕೋಳಿಕ್ಕಾಡ್ ನಲ್ಲಿ ಆಳವಾದ ಬಾವಿಯಲ್ಲಿ ಬಿದ್ದ ಚಿರತೆಯನ್ನು ರಕ್ಷಿಸಲು ಮುಂದಾದ ವನ್ಯಜೀವಿ ರಕ್ಷಕನ ಸಾಹಸ.
ಮುಂಬೈನ ಛತ್ರಪತಿ ಶಿವಾಜಿ ವಿಮಾನದಲ್ಲಿ ಅನಾವರಣಗೊಂಡ ಹೊಸ ಟರ್ಮಿನಲ್,ಅಮೆರಿಕದ ಫಿಲಡೆಲ್ಫಿಯಾದಲ್ಲಿ ಫ್ರ್ರೀಜ್ ಆದ ಡೆಲಾವರ್ ನದಿ ಚಿತ್ರ,ಮೌಲಾನಾ ಅಜಾದ್ ಕುರಿತ ಪುಸ್ತಕ ಲೋಕಾರ್ಪಣೆ ಮಾಡಿದ ಅಮೀರ್ ಖಾನ್, ಸಾಮಾಜಿಕ ಕಾರ್ಯಕರ್ತೆ ಮಲ್ಲಿಕಾ ಸಾರಾಭಾಯಿ ಅವರು ಆಮ್ ಆದ್ಮಿ ಪಕ್ಷದ ಟೋಪಿಧಾರಿಯಾಗಿದ್ದಾರೆ. ಮುಂಬೈ ಚಿತ್ರ ಜಗತ್ತಿನ ಒಂದಿಷ್ಟು ಕಲರ್ ಫುಲ್ ಚಿತ್ರಗಳು ಇಲ್ಲಿವೆ...

ಕಣಿವೆ ರಾಜ್ಯದಿಂದ ಬಂದ ಮಂಜಿನ ದೃಶ್ಯ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀತ ಗಾಳಿ ಬೀಸುವುದು ಕೊಂಚ ಕಡಿಮೆಯಾಗಿದೆ

ಅನಂತ್ ನಾಗ್ ಜಿಲ್ಲೆಯಲ್ಲಿನ ರೈಲು ನಿಲ್ದಾಣ
ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿನ ರೈಲು ನಿಲ್ದಾಣದ ಚಿತ್ರ(ಪಿಟಿಐ೦

ಶ್ರೀನಗರದ ನಗರ ಸಂಪೂರ್ಣ ಹಿಮಮಯ
ಹಿಮಪಾತದಲ್ಲಿ ತೋಯ್ದಿರುವ ಶ್ರೀನಗರ ನಗರದ ಒಂದು ದೃಶ್ಯ

ಶ್ರೀನಗರದ ಹಿಮಪಾತದ ನಡುವೆ ಜನರು
ಶ್ರೀನಗರದ ಹಿಮಪಾತದ ನಡುವೆ ಜನರ ಓಡಾಟ

ಶ್ರೀನಗರದ ನಗರದ ಮತ್ತೊಂದು ಚಿತ್ರ
ಹಿಮಪಾತದ ನಡುವೆ ಶ್ರೀನಗರದ ನಗರದ ಮತ್ತೊಂದು ಚಿತ್ರ

ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗುತ್ತಿದೆ
ಹಿಮದಿಂದ ಆವೃತಗೊಂಡ ಕಾರ್ಗಲ್ ಮುಂತಾದ ಪರ್ವತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗುತ್ತಿದೆ

ಶ್ರೀನಗರದ ನಗರದಲ್ಲಿ ಮಂಜಿನ ಜತೆ ಸರಸ
ಮನೆಯ ಮೇಲ್ಛಾವಣಿ ಮೇಲೆ ಆವೃತಗೊಂಡ ಹಿಮರಾಶಿಯನ್ನು ಸರಿಸುತ್ತಿರುವ ಕಾಶ್ಮೀರಿ ಯುವಕ

ಅನಂತ್ ನಾಗ್ ಜಿಲ್ಲೆಯಲ್ಲಿ ಹಿಮದೊಡನೆ ಆಟ
ಅನಂತ್ ನಾಗ್ ಜಿಲ್ಲೆಯ ಪಹಲ್ ಗಾಮ್ ನಲ್ಲಿ ಪ್ರವಾಸಿಗರ ಮೋಜಿನಾಟ(ಕೆಲ ದಿನಗಳ ಹಿಂದಿನ ಚಿತ್ರ)

ಹಿಮಮಯ ಪೂಂಛ್ ನಲ್ಲಿ ಪ್ರವಾಸಿಗ
ಎಲ್ಲೆಡೆ ಹಿಮ ಆವರಿಸಿಕೊಂಡಿರುವ ಪೂಂಛ್ ನ ಪ್ರದೇಶದಲ್ಲಿ ನಿಂತಿರುವ ಪ್ರವಾಸಿಗ

ಪೂಂಛ್ ಜಿಲ್ಲೆಯಲ್ಲಿ ಮುಖ್ಯ ರಸ್ತೆ
ಪೂಂಛ್ ಜಿಲ್ಲೆಯ ಮುಘಲ್ ರಸ್ತೆಯಲ್ಲಿ ಈಗ ಹಿಮವೋ ಹಿಮ

ಪುಸ್ತಕ ಲೋಕಾರ್ಪಣೆ ಮಾಡಿದ ಅಮೀರ್
ಕೋಲ್ಕತ್ತಾ: ಮೌಲಾನಾ ಅಜಾದ್ ಕುರಿತ ಪುಸ್ತಕ ಲೋಕಾರ್ಪಣೆ ಮಾಡಿದ ಅಮೀರ್ ಖಾನ್

ಮುಂಬೈ ವಿಮಾನ ನಿಲ್ದಾಣದ ಹೊಸ ಟರ್ಮಿನಲ್
ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಲೋಕಾರ್ಪಣೆ ಮಾಡಿದ ಪ್ರಧಾನಿ ಮನಮೋಹನ್ ಸಿಂಗ್

ಫಿಲಡೆಲ್ಫಿಯಾದಲ್ಲಿ ನದಿ ಹೇಗಾಗಿದೆ ನೋಡಿ
ಫಿಲಡೆಲ್ಫಿಯಾ : ಹಿಮಾವೃತವಾಗಿರುವ ಡೆಲಾವರ್ ನದಿಯ ನೋಟ ಕಳೆದ ಎರಡು ದಿನಗಳಲ್ಲಿ ಸಿಕ್ಕಿದ್ದು ಹೀಗೆ...

ಕೇರಳದಲ್ಲಿ ಚಿರತೆ ರಕ್ಷಣೆ ಕಾರ್ಯಾಚರಣೆ
ಕೋಳಿಕ್ಕಾಡ್ ನ ಕಣ್ಣೋಕ್ಕರಾ ಎಂಬಲ್ಲಿ ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ ಕಾರ್ಯಾಚರಣೆ ನಡೆಸಿದ್ದು ಹೀಗೆ (ಪಿಟಿಐ ಚಿತ್ರ)

ಮನಮೋಹಕ ದಾಲ್ ಸರೋವರ
ಕೊರೆಯುವ ಚಳಿ ನಡುವೆಯೂ ಮನಮೋಹಕ ದಾಲ್ ಸರೋವರದಲಿ ಪ್ರಯಾಣ.. PTI Photo by S Irfan












Click it and Unblock the Notifications