ಚಿತ್ರಸುದ್ದಿ : ಶಬರಿಮಲೆ ದೇಗುಲ ಸೇರಿದ ಚಿನ್ನಾಭರಣ

ಬೆಂಗಳೂರು, ಡಿ.26: ದೇವರನಾಡು ಕೇರಳದಲ್ಲಿ ಈಗ ಸ್ವಾಮಿ ಅಯ್ಯಪ್ಪ ದೇವರ ಸೀಸನ್ ಜೋರಾಗಿ ನಡೆದಿದೆ. ಮುಖ್ಯ ಅರ್ಚಕ ಪಿಎನ್ ನಾರಾಯಣ ನಂಬೂದಿರಿ ಅವರು ಪವಿತ್ರ ಚಿನ್ನದ ಆಭರಣ ವಸ್ತ್ರಗಳನ್ನು ಸ್ವಾಮಿಗೆ ಬುಧವಾರದಂದು ತೊಡಿಸಿದರು.ಮಂಡಲ ಪೂಜೆ ಸಾಂಗವಾಗಿ ನೆರವೇರಿದೆ.

ಚೆನ್ನೈ, ಮಂಗಳೂರು ಕಡೆಯಿಂದ 90ಕ್ಕೂ ಅಧಿಕ ವಿಶೇಷ ರೈಲುಗಳನ್ನು ಕೇರಳದ ಕಡೆಗೆ ಬಿಡಲಾಗಿದೆ. ಕಾರ್ತಿಕ ಮಾಸದಲ್ಲಿ ಲಕ್ಷಾಂತರ ಭಕ್ತಾದಿಗಳು ದಟ್ಟಾರಣ್ಯದಲ್ಲಿರುವ ದೇಗುಲಕ್ಕೆ ಆಗಮಿಸುತ್ತದೆ. ಇರುಮುಡಿ ಹೊತ್ತು ಪಂಪಾ ನದಿಯಲ್ಲಿ ಪವಿತ್ರ ಸ್ನಾನ ಮುಗಿಸಿಕೊಂಡು ಭಕ್ತಾದಿಗಳು ಶಬರಿಮಲೆ ಏರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ.

ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನ ಪವಿತ್ರ ಮಂಡಲಕಾಲ ಸಮಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭಾರತದ ವಿವಿಧ ಕಡೆಗಳಿಂದ ಮತ್ತು ವಿದೇಶಗಳಿಂದಲೂ ಭಕ್ತರ ದಂಡು ಶಬರಿಮಲೆಯತ್ತ ಧಾವಿಸಿ ಬರುತ್ತದೆ. ಶಬರಿಮಲೆ ವೆಬ್ ತಾಣದಲ್ಲಿ ಹೆಚ್ಚಿನ ಮಾಹಿತಿ ನೀಡಲಾಗಿದೆ.

ನವೆಂಬರ್ 15ರಂದು ಆರಂಭಗೊಂಡ ಮಂಡಲಪೂಜೆ ಮಹೋತ್ಸವ ಡಿ.26ರಂದು ಕೊನೆಗೊಳ್ಳಲಿದೆ. ಮಕರವಿಲಿಕ್ಕು ಸಂಭಮ ಡಿ. 30 ರಂದು ಆರಂಭಗೊಂಡು ಜನವರಿ 20 ರಂದು ಕೊನೆಗೊಳ್ಳಲಿದೆ. ಮಕರ ಜ್ಯೋತಿ ದರ್ಶನ ಜನವರಿ 14ರಂದು ನಡೆಯಲಿದೆ. ಉಳಿದಂತೆ ಇನ್ನಷ್ಟು ಕುತೂಹಲಕಾರಿ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ

ಮಂಡಲಪೂಜೆ ಮಹೋತ್ಸವ

ಮಂಡಲಪೂಜೆ ಮಹೋತ್ಸವ

ನವೆಂಬರ್ 15ರಂದು ಆರಂಭಗೊಂಡ ಮಂಡಲಪೂಜೆ ಮಹೋತ್ಸವ ಡಿ.26ರಂದು ಕೊನೆಗೊಳ್ಳಲಿದೆ. ಮಕರವಿಲಿಕ್ಕು ಸಂಭಮ ಡಿ. 30 ರಂದು ಆರಂಭಗೊಂಡು ಜನವರಿ 20 ರಂದು ಕೊನೆಗೊಳ್ಳಲಿದೆ. ಮಕರ ಜ್ಯೋತಿ ದರ್ಶನ ಜನವರಿ 14ರಂದು ನಡೆಯಲಿದೆ.

ಸಿದ್ದುಗೆ ಸನ್ಮಾನ

ಸಿದ್ದುಗೆ ಸನ್ಮಾನ

ಮಾನ್ವಿ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ನಡೆದ ಆತ್ಮೀಯ ಸನ್ಮಾನ

ವಾಜಪೇಯಿ ಹುಟ್ಟುಹಬ್ಬ

ವಾಜಪೇಯಿ ಹುಟ್ಟುಹಬ್ಬ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 89ನೇ ಹುಟ್ಟುಹಬ್ಬದ ಅಂಗವಾಗಿ ಮಥುರಾದಲ್ಲಿ ನಡೆದ ಸಮಾರಂಭ

ಆತ್ಮೀಯ ಸನ್ಮಾನ

ಆತ್ಮೀಯ ಸನ್ಮಾನ

ಗಾಯಕಿ ಅನುರಾಧ ಪೌಡ್ವಲ್ ಅವರಿಗೆ ಮಹಮ್ಮದ್ ರಫಿ ಅವರ ಪ್ರಶಸ್ತಿಯನ್ನು ನೀಡಿದ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಢಿ. ಸಂಗೀತಗಾರ ಖಯ್ಯಂ ಉಪಸ್ಥಿತಿ, ರಂಗ್ ಶಾರದಾ ಆಡಿಟೋರಿಯಂ, ಮುಂಬೈ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+