ಎಸ್ಬಿಐನಲ್ಲಿ ತಿರುಮಲ ತಿರುಪತಿ ದೇವಸ್ಥಾನದಿಂದ 2,780 ಕೆ.ಜಿ. ಚಿನ್ನ ಠೇವಣಿ
ತಿರುಪತಿ, ಆಗಸ್ಟ್ 29: ತಿಮ್ಮಪ್ಪ ಶ್ರೀಮಂತಿಕೆ ಎಷ್ಟಿರಬಹುದು ಎಂಬುದಕ್ಕೆ ಇದೇ ಸಾಕ್ಷಿ. ತಿರುಪತಿ ವೆಂಕಟೇಶ್ವರ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ'ದಲ್ಲಿ ಬರೋಬ್ಬರಿ 2,780 ಕೆಜಿ ಚಿನ್ನ ಠೇವಣಿ ಇಟ್ಟಿದೆ.
ದೀರ್ಘಾವಧಿಗೆ ಈ ಚಿನ್ನವನ್ನು ಠೇವಣಿ ಇಡಲಾಗಿದೆ. ಅಮರಾವತಿ (ಆಂಧ್ರದ ನೂತನ ರಾಜಧಾನಿ)ಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಈ ಚಿನ್ನವನ್ನು ಅಡವಿಡಲಾಗಿದೆ.

ಚಿನ್ನ ಅಡವಿಟ್ಟಿದ್ದಕ್ಕೆ ಪ್ರತಿಯಾಗಿ ಅಮರಾವತಿ ವಲಯದ ಚೀಫ್ ಜನರಲ್ ಮ್ಯಾನೇಜರ್ ಮಣಿ ಪಲ್ವೇಸನ್ ಚಿನ್ನ ಅಡವಿಟ್ಟ ಪತ್ರವನ್ನು ಟಿಟಿಡಿ ಹಣಕಾಸು ವಿಭಾಗದ ಸಲಹೆಗಾರ ಹಾಗೂ ಮುಖ್ಯ ಲೆಕ್ಕ ಪರಿಶೋಧಕ ಒ. ಬಾಲಾಜಿಗೆ ಹಸ್ತಾಂತರಿಸಿದ್ದಾರೆ.
ಗೋಲ್ಡ್ ಮಾನೆಟೈಸೇಷನ್ ಯೋಜನೆಯಡಿಯಲ್ಲಿ ಈ ಚಿನ್ನವನ್ನು 12 ವರ್ಷಗಳ ಅವಧಿಗೆ ಠೇವಣಿ ಇಡಲಾಗಿದ್ದು, ಇದಕ್ಕೆ ಶೇಕಡಾ 2.5 ಬಡ್ಡಿಯನ್ನು ಟಿಟಿಡಿ ಪಡೆಯಲಿದೆ.
Recommended Video

Tirupathi Thimmappa also attacked with WannaCry Virus












Click it and Unblock the Notifications