Get Updates
Get notified of breaking news, exclusive insights, and must-see stories!

Tirupati Room Booking- ತಿರುಪತಿಯಲ್ಲಿ ವಸತಿ ಸಿಗುತ್ತಿಲ್ಲವೇ? ಚಿಂತಿಸಬೇಡಿ ಹೀಗೆ ಮಾಡಿ..

ತಿರುಪತಿಗೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಹಾಗೆ ಬರುವ ಭಕ್ತರು ತಿರುಪತಿಯಲ್ಲಿಯೇ ಉಳಿದು ಏಳು ಬೆಟ್ಟಗಳ ಒಡೆಯನ ದರ್ಶನ ಪಡೆಯುತ್ತಾರೆ. ಹೀಗೆ ಬರುವ ಅನೇಕ ಭಕ್ತರು ವಸತಿ ಸೌಕರ್ಯವಿಲ್ಲದೆ ಪರದಾಡುವುದು ಕಂಡು ಬರುತ್ತದೆ. ಮುಂಗಡ ಬುಕ್ ಮಾಡಿದರೂ ರೂಮ್ ಸಿಗುವುದಿಲ್ಲ. ಈಗ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

ಹೌದು... ತಿರುಪತಿಗೆ ಭೇಟಿ ನೀಡುವ ಭಕ್ತರು ಆನ್‌ಲೈನ್‌ ಮೂಲಕ ವಸತಿ ಕಾಯ್ದಿರಿಸುತ್ತಾರೆ. ಆದರೆ ಅದೆಷ್ಟೋ ಬಾರಿ ಕಾಯ್ದಿರಿಸಿದ ವಸತಿಗಳು ಭಕ್ತರಿಗೆ ಸಿಗುವುದಿಲ್ಲ. ಇದರಿಂದ ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗುತ್ತದೆ. ಆದರೀಗ ಇದಕ್ಕೆ ಪರಿಹಾರ ಸಿಕ್ಕಿದೆ. ಭಕ್ತರು ವಸತಿ ಸೌಕರ್ಯಗಳಿಲ್ಲದೆ ಪೇಚಾಡುವುದಕ್ಕೆ ಪರಿಹಾರವನ್ನು ನೀಡಲಾಗಿದೆ.

Tirupati Room Booking Can t find accommodation in Tirupati Don t worry just do this in kannada

ಭಕ್ತರೊಬ್ಬರು ಶ್ರೀವಾರಿ ಸೇವಾ ಕೋಟಾ ಟಿಕೆಟ್‌ಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ಅವರಿಗೆ ಕೇಳಿದರು. ಭಕ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎ.ವಿ.ಧರ್ಮ ರೆಡ್ಡಿ ತಿರುಪತಿಯಲ್ಲಿ ದರ್ಶನ, ವಸತಿ, ಆಹಾರ ಇತ್ಯಾದಿಗಳಿಗೆ ಟಿಟಿಡಿ ಒದಗಿಸುವ ಸೌಲಭ್ಯಗಳನ್ನು ಅನೇಕ ಭಕ್ತರು ಮೆಚ್ಚಿದ್ದಾರೆ.

ಶ್ರೀವಾರಿ ಸೇವಾ ಆನ್‌ಲೈನ್ ಅರ್ಜಿಯನ್ನು ಅತ್ಯಂತ ಪಾರದರ್ಶಕವಾಗಿ ವಿನ್ಯಾಸಗೊಳಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಅವರು ಉತ್ತರಿಸಿದರು. ಯಾರಿಗೂ ಹಣ ಕೊಡಬೇಡಿ. ತಾಂತ್ರಿಕ ಸಮಸ್ಯೆಗಳಿದ್ದರೆ ಪರಿಹರಿಸುವತ್ತ ಗಮನಹರಿಸಲಾಗುತ್ತದೆ ಎಂದರು.

ತಿರುಪತಿಯಲ್ಲಿ ಕೊಠಡಿ ಬುಕ್ಕಿಂಗ್:

ನಾವು ದರ್ಶನ ಟಿಕೆಟ್ ಬುಕ್ ಮಾಡಿದರೆ ಆನ್‌ಲೈನ್‌ನಲ್ಲಿ ಕೊಠಡಿಗಳು ಲಭ್ಯವಿರುವುದಿಲ್ಲ. ಒಂದು ಸಿಕ್ಕರೆ ಮತ್ತೊಂದು ಸಿಗುವುದಿಲ್ಲ. ಇದರಿಂದ ನಮಗೆ ಸಮಸ್ಯೆ ಆಗುತ್ತಿದೆ ಎಂದು ಭಕ್ತರೊಬ್ಬರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಎ.ವಿ.ಧರ್ಮ ರೆಡ್ಡಿ ಅವರು, ತಿರುಮಲದಲ್ಲಿ ಕೇವಲ 7500 ಕೊಠಡಿಗಳಿದ್ದು, ಇದರಲ್ಲಿ ಶೇ.50ರಷ್ಟು ಕೊಠಡಿಗಳು ಆನ್‌ಲೈನ್‌ನಲ್ಲಿ ಬುಕ್ ಆಗಿವೆ.

Tirupati Room Booking Can t find accommodation in Tirupati Don t worry just do this in kannada

ಆನ್‌ಲೈನ್‌ನಲ್ಲಿ ಕೊಠಡಿಗಳನ್ನು ಪಡೆಯಲು ಸಾಧ್ಯವಾಗದ ಭಕ್ತರು ತಿರುಮಲದಲ್ಲಿರುವ ಸಿಆರ್‌ಒನಲ್ಲಿ ನೋಂದಾಯಿಸಿ ಕೊಠಡಿಗಳನ್ನು ಪಡೆಯಬಹುದು ಎಂದು ಅವರು ಸೂಚಿಸಿದರು. ಹಾಗೆ ಮಾಡಿದರೆ ತಿರುಪತಿಯಲ್ಲಿ ಕೊಠಡಿಗಳು ಸಿಗುತ್ತವೆ ಎಂದರು.

ಮತ್ತೊಬ್ಬರು ತಿರುಮಲದಲ್ಲಿ ಖಾಸಗಿ ಹೋಟೆಲ್‌ಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದು, ಬೀದಿ ಬದಿ ವ್ಯಾಪಾರಿಗಳು ಭಕ್ತರಿಗೆ ತೊಂದರೆ ನೀಡುತ್ತಿದ್ದಾರೆ. ಇದರಿಂದ ಭಕ್ತರಿಗೆ ಸಮಸ್ಯೆ ಆಗುತ್ಯಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ತಿರುಮಲದ ಖಾಸಗಿ ಹೋಟೆಲ್ ಗಳಲ್ಲಿ ದರ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಇಂತಹ ಪರಿಸ್ಥಿತಿ ಕಂಡು ಬಂದರೆ ನೀವು ತಕ್ಷಣ ಟಿಟಿಡಿ ಗಮನಕ್ಕೆ ತರಬಹುದು ಎಂದು ಅವರು ಸಲಹೆ ನೀಡಿದರು.

ತಿರುಮಲದಲ್ಲಿ ಹನುಮ ಜಯಂತಿ ಉತ್ಸವ

ಸರ್ವದರ್ಶನ ಟೋಕನ್ ಪಡೆದ ಭಕ್ತರು ಸ್ವಾಮಿಯ ದರ್ಶನಕ್ಕೆ 12 ಗಂಟೆ ಕಾಯಬೇಕು. ಎಲ್ಲ ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರು ಕಿಕ್ಕಿರಿದು ತುಂಬಿರುತ್ತಾರೆ. ಭವಿಷ್ಯದಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಟಿಡಿಪಿ ಅಧಿಕಾರಿಗಳು ಭವಿಷ್ಯ ನುಡಿದಿದ್ದಾರೆ. ಅದರಂತೆ ಕಾಲಕಾಲಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಶನಿವಾರ 77,848 ಭಕ್ತರು ತಿಮ್ಮಪ್ಪನ ದರ್ಶನ ಪಡೆದರು. 2.95 ಕೋಟಿ ರೂಪಾಯಿ ಆದಾಯ ಬಂದಿದೆ.

ಬಿಸಿಲಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಭಕ್ತರಿಗೆ ಕಾಲಕಾಲಕ್ಕೆ ಅನ್ನ ಪ್ರಸಾದ ಹಾಗೂ ಎಳನೀರು ವ್ಯವಸ್ಥೆ ಮಾಡಲಾಗುತ್ತಿದೆ. ಸರತಿ ಸಾಲಿನಲ್ಲಿ ಮತ್ತು ಕಂಪಾರ್ಟ್‌ಮೆಂಟ್‌ಗಳಲ್ಲಿ ಕಾಯುತ್ತಿದ್ದವರಿಗೆ ಆಹಾರ, ಮಜ್ಜಿಗೆ, ಎಳನೀರು, ಉಪಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ.

ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಇದೇ ವೇಳೆ ಟಿಟಿಡಿ ಅಧಿಕಾರಿಗಳು ಜೂನ್‌ನಲ್ಲಿ ಹನುಮ ಜಯಂತಿಯನ್ನು ಕಣ್ತುಂಬಿಕೊಳ್ಳಲಿದ್ದಾರೆ. ತಿರುಮಲದ ಆಕಾಶಗಂಗೆಯಲ್ಲಿರುವ ಶ್ರೀ ಬಾಲಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಹೋತ್ಸವ ನಡೆಯಲಿದೆ. ಜೂನ್ 1 ಹನುಮ ಜಯಂತಿ ಅಬ್ಬರದಿಂದ ಪ್ರಾರಂಭವಾಗುತ್ತದೆ. 5ರವರೆಗೆ ಮುಂದುವರಿಯಲಿದೆ. ಇದರ ಅಂಗವಾಗಿ ಜೂನ್ 1 ರಂದು ಆಕಾಶಗಂಗಾ ಶ್ರೀ ಬಾಲಾಂಜನೇಯಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+