Tirupati Tirumala: ತಿರುಮಲ ಬೆಟ್ಟ ಹತ್ತುವ ಮಕ್ಕಳಿಗೆ ಪೊಲೀಸರಿಂದ ಐಡಿ ಟ್ಯಾಗ್
ಅಲಿಪಿರಿಯಿಂದ ತಿರುಮಲಕ್ಕೆ ಹೋಗುವ ಫುಟ್ಪಾತ್ನಲ್ಲಿ 7ನೇ ಮೈಲಿನಲ್ಲಿ ಆರು ವರ್ಷದ ಬಾಲಕಿಯನ್ನು ಚಿರತೆ ಕೊಂದು ಹಾಕಿರುವ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಲು ಮುಂದಾಗಿದ್ದಾರೆ. ತಿರುಮಲ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಮಕ್ಕಳಿಗೆ ಭದ್ರತಾ ಗುರುತಿನ ಚೀಟಿ ಅಳವಡಿಸುವ ಕ್ರಮವನ್ನು ತಿರುಪತಿ ಪೊಲೀಸರು ಜಾರಿ ಮಾಡಿದ್ದಾರೆ.
7ನೇ ಮೈಲಿನಲ್ಲಿರುವ ಪೊಲೀಸ್ ಔಟ್ಪೋಸ್ಟ್ನಲ್ಲಿರುವ ಮಕ್ಕಳಿಗೆ ನೀಡುವ ಈ ಟ್ಯಾಗ್ಗಳಲ್ಲಿ ಮಗುವಿನ ಹೆಸರು, ಅವರ ಪೋಷಕರು, ವಿಳಾಸ ಮತ್ತು ಸಂಪರ್ಕ ಸಂಖ್ಯೆ ಇರುತ್ತದೆ. ತಿರುಮಲಕ್ಕೆ ಚಾರಣ ಮಾಡುವಾಗ ಮಕ್ಕಳು ತಮ್ಮ ಹೆತ್ತವರಿಂದ ಅಥವಾ ಹಿರಿಯರಿಂದ ಬೇರ್ಪಟ್ಟಾಗ ಅವರನ್ನು ಮತ್ತೆ ಪೋಷಕರ ಜೊತೆ ಸಂಪರ್ಕಿಸಲು ಈ ಐಡಿ ಟ್ಯಾಗ್ಗಳು ಸಹಾಯಕವಾಗುತ್ತವೆ.

ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ತೆರಳುವಾಗ ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವಂತೆ ಟಿಟಿಡಿ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಕೌನ್ಸೆಲಿಂಗ್ ಮಾಡುತ್ತಿದ್ದಾರೆ. ಜನರು ತಿರುಮಲಕ್ಕೆ ಬರುವವರೆಗೂ ತಮ್ಮ ಮಕ್ಕಳನ್ನು ಹಿಡಿದುಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ.
ಮಗುವನ್ನು ಕೊಂದ ಚಿರತೆ
ಶುಕ್ರವಾರ ರಾತ್ರಿ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಅಲಿಪಿರಿಯಿಂದ ಪಾದಚಾರಿ ಮಾರ್ಗದಲ್ಲಿ ತನ್ನ ಹೆತ್ತವರೊಂದಿಗೆ ತಿರುಮಲ ಬೆಟ್ಟಕ್ಕೆ ಚಾರಣ ಮಾಡುತ್ತಿದ್ದಾಗ ಆರು ವರ್ಷದ ಬಾಲಕಿಯನ್ನು ಚಿರತೆ ಕೊಂದು ಹಾಕಿತ್ತು. ರಾತ್ರಿ 8 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದ ಲಕ್ಷಿತಾ ಎಂಬ ಬಾಲಕಿಯ ಶವ ಶನಿವಾರ ಮುಂಜಾನೆ ನರಸಿಂಹಸ್ವಾಮಿ ದೇವಸ್ಥಾನದ ಬಳಿಯ ಪೊದೆಯಲ್ಲಿ ಪತ್ತೆಯಾಗಿತ್ತು.
ತಿರುಪತಿಯ ಶ್ರೀ ವೆಂಕಟ ರಮಣ ರುಯಾ ಆಸ್ಪತ್ರೆಯಲ್ಲಿ ಬಾಲಕಿಯ ಶವದ ಮರಣೋತ್ತರ ಪರೀಕ್ಷೆಯಲ್ಲಿ, ಚಿರತೆ ಮಗುವಿನ ದಾಳಿ ಮೇಲೆ ದಾಳಿ ಮಾಡಿ ಕೊಂದು ದೇಹದ ಕೆಲವು ಭಾಗಗಳನ್ನು ತಿಂದಿದೆ ಎಂದು ತಿಳಿದು ಬಂದಿದೆ.
ಭಕ್ತರಲ್ಲಿ ಅರಣ್ಯಾಧಿಕಾರಿಗಳ ಮನವಿ
ಪ್ರತ್ಯೇಕವಾಗಿ ಬೆಟ್ಟವನ್ನು ಹತ್ತದಂತೆ ಭಕ್ತರಲ್ಲಿ ಮನವಿ ಮಾಡಿದ್ದು, ಗುಂಪು ಗುಂಪಾಗಿ ಬೆಟ್ಟ ಹತ್ತುವಂತೆ ಕೋರಲಾಗಿದೆ. ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದವರೆಗೆ ಏಳನೇ ಮೈಲಿ ನಡುವಿನ ಪ್ರದೇಶವನ್ನು ನಾವು ಹೈ ಅಲರ್ಟ್ ವಲಯ ಎಂದು ಘೋಷಿಸಿದ್ದೇವೆ ಮತ್ತು ನಾವು ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುವುದು. ಈ ಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಾವು ಟಿಟಿಡಿಗೆ ಶಿಫಾರಸು ಮಾಡುತ್ತೇವೆ ಎಂದು ತಿರುಮಲ ತಿರುಪತಿ ದೇವದ್ಥಾನದ ವಿಭಾಗೀಯ ಅರಣ್ಯಾಧಿಕಾರಿ ಸತೀಶ್ ರೆಡ್ಡಿ ಹೇಳಿದ್ದಾರೆ.
ಟಿಟಿಡಿ ವಿಜಿಲೆನ್ಸ್ ಮತ್ತು ಸೆಕ್ಯುರಿಟಿ ವಿಭಾಗದ ಹಿರಿಯ ಅಧಿಕಾರಿಯ ಪ್ರಕಾರ, ನೆಲ್ಲೂರು ಜಿಲ್ಲೆಯ ಕೊವ್ವೂರು ಮಂಡಲದ (ಬ್ಲಾಕ್) ಪೋತಿರೆಡ್ಡಿಪಾಲೆಂ ಗ್ರಾಮದ ದಿನೇಶ್ ಮತ್ತು ಶಶಿಕಲಾ ಎಂಬ ಬಾಲಕಿ ತನ್ನ ಹೆತ್ತವರೊಂದಿಗೆ ಅಲಿಪಿರಿಯ ತಪ್ಪಲಿನಿಂದ ತಿರುಮಲಕ್ಕೆ ಪಾದಚಾರಿ ಮಾರ್ಗದಲ್ಲಿ ತನ್ನ ಹೆತ್ತವರನ್ನು ಹಿಂಬಾಲಿಸುತ್ತಿರುವಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ನಂತರ ಚಿರತೆ ಹೊತ್ತೊಯ್ದು ಕೊಂದು ಹಾಕಿರುವುದು ಪತ್ತೆಯಾಗಿತ್ತು.
ಚಿರತೆ ಬಾಲಕಿಯನ್ನು ಕೊಂದ ಘಟನೆಯ ನಂತರ ತಿರುಮಲ ತಲುಪಲು ಟ್ರೆಕ್ಕಿಂಗ್ಗೆ ತೆರಳುವ ಭಕ್ತರಲ್ಲಿ ಭಯವನ್ನು ಉಂಟುಮಾಡಿದೆ. "ಈ ಹಿಂದೆ ಯಾತ್ರಾರ್ಥಿಗಳ ಮೇಲೆ ಚಿರತೆ ದಾಳಿಯ ಘಟನೆಗಳು ನಡೆದಿದ್ದರೂ ಚಿರತೆಯೊಂದು ಭಕ್ತನನ್ನು ಕೊಂದಿರುವುದು ಇದೇ ಮೊದಲು" ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಜೂನ್ 22 ರಂದು, ಅಲಿಪಿರಿ ಪಾದಚಾರಿ ಮಾರ್ಗದ 7 ನೇ ಮೈಲಿ ಬಳಿ ಐದು ವರ್ಷದ ಬಾಲಕನ ಮೇಲೆ ಚಿರತೆ ಇದೇ ರೀತಿಯಲ್ಲಿ ದಾಳಿ ಮಾಡಿತ್ತು, ಆದರೆ ಸಹ ಯಾತ್ರಿಕರು ಎಚ್ಚರಿಕೆ ನೀಡಿದ ನಂತರ ಅವನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು, ನಂತರ ಎಚ್ಚೆತ್ತ ಅರಣ್ಯಾಧಿಕಾರಿಗಳು ಮರುದಿನ ಚಿರತೆಯನ್ನು ಸೆರೆ ಹಿಡಿದಿದ್ದರು.












Click it and Unblock the Notifications