Get Updates
Get notified of breaking news, exclusive insights, and must-see stories!

Tirupati Tirumala: ತಿಮ್ಮಪ್ಪನ ಭಕ್ತರೇ ಎಚ್ಚರ! ತಿರುಪತಿ ದರ್ಶನದ ಹೆಸರಿನಲ್ಲಿ ವಂಚನೆ

ತಿರುಪತಿ ತಿರುಮಲ ದರ್ಶನಕ್ಕಾಗಿ ಪ್ರತಿನಿತ್ಯ ಸಾವಿರಾರು ಭಕ್ತರು ತೆರಳುತ್ತಾರೆ. ಕಳೆದೊಂದು ವಾರದಿಂದ ಬೆಟ್ಟದಲ್ಲಿ ಭಕ್ತರ ದಂಡು ಹೆಚ್ಚಾಗಿದೆ. ಇತ್ತೀಚೆಗಷ್ಟೇ ಶ್ರೀಗಳ ದರ್ಶನದ ಹೆಸರಿನಲ್ಲಿ ಭಕ್ತರಿಗೆ ವಂಚನೆ ಮಾಡಿದ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಹೌದು... ತಿರುಮಲಕ್ಕೆ ಹೋಗಲು ಬಯಸುವ ಭಕ್ತರಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? ಆ ವಿಷಯ ಇಲ್ಲಿದೆ ನೋಡಿ.

Tirumala devotees beware Fraud in the name of Tirupati Darshan

ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಾಪುರದ ಶಿವ ರಾಮಕೃಷ್ಣ ಅವರು ತಿರುಮಲಕ್ಕೆ ಹೋಗಲು ಯೋಜಿಸಿದ್ದರು. ಇದಕ್ಕಾಗಿ ಶಿವರಾಮಕೃಷ್ಣ ಅವರು ಶ್ರೀವಾರಿ ದರ್ಶನ ಟಿಕೆಟ್‌ಗಾಗಿ ತಿರುಪತಿ ಮೂಲದ ದಲ್ಲಾಳಿಗಳಾದ ಪುಲಶೇಖರ್, ಅಮರನಾಥ್ ಮತ್ತು ವಿನೋದ್ ಕುಮಾರ್ ಅವರನ್ನು ಸಂಪರ್ಕಿಸಿದ್ದರು.

ಈ ಮೂವರು ತಿರುಮಲದಲ್ಲಿರುವ ಲಕ್ಷ್ಮೀಶ್ರೀನಿವಾಸ ಮ್ಯಾನ್‌ಪವರ್ ಕಾರ್ಪೊರೇಷನ್‌ನಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ದರ್ಶನ ಟಿಕೆಟ್‌ ಹೆಸರಿನಲ್ಲಿ ಭಕ್ತರಿಗೆ ಸಾವಿರಾರು ರೂಪಾಯಿ ವಂಚನೆ ಮಾಡುತ್ತಿದ್ದರು. ಇವರನ್ನು ಸಂಪರ್ಕಿಸಿದ ಶಿವರಾಮಕೃಷ್ಣ ಅವರಿಗೂ ಆ ಮೂರು ಜನ ಮೋಸ ಮಾಡಿದ್ದಾರೆ.

ತಿರುಪತಿಯಲ್ಲಿ ತಮ್ಮಪ್ಪನ ದರ್ಶನ ಕೊಡಿಸುವುದಾಗಿ ಹೇಳಿ ಪುಲಶೇಖರ್, ಅಮರನಾಥ್ ಮತ್ತು ವಿನೋದ್ ಕುಮಾರ್ ಮೂವರು ಶಿವರಾಮಕೃಷ್ಣ ಅವರ ಬಳಿ 20 ಸಾವಿರ ರೂಪಾಯಿ ಬಾಚಿದ್ದಾರೆ. ತಕ್ಷಣ ಶಿವರಾಮಕೃಷ್ಣ ಅವರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ನಂತರ ಅವರು ತಿರುಮಲ ವಿಜಿಲೆನ್ಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.

Tirumala devotees beware Fraud in the name of Tirupati Darshan

ಶಿವರಾಮಕೃಷ್ಣ ಅವರು ಮೂವರ ವಿರುದ್ಧ ದರ್ಶನ್ ಟಿಕೆಟ್ ಹೆಸರಿನಲ್ಲಿ ವಂಚನೆ ಮಾಡಿದ್ದಾರೆಂದು ಆರೋಪಿಸಿ ದೂರ ದಾಖಲಿಸಿದ್ದಾರೆ. ದೂರಿನ ಮೇರೆಗೆ ತಿರುಮಲ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸುವ ಭರವಸೆಯನ್ನು ನೀಡಿ ಆರೋಪಿಗಳಿಗಾಗಿ ಪತ್ತೆ ಕಾರ್ಯ ಶುರು ಮಾದರು.

ಆಗ ಅವರಿಗೆ ಕೆಲವು ಮಧ್ಯವರ್ತಿಗಳು ತಿರುಮಲ ಶ್ರೀವಾರಿ ದರ್ಶನ ಮತ್ತು ಗಳಿಕೆಯ ಹೆಸರಿನಲ್ಲಿ ಭಕ್ತರನ್ನು ವಂಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಭಕ್ತರಿಂದ ಅವರು ಮುಂಚಿತವಾಗಿ ಹಣ ಸಂಗ್ರಹಿ ದರ್ಶನ ಮತ್ತು ಸೇವೆಗಳಿಗೆ ಟಿಕೆಟ್ ನೀಡದೇ ವಂಚಿಸಿದ್ದಾರೆ. ಭಕ್ತರು ಮೋಸ ಹೋದ ಮಾರ್ಗದಲ್ಲಿ ಪೊಲೀಸರು ಹೋಗಿ ವಂಚಿತರನ್ನು ಬಂಧಿಸಿದ್ದಾರೆ.

ಅಲ್ಲದೆ ಇಂತಹ ದಲ್ಲಾಳಿಗಳ ಬಗ್ಗೆ ಜಾಗರೂಕರಾಗಿರಿ ಎಂದು ಟಿಟಿಡಿ, ವಿಜಿಲೆನ್ಸ್ ಮತ್ತು ಪೊಲೀಸರು ಜನರನ್ನು ಎಚ್ಚರಿಸುತ್ತಲೇ ಇರುತ್ತದೆ. ಹೀಗಿದ್ದರೂ ಕೆಲ ಭಕ್ತರು ಮಧ್ಯವರ್ತಿಗಳನ್ನು ಹೆಚ್ಚಾಗಿ ನಂಬುತ್ತಾರೆ. ಅವರನ್ನು ನಂಬಿ ಮೋಸ ಹೋಗುತ್ತಾರೆ.

ತಿರುಪತಿಗೆ ಭೇಟಿ ನೀಡುವ ಭಕ್ತರಿಗಾಗಿ ಟಿಟಿಡಿ ಪ್ರತಿ ತಿಂಗಳು ಆರ್ಜಿತಾ ಸೇವೆಗಳು ಮತ್ತು ದರ್ಶನ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ. ಅಲ್ಲದೆ ಭಕ್ತರು ವೆಬ್‌ಸೈಟ್ ಮತ್ತು ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸುವಂತೆ ಟಿಟಿಡಿ ಸೂಚಿಸುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+