ಗುರುವಾರದಿಂದ ಮೂರು ದಿನ ಕರ್ನಾಟಕ ಸೇರಿ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆ ಸಾಧ್ಯತೆ

ಮಾರ್ಚ್ 23 ರಿಂದ 25 ರವರೆಗೆ ವಾಯುವ್ಯ ಭಾರತದಲ್ಲಿ ಗುಡುಗು, ಆಲಿಕಲ್ಲು ಮಳೆ ಮತ್ತು ಸಾಧಾರಣದಿಂದ ಭಾರೀ ಮಳೆ ಸಂಭವಿಸುವ ನಿರೀಕ್ಷೆಯಿದೆ

ನವದೆಹಲಿ, ಮಾರ್ಚ್. 22: ಕಳೆದ ವಾರದ ಏಕಾಏಕಿ ಸುರಿದ ಭಾರೀ ಮಳೆಗೆ ರಾಜ್ಯದ ಹಲವೆಡೆ ಸಾವು ನೋವುಗಳ ಜೊತೆಗೆ ರೈತರು ತಮ್ಮ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಮೂರು ದಿನ ರಾಜ್ಯದಲ್ಲಿ ಆಲಿಕಲು ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಮಾರ್ಚ್ 23 ರಿಂದ 25 ರವರೆಗೆ ವಾಯುವ್ಯ ಭಾರತದಲ್ಲಿ ಗುಡುಗು, ಆಲಿಕಲ್ಲು ಮಳೆ ಮತ್ತು ಸಾಧಾರಣದಿಂದ ಭಾರೀ ಮಳೆ ಸಂಭವಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಹವಾಮಾನ ಚಟುವಟಿಕೆಯು ಮಾರ್ಚ್ 24 ರಿಂದ 25 ರವರೆಗೆ ಮಧ್ಯ ಮತ್ತು ಪಕ್ಕದ ಪೂರ್ವ ಭಾರತಕ್ಕೆ ವಿಸ್ತರಿಸುತ್ತದೆ ಎಂದು ಭವಿಷ್ಯ ನುಡಿದಿದೆ.

Thunderstorms, Hailstorms and Rainfall is Expected From March 24: IMD

ಬಂಗಾಳಕೊಲ್ಲಿ ಮತ್ತು ಮಧ್ಯ ಅರೇಬಿಯನ್ ಸಮುದ್ರದ ಮೇಲೆ, ಎರಡು ಆಂಟಿ ಸೈಕ್ಲೋನ್‌ಗಳು ರೂಪುಗೊಂಡಿದ್ದು, ಇದು ಸಾಕಷ್ಟು ತೇವಾಂಶವನ್ನು ತಂದಿದೆ. ಜೊತೆಗೆ, ಇತರ ಕೆಳಮಟ್ಟದ ಸೈಕ್ಲೋನಿಕ್ ಪರಿಚಲನೆಗಳು ರೂಪುಗೊಂಡವು ಮತ್ತು ಪಶ್ಚಿಮ ಹಿಮಾಲಯದ ಮೇಲೆ ಪರಿಣಾಮ ಬೀರಿತು" ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಎಂ ಮೊಹಪಾತ್ರ ವಿವರಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ 5 ರಿಂದ 6 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ದಾಖಲಾಗಿತ್ತು. ಮಣ್ಣು ತುಂಬಾ ಶುಷ್ಕ ಮತ್ತು ಬಿಸಿಯಾಗಿತ್ತು . ಮಾರ್ಚ್ 16ರಿಂದ ದೇಶದ ವಿವಿಧೆಡೆ ಗುಡುಗು, ಆಲಿಕಲ್ಲು ಮಳೆಯಾಗುತ್ತಿದ್ದು, ಜನರು ಗೊಂದಲದಲ್ಲಿದ್ದು, ಈಗಾಗಲೇ ರೈತರು ಕಂಗಾಲಾಗಿದ್ದಾರೆ. ಈ ಹವಾಮಾನ ಮಾದರಿಯು ಫೆಬ್ರವರಿಯಲ್ಲಿ ನಾವು ಕಂಡ ದಾಖಲೆಯ ಶಾಖದ ಅಲೆಯಿಂದ ಉಂಟಾಗಿದೆ ಎಂದು ಹೇಳಲಾಗಿದೆ. ಈ ಶಾಖದ ಅಲೆಯು ಬೆಚ್ಚಗಿನ ಭೂ ಮೇಲ್ಮೈಯನ್ನು ಸೃಷ್ಟಿಸುತ್ತದೆ, ಇದು ಹವಾಮಾನಶಾಸ್ತ್ರಜ್ಞರ ಪ್ರಕಾರ, ಮುಂಗಾರು ಪೂರ್ವದ ಚಂಡಮಾರುತದ ಚಟುವಟಿಕೆಯ ಪ್ರಾರಂಭಕ್ಕೆ ಸಂಬಂಧಿಸಿದೆ.

Thunderstorms, Hailstorms and Rainfall is Expected From March 24: IMD

"ಆದರೆ, ಈಗ ಇದ್ದಕ್ಕಿಂದಂತೆ ದೇಶದ ಅನೇಕ ಭಾಗಗಳಲ್ಲಿ ವ್ಯಾಪಕವಾದ ಆಲಿಕಲ್ಲು ಮಳೆ ಬರಲು ಪ್ರಮುಖ ಅಂಶವೆಂದರೆ ಮೇಲಿನ ಹಂತದ ಪಶ್ಚಿಮ ಮಾರುತಗಳು ಗಂಟೆಗೆ 120 ಕಿಮೀ ವೇಗದಲ್ಲಿ ಬೀಸುತ್ತಿರುವುದು. ಮತ್ತು ಪೆನಿನ್ಸುಲಾರ್ ಭಾರತದವರೆಗೆ ನುಸುಳುತ್ತಿರುವುದು. ಈ ತಂಪಾದ ಗಾಳಿಯು ಘನೀಕರಣದ ಮಟ್ಟವನ್ನು ಕಡಿಮೆಗೊಳಿಸಿದೆ. ಆದ್ದರಿಂದ ಅದು ಆಲಿಕಲ್ಲು ರೂಪದಲ್ಲಿ ಮಂಜುಗಡ್ಡೆಯ ರೂಪದಲ್ಲಿ ಸುರಿಯುತ್ತಿದೆ" ಎಂದು ಎಂ ಮೊಹಾಪಾತ್ರ ಹೇಳಿದ್ದಾರೆ.

ಮಾರ್ಚ್ 23 ರಿಂದ ವಾಯುವ್ಯ ಭಾರತದ ರಾಜಸ್ಥಾನದ ಮೇಲೆ ಚಂಡಮಾರುತದ ಪ್ರಚೋದನೆ ಇದೆ. ವಾಯುವ್ಯ ರಾಜಸ್ಥಾನದಿಂದ ಒಳಗಿನ ಕರ್ನಾಟಕದವರೆಗೆ ಒಂದೇ ಸಮಯದಲ್ಲಿ ಮಳೆಯಾಗಲಿದೆ. ಇಡೀ ದೇಶವು ಚಂಡಮಾರುತ ಮತ್ತು ಮಳೆಯನ್ನು ಪಡೆಯಲಿದೆ" ಎಂದು ಸ್ಕೈಮೆಟ್ ಹವಾಮಾನದ ಹವಾಮಾನ ಬದಲಾವಣೆ ಮತ್ತು ಹವಾಮಾನ ವಿಭಾಗದ ಉಪಾಧ್ಯಕ್ಷ ಮಹೇಶ್ ಪಲಾವತ್ ಹೇಳಿದ್ದಾರೆ.

ಮಾರ್ಚ್ 23 ಮತ್ತು 25 ರ ನಡುವೆ ಪಂಜಾಬ್, ಹರಿಯಾಣ, ದೆಹಲಿ ಮತ್ತು ಪಶ್ಚಿಮ ಉತ್ತರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಈಗಾಗಲೇ ಹವಾಮಾನ ಬದಲಾವಣೆಗಳಿಂದ ಉಂಟಾಗಬಹುದಾದ ತುರ್ತು ಪರಿಸ್ಥಿತಿಗೆ ಸಿದ್ಧರಾಗಿರಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಭಾನುವಾರ ದೆಹಲಿಯ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆ ಆಗಿದೆ. ಇದರಿಂದ ದೆಹಲಿಯ ತಾಪಮಾನ ಇಳಿಕೆಯಾಗಿದೆ.

ಬೆಂಗಳೂರಿನಲ್ಲೂ ಕಲೆದ ವಾರದ ಮಳೆಯಿಮದ ಬಿಸಿಲು ಕಡಿಮೆಯಾಗಿದ್ದು, ಬಿಸಿಲಿನಿಂದ ತತ್ತರಿಸಿದ್ದ ಜನ ನಿಟ್ಟುಸಿರು ಬಿಟ್ಟಿದ್ದರು. ಇನ್ನೂ ಕೆಲ ದಿನಗಳವರೆಗೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಈ ವಾರ ತಂಪಾದ ವಾತಾವರಣವನ್ನು ಕಾಣುವ ಸಾಧ್ಯತೆಯಿದೆ. ಗುರುವಾರ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+