'ದೇಶವನ್ನು ನಿಂದಿಸುವವರು ಸತ್ಯಾಗ್ರಹ ಮಾಡಲು ಸಾಧ್ಯವಿಲ್ಲ'- ಯೋಗಿ ಆದಿತ್ಯನಾಥ್

ಲಕ್ನೋ ಮಾರ್ಚ್ 28: ರಾಹುಲ್ ಗಾಂಧಿ ಲೋಕಸಭೆಯಿಂದ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಕಾಂಗ್ರೆಸ್ ನಾಯಕರು ರಾಜ್‌ಘಾಟ್‌ನಲ್ಲಿ ಒಂದು ದಿನದ ಸಂಕಲ್ಪ ಸತ್ಯಾಗ್ರಹ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಸತ್ಯಾಗ್ರಹ ನಿರ್ಣಯದ ಬಗ್ಗೆ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಪಶುಸಂಗೋಪನಾ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು 'ಸಂಕಲ್ಪ ಸತ್ಯಾಗ್ರಹ'ವನ್ನು ಟೀಕಿಸಿದ್ದಾರೆ. ಸುಳ್ಳಿನ ಹಾದಿ ಹಿಡಿದವರು ಸತ್ಯಾಗ್ರಹದ ಬಗ್ಗೆ ಮಾತನಾಡಬಾರದು ಎಂದು ಸಿಎಂ ಯೋಗಿ ವಾಗ್ದಾಳಿ ಮಾಡಿದ್ದಾರೆ.

Uttar Pradesh CM Yogi Adityanath

ಯಾರನ್ನೂ ಹೆಸರಿಸದೆ ಮುಖ್ಯಮಂತ್ರಿ ಯೋಗಿ, ಪ್ರಜಾಪ್ರಭುತ್ವವನ್ನು ಹಾಳು ಮಾಡುವ ವ್ಯಕ್ತಿ ಸತ್ಯಾಗ್ರಹ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು. ಭ್ರಷ್ಟಾಚಾರದಲ್ಲಿ ಮುಳುಗಿರುವ ಜನರು ಸತ್ಯಾಗ್ರಹ ಮಾಡಲು ಸಾಧ್ಯವಿಲ್ಲ. ಜಾತೀಯತೆ, ಭಾಷಾಭಿಮಾನ, ಪ್ರಾದೇಶಿಕತೆ ಪ್ರಚಾರ ಮಾಡುವವರು ಸತ್ಯಾಗ್ರಹ ಮಾಡುವಂತಿಲ್ಲ ಎಂಟು ಟೀಕಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಯೋಗಿ, ಮನುಷ್ಯರ ಬಗ್ಗೆ ಸಹಾನುಭೂತಿ ಇಲ್ಲದವರು, ಮಾತನಾಡುವ ಜೀವಿಗಳನ್ನು ಬಿಟ್ಟು ಸತ್ಯಾಗ್ರಹ ಮಾಡಲು ಸಾಧ್ಯವಿಲ್ಲ. ಭಾಷೆ ಮತ್ತು ಪ್ರಾದೇಶಿಕತೆಯ ಆಧಾರದ ಮೇಲೆ ದೇಶವನ್ನು ವಿಭಜಿಸುವ ಜನರು ಸತ್ಯಾಗ್ರಹ ಮಾಡಬಾರದು. ದೇಶವನ್ನು ನಿಂದಿಸುವ ಮತ್ತು ಸೇನೆಯ ವೀರ ಸೈನಿಕರ ಬಗ್ಗೆ ಗೌರವವಿಲ್ಲದ ಜನರು ಸತ್ಯಾಗ್ರಹವನ್ನು ಯಾಕೆ ಮಾಡುತ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆಯ 520 ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದರು. ಈ ಆಂಬ್ಯುಲೆನ್ಸ್ ಮೂಲಕ, ಈಗ ಜಾನುವಾರು ಸಾಕಣೆದಾರರು ತಮ್ಮ ಮನೆಗೆ ಫೋನ್ ಕರೆ ಮಾಡುವ ಮೂಲಕ ತಮ್ಮ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

Uttar Pradesh CM Yogi Adityanath

ಕಾಂಗ್ರೆಸ್ ಮಾರ್ಚ್ 26 ರಂದು ರಾಜ್‌ಘಾಟ್‌ನಲ್ಲಿ ಸಂಕಲ್ಪ ಸತ್ಯಾಗ್ರಹವನ್ನು ನಡೆಸಿತು. ಸಂಕಲ್ಪ ಸತ್ಯಾಗ್ರಹದಲ್ಲಿ ಭಾಗವಹಿಸಲು ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಪಕ್ಷದ ಇತರ ಮುಖಂಡರು ರಾಜ್‌ಘಾಟ್‌ನಲ್ಲಿ ಜಮಾಯಿಸಿದ್ದರು.

ಮೋದಿ ಉಪನಾಮ ಕಮೆಂಟ್ ಪ್ರಕರಣದಲ್ಲಿ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಸೂರತ್‌ನ ನ್ಯಾಯಾಲಯ ಎರಡು ವರ್ಷಗಳ ಶಿಕ್ಷೆ ವಿಧಿಸಿದೆ. ಆದರೆ, ಈ ಪ್ರಕರಣದಲ್ಲಿ ರಾಹುಲ್ ಗಾಂಧಿಗೂ ತಕ್ಷಣದ ಜಾಮೀನು ಮಂಜೂರಾಗಿದೆ. ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

ಮೋದಿ ಬಗ್ಗೆ ರಾಹುಲ್ ಗಾಂಧಿ ಕಮೆಂಟ್?

2019ರಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೋಲಾರದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ಆ ಹೊತ್ತಿಗೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಹಗರಣದ ಪ್ರಮುಖ ಆರೋಪಿ ನೀರವ್ ಮೋದಿಯವರು ದೇಶ ಬಿಟ್ಟು ಪರಾರಿಯಾಗಿದ್ದ. ಐಪಿಎಲ್ ಹಗರಣದ ಲಲಿತ್ ಮೋದಿ ಕೂಡ ದೇಶ ತೊರೆದಿದ್ದ.

ಅದು ಏಕೆ ಮೋದಿ ಅಂತ ಹೆಸರಿಟ್ಟುಕೊಂಡವರೆಲ್ಲರೂ ಕಳ್ಳರೇ ಆಗಿರುತ್ತಾರೆ ಎಂದು ಪ್ರಶ್ನಿಸಿದ್ದರು ರಾಹುಲ್. ಅದು ಅಸಲಿಗೆ, ಇದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಟಾಂಗ್ ಕೊಡುವ ಉದ್ದೇಶವಾಗಿತ್ತು. ಆದರೆ, ಮಾತನಾಡುವ ಭರದಲ್ಲಿ ಸಮುದಾಯವನ್ನು ಲೇವಡಿ ಮಾಡಿದ್ದರು ರಾಹುಲ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+