ರಷ್ಯಾ-ಉಕ್ರೇನ್ ಸಂಘರ್ಷ: ಭಾರತದ ಆರ್ಥಿಕತೆ ಮೇಲೆ ಕಾಣದ ಒತ್ತಡ ಮತ್ತು ಅದಕ್ಕೆ ಪ್ರತಿಕ್ರಿಯೆ

ಮೋದಿ ಸರ್ಕಾರ ಹಣದುಬ್ಬರ, ಉದ್ಯೋಗ ಕೊರತೆ ಮುಂತಾದ ಸವಾಲುಗಳನ್ನು ಎದುರಿಸಿದೆ. ಆದರೆ ಭಾರತದ ಆರ್ಥಿಕತೆ ಒಂದು ನಿರ್ಣಾಯಕ ಸವಾಲನ್ನು ಎದುರಿಸಿರುವುದು ಹಲವರಿಗೆ ತಿಳಿದಿಲ್ಲ, ಅದು ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ.

ಈ ಯುದ್ಧ ನಡೆಯುತ್ತಿರುವುದು ಸಾವಿರಾರು ಕಿಲೋಮೀಟರ್ ದೂರದಲ್ಲಿ. ಆದರೆ, ಅದು ವಿಶ್ವದ ಇಂಧನ ಮಾರುಕಟ್ಟೆಯ ಪೂರೈಕೆಯನ್ನು ಅಡಚಣೆಗೊಳಿಸಿದೆ. ಭಾರತದ ಆಮದು ಮತ್ತು ಹಣದುಬ್ಬರದ ಮೇಲೆ ಗಮನಾರ್ಹವಾದ ಪ್ರಭಾವವನ್ನು ಬೀರಿದೆ.

The Russia Ukraine Conflict Unseen Pressures On Indias Economy And Its Resilient Response

ಆದಾಗ್ಯು ಜಾಗತಿಕ ಆಚಡಣೆಗಳು ಉಂಟಾದರೂ ಭಾರತ ಆರ್ಥಿಕ ಸವಾಲುಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿದೆ. ಸರ್ಕಾರವು ಕೇವಲ ಹಣದುಬ್ಬರದ ಮೇಲಿನ ಒತ್ತಡಗಳನ್ನು ಎದುರಿಸಿಲ್ಲ, ತೈಲ ಉತ್ಪನ್ನಗಳ ಬೆಲೆಗಳು ಸಹ ಸ್ಥಿರವಾಗಿರುವಂತೆ ರಾಜತಾಂತ್ರಿಕ ಪ್ರಯತ್ನಗಳು ಮತ್ತು ವಿವೇಕಯುತ ಆರ್ಥಿಕ ನೀತಿಗಳ ಮೂಲಕ ಮಾಡಿದೆ.

ರಷ್ಯಾ ಮತ್ತು ಉಕ್ರೇನ್ ಸಂಘರ್ಷ ಜಾಗತಿಕ ಪೂರೈಕೆ ಜಾಲಕ್ಕೆ ಆಡಚಣೆ ಮಾಡಿದ್ದು ಹೇಗೆ?

2022ರ ಫೆಬ್ರವರಿಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಆರಂಭವಾಯಿತು. ಇದು ವಿಶ್ವದ ವ್ಯಾಪಾರ ವಹಿವಾಟು ಅದರಲ್ಲೂ ಮುಖ್ಯವಾಗಿ ತೈಲ, ಗ್ಯಾಸ್, ಗೋಧಿ ಮತ್ತು ರಸಗೊಬ್ಬರ ಪೂರೈಕೆ ಮೇಲೆ ಪ್ರಭಾವ ಬೀರಿತು. ವಿಶ್ವದ ದೊಡ್ಡ ತೈಲ ಉತ್ಪಾದಕ ದೇಶವಾದ ರಷ್ಯಾದ ಮೇಲೆ ಪಶ್ಚಿಮದ ರಾಷ್ಟ್ರಗಳು ನಿರ್ಬಂಧ ಹೇರಿದವು, ಇದರಿಂದಾಗಿ ಜಾಗತಿಕ ತೈಲ ಪೂರೈಕೆ ಬಿಗಿಗೊಂಡಿತು. ಯುರೋಪಿಯನ್ ಒಕ್ಕೂಟದ ದೇಶಗಳು ರಷ್ಯಾದ ಇಂಧನದ ಮೇಲೆ ಭಾರೀ ಅವಲಂಬಿತವಾಗಿವೆ, ಜಾಗತಿಕವಾಗಿ ಏರುತ್ತಿರುವ ವೆಚ್ಚ, ಬೇಡಿಕೆಯ ಕಾರಣ ಈ ದೇಶಗಳು ಬೇರೆ ಮಾರ್ಗ ಹುಡುಕಬೇಕಾಯಿತು. ಶೇ 80ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುವ ಭಾರತಕ್ಕೆ ಈ ಆಡಚಣೆ ಭಾರೀ ಆರ್ಥಿಕ ಬೆದರಿಕೆ ತಂದಿತು.

ಆದಾಗ್ಯೂ ಭಾರತ ಯುದ್ಧದಿಂದ ಉಂಟಾದ ಸವಾಲುಗಳನ್ನು ಎದುರಿಸಿತು. ಜಾಗತಿಕವಾಗಿ ತೈಲ ಬೆಲೆಗಳು ಏರಿಕೆ ಕಂಡರೂ ಸಹ ಭಾರತ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಪಡೆಯಿತು, ಇದು ತೈಲ ಉತ್ಪನ್ನಗಳ ಬೆಲೆಗಳಲ್ಲಿ ಇಳಿಕೆಯಾಗಲು ಪರಿಣಾಮ ಬೀರಿತು. ಹೆಚ್ಚುವರಿಯಾಗಿ ಭಾರತ ಯುದ್ಧದ ಸಂದರ್ಭದಲ್ಲಿ ರಾಜತಾಂತ್ರಿಕ ಮಾರ್ಗದ ಮೂಲಕ ಪಶ್ಚಿಮ ಮತ್ತು ನಿರ್ಣಾಯಕ ತೈಲ ಪೂರೈಕೆದಾರ ರಷ್ಯಾ ಜೊತೆ ತನ್ನ ಸಂಬಂಧವನ್ನು ಪರಿಣಾಮಗಾರಿಯಾಗಿ, ಸಮತೋಲದಿಂದ ನಿರ್ವಹಣೆ ಮಾಡಿತು. ಈ ಅನುಸಂಧಾನ ಭಾರತದಲ್ಲಿ ತೈಲ ಬೆಲೆ ಏರಿಕೆಯಾದರೂ ಸಹ ಬೇರೆ ದೇಶಗಳಂತೆ ಕೈ ಮೀರಿ ಹೋಗದಂತೆ ಖಚಿತಪಡಿಸಿತು.

ಜಾಗತಿಕ ಚಂಚಲತೆ ನಡುವೆಯೂ ಭಾರತ ತೈಲ ಬೆಲೆ ನಿರ್ವಹಣೆ ಮಾಡಿದ್ದು ಹೇಗೆ?

ಯುದ್ಧದಿಂದ ಆದ ಬಹು ಪ್ರಮುಖ ಪರಿಣಾಮಗಳಲ್ಲಿ ಒಂದು ಜಾಗತಿಕವಾಗಿ ತೈಲ ಬೆಲೆಗಳು ಏರಿಕೆಯಾಗಿದ್ದು, ಇದು ಬ್ಯಾರಲ್‌ಗೆ $70 ಮತ್ತು $120ರ ತನಕ ಏರಿಳಿತ ಕಂಡಿತು. ಇಂತಹ ಏರಿಳಿತ ತೈಲ ಆಮದು ಮೇಲೆ ಭಾರೀ ಅವಲಂಬನೆ ಹೊಂದಿರುವ ಭಾರತದ ಹಣದುಬ್ಬರದ ಮೇಲೆ ಸುಲಭವಾಗಿ ಪರಿಣಾಮವನ್ನು ಬೀರಲಿದೆ. ತೈಲ ಬೆಲೆಗಳ ಏರಿಕೆ ನೇರವಾಗಿ ಸಾಗಾಟದ ಮೇಲೆ ಪರಿಣಾಮ ಬೀರುತ್ತದೆ, ತಯಾರಿಕೆಯಿಂದ ಕೃಷಿ ತನಕ ಎಲ್ಲಾ ಕ್ಷೇತ್ರದ ಮೇಲೂ ಪ್ರಭಾವ ಬೀರುತ್ತದೆ.

ಆದಾಗ್ಯು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿ ಮಾಡುವ ಭಾರತದ ತಂತ್ರ ಈ ಆರ್ಥಿಕ ಹೊಡೆತದ ಪರಿಣಾಮವನ್ನು ತಪ್ಪಿಸಿತು. ಮೋದಿ ಸರ್ಕಾರ ಈ ಅವಕಾಶ ಬಳಸಿಕೊಂಡು, ರಷ್ಯಾದಿಂದ ತೈಲ ಆಮದನ್ನು ಅತ್ಯಲ್ಪಮಟ್ಟದಿಂದ ಭಾರತದ ಪ್ರಮುಖ ತೈಲ ಪೂರೈಕೆದಾರರಾಗಿ ಮಾಡಿಕೊಂಡಿತು. ಈ ಬದಲಾವಣೆ ಭಾರತಕ್ಕೆ ತೈಲ ಪೂರೈಕೆ ಸ್ಥಿರವಾಗಿರಲು ಮತ್ತು ಪ್ರಾದೇಶಿಕವಾಗಿ ಬೆಲೆಗಳು ನಿರ್ವಹಣೆ ಮಾದರಿಯಲ್ಲಿ ಇರಲು ಸಹಾಯಕವಾಯಿತು.

ಭಾರತ ಸರ್ಕಾರ ಗ್ರಾಹಕರ ಮೇಲಿನ ಹೊರೆಯನ್ನು ತಗ್ಗಿಸಲು ಆದಾಗ್ಯು ಹಲವು ತೈಲ ಸಬ್ಸಿಡಿಗಳನ್ನು ಪರಿಚಯಿಸಿತು. ಈ ಸಬ್ಸಿಡಿಗಳು ಇತರ ಕಲ್ಯಾಣ ಕಾರ್ಯಕ್ರಮಗಳಿಂದ ನಿಧಿಯನ್ನು ಬಳಸುವಂತೆ ಮಾಡಿದರೂ, ಅವು ಇನ್ನೂ ಹೆಚ್ಚಿನ ದರ ಏರಿಕೆಯನ್ನು ತಡೆಯುವಲ್ಲಿ ಮತ್ತು ಲಕ್ಷಾಂತರ ಭಾರತೀಯ ಕುಟುಂಬಗಳ ಇಂಧನ ವೆಚ್ಚ ಅಧಿಕವಾಗದಂತೆ ರಕ್ಷಿಸಲು ಸಹಾಯ ಮಾಡಿತು. ಸರ್ಕಾರದ ಸಮತೋಲನದ ನಿಲುವು ದರ ಏರಿಕೆಯಿಂದ ಆರ್ಥಿಕತೆ ಅಸ್ಥಿರಗೊಳ್ಳುವ ಮಟ್ಟಕ್ಕೆ ತಲುಪದಂತೆ ನೋಡಿಕೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+