ಶ್ರೀನಗರ ಆಸ್ಪತ್ರೆಯಲ್ಲಿ ಭಯೋತ್ಪಾದಕ ದಾಳಿ: ಓರ್ವ ಪೊಲೀಸ್ ಸಾವು
Recommended Video

ಜಮ್ಮು ಕಾಶ್ಮೀರದ ಶ್ರೀನಗರದ ಆಸ್ಪತ್ರೆ ಮೇಲೆ ಭಯೋತ್ಪಾದಕ ದಾಳಿ | Oneindia Kannada
ಶ್ರೀನಗರ, ಫೆಬ್ರವರಿ 06: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಶ್ರೀ ಮಹಾರಾಜ ಹರಿಸಿಂಗ್ ಆಸ್ಪತ್ರೆಯ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಓರ್ವ ಪೊಲೀಸ್ ಮೃತರಾಗಿದ್ದಾರೆ.
6 ಕೈದಿಗಳನ್ನು ಕೇಂದ್ರ ಕಾರಾಗೃಹದಿಂದ ಕರೆದುಕೊಂಡು ಬರಲಾಗಿತ್ತು. ಕೈದಿಗಳನ್ನು ಇಲ್ಲಿನ ಆಸ್ಪತ್ರೆಗೆ ಕರೆತಂದಾಗ ಪೊಲೀಸರ ಬಳಿಯಿಂದ ಪಿಸ್ತೂಲ್ ಕಸಿದ ಕೈದಿಯೊಬ್ಬ ಪೊಲೀಸರ ಮೇಲೇ ದಾಳಿ ನಡೆಸಿದ್ದಾನೆ. ಪೊಲೀಸರು ಪ್ರತಿ ದಾಳಿ ನಡೆಸಿದರಾದರೂ ಅಷ್ಟರಲ್ಲಾಗಲೇ ಲಶ್ಕರ್ ಇ ತೊಯ್ಬಾ ಸಂಘಟನೆಯ ಓರ್ವ ಭಯೋತ್ಪಾದಕ ಮತ್ತು ಒಬ್ಬ ಪಾಕ್ ಕೈದಿ ಪರಾರಿಯಾಗಿದ್ದಾರೆ.

ಅಬು ಹಂಜುಲ್ಲಾ ಅಲಿಯಾಸ್ ನವೀದ್ ಜಟ್ಟ್ ನನ್ನು ಕೆಲ ತಿಂಗಳುಗಳ ಹಿಂದೆ ಶೋಪಿಯಾನ್ ನಲ್ಲಿ ಬಂಧಿಸಲಾಗಿತ್ತು.

ಈ ದಾಳಿಯಲ್ಲಿ ಇಬ್ಬರು ಪೊಲೀಸರಿಗೆ ಗಾಯವಾಗಿದ್ದು, ಓರ್ವ ಪೊಲೀಸ್ ಮೃತರಾದರೆ, ಇನ್ನೊಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications