ಅಕ್ರಮವಾಗಿ ಮಗು ಪಡೆದು ಸಾಕುತ್ತಿದ್ದ ಶಿಕ್ಷಕಿಯನ್ನು ಜೈಲು ಸೇರುವಂತೆ ಮಾಡಿದ ಸ್ವಂತ ಮಗ
ನಾಗ್ಪುರ, ಮೇ 14: ಶಿಕ್ಷಕಿಯೊಬ್ಬರು 3 ಲಕ್ಷ ರೂ. ನೀಡಿ ಮಗುವನ್ನು ಖರೀದಿಸಿ ಸಾಕುತ್ತಿದ್ದ ವಿಷಯವನ್ನು ಸ್ವಂತ ಮಗನೇ ಪೊಲೀಸರಿಗೆ ದೂರು ನೀಡಿ ಬಂಧನಕ್ಕೆ ಕಾರಣರಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಶಿಕ್ಷಕಿ ಜೊತೆಗೆ ಮಗು ಮರಾಟದಲ್ಲಿ ಭಾಗಿಯಾಗಿದ್ದ ಇಬ್ಬರು ನರ್ಸ್ ಮತ್ತು ಒಬ್ಬ ಮಧ್ಯವರ್ತಿಯನ್ನು ಕೂಡ ಬಂಧಿಸಲಾಗಿದೆ.
ಬಂಧಿತರಾಗಿರುವ ಶಿಕ್ಷಕಿಗೆ 58 ವರ್ಷಗಳಾಗಿದ್ದು ಸುರೇಂದ್ರಗಢದ ನಿವಾಸಿ. ಇವರಿಗೆ ಇಬ್ಬರು ಗಂಡು ಮಕ್ಕಳು. ಅದರಲ್ಲಿ ಕೆಲವು ದಿನಗಳ ಹಿಂದೆ ಕಿರಿಯ ಮಗ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸಾವಿನ ನಂತರ ಹಿರಿಯ ಮಗ ಆಸ್ತಿಗಾಗಿ ಹಿಂಸಿಸುತ್ತಿದ್ದ. ಒಮ್ಮೆ ಹಲ್ಲೆಯನ್ನೂ ಕೂಡ ಮಾಡಿದ್ದ. ಈ ಘಟನೆಯ ಕುರಿತು ಶಿಕ್ಷಕಿ ಪೊಲೀಸರಿಗೂ ದೂರು ನೀಡಿದ್ದರು.
ಐವಿಆರ್ ಮೂಲಕ ಮಗು ಪಡೆಯಲು ಮಾಡಿದ ಯತ್ನ ವಿಫಲ:
ಆಸ್ತಿಯ ಆಸೆ, ಕುಡಿತಕ್ಕೆ ದಾಸನಾಗಿದ್ದ ಹಿರಿಯ ಮಗ ತಮ್ಮ ವೃದ್ಧಾಪ್ಯದಲ್ಲಿ ನೋಡಿಕೊಳ್ಳುವುದಿಲ್ಲ ಎಂಬ ಯೋಚನೆ ಮಾಡಿದ ಶಿಕ್ಷಕಿ ಕೃತಕ ಗರ್ಭಧಾರಣೆಯ ಮೂಲಕ ಮಗುವನ್ನು ಪಡೆಯುವ ನಿರ್ಧಾರ ಮಾಡಿದ್ದರು. ಆದರೆ ಅದು ಫಲಿಸದ ಕಾರಣ ಹಣ ನೀಡಿ ಮಗುವನ್ನು ಖರೀದಿಸುವ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದರು.

ನರ್ಸ್ಗಳ ಸಹಾಯದಿಂದ ಮಗು ಖರೀದಿ
ಐವಿಆರ್ ಮೂಲಕ ಮಗು ಪಡೆಯಲು ವಿಫಲರಾದ ಶಿಕ್ಷಕಿ ಮಗುವಿನ ಹುಡುಕಾಟದಲ್ಲಿದ್ದಾಗ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಬ್ಬರು ನರ್ಸ್ಗಳ ಪರಿಚಯವಾಗಿದೆ. ಅವರ ಬಳಿ ಆಕೆ ತನ್ನ ಹತಾಶೆಯನ್ನು ಅವರೊಂದಿಗೆ ಹಂಚಿಕೊಂಡಾಗ, ನರ್ಸ್ಗಳು ಆಕೆಯನ್ನು ಸಲಾಮುಲ್ಲಾ ಎಂಬಾತನನ್ನು ಸಂಪರ್ಕಿಸಿದ್ದಾರೆ. ಸೆಪ್ಟೆಂಬರ್ 2019 ರಲ್ಲಿ, ವ್ಯಕ್ತಿ ಮಗುವನ್ನು 3 ಲಕ್ಷ ರೂ.ಗೆ ಮಾರಾಟ ಮಾಡಿದ್ದನು. ಇದು ಮಹಿಳೆಯ ಹಿರಿಯ ಮಗನಿಗೆ ಸಂತೋಷವಾಗಲಿಲ್ಲ. ಹಾಗಾಗಿ ಇತ್ತೀಚೆಗೆ ತನ್ನ ತಾಯಿ ಮಗುವನ್ನು ಅಕ್ರಮವಾಗಿ ಖರೀದಿಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು.
ನಾಲ್ವರ ಬಂಧನ
ಶಿಕ್ಷಕಿಯ ಮಗ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಂಡ ನಗರದ ಮಾನವ ಕಳ್ಳ ಸಾಗಣೆ ವಿರೋಧಿ ಘಟಕದ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ ಶಿಕ್ಷಕಿ, ಅವರಿಗೆ ನೆರವಾಗಿದ್ದ ಇಬ್ಬರು ನರ್ಸ್ ಮತ್ತು ಏಜೆಂಟ್ ಸಲಾಮುಲ್ಲನನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸ್, ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications