ಪ್ರವಾಸಿ ತಾಣ ಆದಾಯ : ತಾಜ್ ಮಹಲ್ ನಂ.1
ಆಗ್ರಾ, ಆ.8: ದೇಶದ ಅತ್ಯುತ್ತಮ ಸ್ಮಾರಕಗಳಲ್ಲಿ ಒಂದಾಗಿ ಇಂದಿಗೂ ನವ ಜೋಡಿಗಳಿಗೆ ಪ್ರೀತಿ-ಪ್ರೇಮದ ಸಂಕೇತದಂತಿರುವ ಐತಿಹಾಸಿಕ ತಾಜ್ಮಹಲ್ ಈ ವರ್ಷ ಅತಿ ಹೆಚ್ಚು ಆದಾಯ ತಂದುಕೊಟ್ಟ ಸ್ಮಾರಕಗಳಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ಪ್ರವಾಸೋದ್ಯಮ ಸಚಿವ ಶ್ರೀಪಾದ್ ಯೆಸ್ಸೊ ನಾಯ್ಕ್ ಅವರ ಹೇಳಿಕೆ ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
2013-14ನೇ ಸಾಲಿನಲ್ಲಿ ತಾಜ್ಮಹಲ್ಗೆ ದೇಶ-ವಿದೇಶಗಳಿಂದ ಭೇಟಿ ನೀಡಿದ ಪ್ರವಾಸಿಗರಿಂದಾಗಿ ಒಟ್ಟು 80 ಕೋಟಿ ಆದಾಯ ಗಳಿಕೆಯಾಗಿದೆ. ದೇಶದ ಪ್ರತಿಷ್ಠಿತ 20 ಐತಿಹಾಸಿಕ ಸ್ಮಾರಕಗಳಲ್ಲಿ ತಾಜ್ಮಹಲ್ ಈಗಲೂ ಕೂಡ ಮೊದಲ ಸ್ಥಾನವನ್ನೇ ಪಡೆದುಕೊಂಡಿದೆ.
ಈ ವರ್ಷ ತಾಜ್ಮಹಲ್ಗೆ ಪ್ರವಾಸಿಗರು ಭೇಟಿ ನೀಡಿದ್ದರಿಂದ 80 ಕೋಟಿ ಆದಾಯ ಬಂದಿದ್ದರೆ, ಎರಡನೆ ಸ್ಥಾನವನ್ನು ದೆಹಲಿಯ ಪ್ರತಿಷ್ಠಿತ ಕುತುಬ್ ಮಿನಾರ್ ಪಡೆದಿದೆ.

ಕುತುಬ್ ಮಿನಾರ್ ಸ್ಮಾರಕದಿಂದ 10 ಕೋಟಿ 16 ಲಕ್ಷ ಬಂದಿದೆ, 3ನೇ ಸ್ಥಾನದಲ್ಲಿ ಹುಮಾಯೂನ್ ಗೋರಿಯಿಂದ 7.12 ಲಕ್ಷ ಹಾಗೂ 4ನೇ ಸ್ಥಾನದಲ್ಲಿ ದೇಶದ ಐತಿಹಾಸಿಕ ಕೆಂಪುಕೋಟೆಯಿಂದ 6 ಕೋಟಿ 16 ಲಕ್ಷ ಆದಾಯ ಬಂದಿದೆ. ಭಾರತೀಯ ಟಾಪ್ 20 ಸ್ಮಾರಕಗಳಿಂದ ಸುಮಾರು 80.01 ಕೋಟಿ (12.98 USD) ಗಳಿಕೆಯಾಗಿದೆ.
ದೆಹಲಿಯ ಪತೇಫುರ್ ಸಿಖ್ರಿ, ಮಹಾಬಲಿಪುರಂ, ಹೈದರಾಬಾದ್ನ ಚಾರ್ಮಿನಾರ್ ಕೋಟೆ, ಕರ್ನಾಟಕದ ಹಂಪಿ, ಗೋಲ್ಕುಂಡ ಕೋಟೆ ಸೇರಿದಂತೆ ಮತ್ತಿತರ ಸ್ಮಾರಕಗಳಿಗೆ ಗಣನೀಯ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸುಮಾರು 361 ವರ್ಷಗಳ ಇತಿಹಾಸದ ಹಿನ್ನೆಲೆ ಹೊಂದಿರುವ ಪ್ರೇಮ ಸ್ಮಾರಕ ತಾಜಮಹಲ್ ಪ್ರವೇಶ ಶುಲ್ಕ ಪ್ರತಿ ವಿದೇಶಿ ಪ್ರವಾಸಿಗರಿಗೆ ಸುಮಾರು 750 ರು (12.17 USD), ಬಾಂಗ್ಲಾದೇಶ, ಭೂತನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾದ ಪ್ರವಾಸಿಗರಿಗೆ 510 ರು ಹಾಗೂ ತಾಜ್ ಮಹಲ್ ನೋಡಲು ಭಾರತೀಯ ಪ್ರಜೆಗಳಿಗೆ 20 ರು ಪ್ರವೇಶ ಶುಲ್ಕ ದರ ನಿಗದಿಯಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications