Get Updates
Get notified of breaking news, exclusive insights, and must-see stories!

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ: ಸುಪ್ರೀಂನಿಂದ ಐತಿಹಾಸಿಕ ತೀರ್ಪು

ನವದೆಹಲಿ, ಸೆಪ್ಟೆಂಬರ್ 28: ಕೇರಳದ ಪ್ರಸಿದ್ಧ ದೇವಾಲಯವಾದ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅಕ್ಟೋಬರ್ 2 ರಂದು ನಿವೃತ್ತರಾಗುತ್ತಿರುವ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನೀಡಿದ ಮಹತ್ವದ ತೀರ್ಪುಗಳಲ್ಲಿ ಇದೂ ಒಂದಾಗಲಿದೆ.

ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿತ್ತು.

Supreme court verdict on Women entry to Sabarimala

ಆದರೆ ಇದರಿಂದ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ವಿವಾದ ಎದ್ದಿತ್ತು.

Sep 28, 2018, 11:22 am IST

ಧಾರ್ಮಿಕ ಆಚರಣೆಗಳನ್ನು ಸಮಾನತೆಯ ಹಕ್ಕಿನ ಆಧಾರದಮೇಲೆ ನಿರ್ಧರಿಸುವುದಕ್ಕಾಗುವುದಿಲ್ಲ, ಅದು ಭಕ್ತರಿಗೆ ಬಿಟ್ಟಿದ್ದು. ಅತ್ಯಗತ್ಯ ಧಾರ್ಮಿಕ ಆಚರಣೆಗಳನ್ನು ಕೋರ್ಟು ನಿರ್ಧರಿಸುವುದು ಸರಿಯಲ್ಲ- ನ್ಯಾ.ಇಂದು ಮಲ್ಹೋತ್ರಾ, ಪಂಚ ಸದಸ್ಯ ಪೀಠದಲ್ಲಿದ್ದ ಏಕೈಕ ಮಹಿಳಾ ನ್ಯಾಯಮೂರ್ತಿ
Sep 28, 2018, 11:11 am IST

ನಾವು ಕೆಲವು ಧಾರ್ಮಿಕ ಮುಖಂಡರೊಂದಿಗೆ ಚರ್ಚೆ ನಡೆಸಿ, ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸುತ್ತೇವೆ-ಎ.ಪದ್ಮಕುಮಾರ್, ಶಬರಿಮಲೆ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ
Sep 28, 2018, 11:09 am IST

ನನಗೆ ತುಂಬಾ ಸಂತೋಷವಾಗಿದೆ. ನನಗೆ ನ್ಯಾಯಾಂಗ, ಈ ದೇಶದ ಕಾನೂನು ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಸಾಕಷ್ಟು ಗೌರವವಿದೆ. ಈ ತೀರ್ಪು ಸಾಕಷ್ಟು ಸಂತಸವನ್ನುಂಟುಮಾಡಿದೆ. ಇದು ಮಹಿಳೆಯರ ಹೋರಾಟಕ್ಕೆ ಸಂದ ಗೆಲುವು- ಜಯಮಾಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ
Sep 28, 2018, 11:06 am IST

ದೇವಾಲಯದ ನಿಯಮಗಳು ಸಂವಿಧಾನ ವಿಧಿ 14 ಮತ್ತು 25 ಅನ್ನು ಉಲ್ಲಂಘಿಸುತ್ತದೆ- ಸುಪ್ರೀಂ ಕೋರ್ಟ್
Sep 28, 2018, 11:04 am IST

ದೇವಾಲಯದ ಆಡಳಿತ ಮಂಡಳಿ ಹೇರಿದ ನಿರ್ಬಂಧವನ್ನು ಅತ್ಯಗತ್ಯ ಧಾರ್ಮಿಕ ನಿಯಮ ಎಂದು ಪರಿಗಣಿಸುವುದಕ್ಕಾಗುವುದಿಲ್ಲ - ದೀಪಕ್ ಮಿಶ್ರಾ
Sep 28, 2018, 11:01 am IST

ಹತ್ತರಿಂದ ಐವತ್ತು ವರ್ಷ ವಯಸ್ಸಿನ ಮಹಿಳೆಯರನ್ನು ಶಬರಿಮಲೆ ದೇವಾಲಯ ಪ್ರವೇಶದಿಂದ ಹೊರಗಿಟ್ಟಿದ್ದು ಸಂವಿಧಾನದ ತತ್ತ್ವಗಳನ್ನು ಗಾಳಿಗೆ ತೂರಿದಂತೆ- ದೀಪಕ್ ಮಿಶ್ರಾ
Sep 28, 2018, 11:00 am IST

ಪೂಜಿಸುವ ಹಕ್ಕು ಎಲ್ಲ ಭಕ್ತರಿಗೂ ಇದೆ. ಅದರಲ್ಲಿ ಯಾವುದೇ ತಾರತಮ್ಯವಿಲ್ಲ- ದೀಪಕ್ ಮಿಶ್ರಾ
Sep 28, 2018, 10:58 am IST

ಮಹಿಳೆಯರನ್ನು ದುರ್ಬಲರಂತೆ ನೋಡಬಾರದು-ದೀಪಕ್ ಮಿಶ್ರಾ
Sep 28, 2018, 10:55 am IST

ಮಹಿಳೆಯರು ಪುರುಷರು ಇಬ್ಬರೂ ಸಮಾನರು-ದೀಪಕ್ ಮಿಶ್ರಾ
Sep 28, 2018, 10:53 am IST

ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ದೇವಾಲಯದ ಬಾಗಿಲು ತೆರೆದ ಸುಪ್ರೀಂ ಕೋರ್ಟ್
Sep 28, 2018, 10:52 am IST

ತೀರ್ಪನ್ನು ವಿರೋಧಿಸಿದ್ದ ಪೀಠದ ಏಕೈಕ ಮಹಿಳಾ ಸದಸ್ಯರಾದ ನ್ಯಾ.ಇಂದು ಮಲ್ಹೋತ್ರಾ
Sep 28, 2018, 10:52 am IST

4:1 ಅನುಪಾತದದಲ್ಲಿ ಮಹಿಳೆಯರ ಪರ ಬಹುಮತದ ತೀರ್ಪು.
Sep 28, 2018, 10:52 am IST

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ: ಸುಪ್ರೀಂ ಕೋರ್ಟ್ ನಿಂದ ಐತಿಹಾಸಿಕ ತೀರ್ಪು
Sep 28, 2018, 10:46 am IST

ನ್ಯಾ.ಮಿಶ್ರಾ ಮತ್ತು ನ್ಯಾ. ಖಾನ್ವಿಲ್ಕರ್ ರಿಂದ ಜಂಟಿ ತೀರ್ಪು
Sep 28, 2018, 10:46 am IST

ಮಹಿಳೆಯರಿಗೆ ಭಾರತದಲ್ಲಿ ದೇವತೆಯ ಸ್ಥಾನ ನೀಡಲಾಗಿದೆ.
Sep 28, 2018, 10:45 am IST

ಮಹಿಳೆಯರು ಎಂದಿಗೂ ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದಾರೆ- ದೀಪಕ್ ಮಿಶ್ರಾ
Sep 28, 2018, 10:44 am IST

ಮಹಿಳೆಯರನ್ನು ದೀರ್ಘಕಾಲದಿಂದ ತಾರತಮ್ಯದಲ್ಲಿ ನೋಡಲಾಗುತ್ತಿದೆ-ದೀಪಕ್ ಮಿಶ್ರಾ
Sep 28, 2018, 10:43 am IST

ತೀರ್ಪು ಓದುತ್ತಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ
Sep 28, 2018, 10:39 am IST

ನಾಲ್ವರು ನ್ಯಾಯಮೂರ್ತಿಗಳಿಂದ ಪ್ರತ್ಯೇಕ ತೀರ್ಪು
Sep 28, 2018, 10:38 am IST

ಕೋರ್ಟ್ ಹಾಲ್ ಗೆ ಆಗಮಿಸಿದ ನ್ಯಾಯಮೂರ್ತಿಗಳು
Sep 28, 2018, 10:18 am IST

ಧಾರ್ಮಿಕವಾಗಿ ತೀರಾ ಸೂಕ್ಷ್ಮ ವಿಚಾರವಾದ ಶಬರಿಮಲೆ ಪ್ರಕರಣದಲ್ಲಿ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್ ದೇವಾಲಯದ ಆಡಳಿತ ಮಂಡಳಿಯ ಹೇಳಿಕೆಯನ್ನೂ ಪರಿಗಣಿಸಬೇಕು ಎಂದು ಆಡಳಿತ ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ.
Sep 28, 2018, 10:11 am IST

800 ವರ್ಷಗಳಿಂದ ಇದ್ದ ಈ ನಿಯಮವನ್ನು ಇಂಡಿಯನ್ ಯಂಗ್ ಅಸೋಸಿಯೇಷನ್ ಪ್ರಶ್ನಿಸಿತ್ತು.
Sep 28, 2018, 10:01 am IST

ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಮಾನ ಧಾರ್ಮಿಕ ಹಕ್ಕಿದೆ. ಅದನ್ನು ನೆರವೇರಿಸಲು ಅವಕಾಶ ನೀಡಬೇಕು, ಇದಕ್ಕಾಗಿ ಕಾನೂನಿನ ಮೊರೆಹೋಗುವ ಅಗತ್ಯವಿಲ್ಲ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾ.ಚಂದ್ರಚೂಡ ಹೇಳಿದ್ದರು.
Sep 28, 2018, 9:59 am IST

'ದೇವಾಲಯ ಖಾಸಗೀ ಸ್ವತ್ತಲ್ಲ, ಅದು ಸಾರ್ವಜನಿಕ ಆಸ್ತಿ. ನಿಮಗೆ ಬೇಕಾದಂತೆ ನಿಯಮ ರೂಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ' ಎಂದು ಸುಪ್ರೀಂ ಕೋರ್ಟ್ ಕಳೆದ ಜುಲೈ ನಲ್ಲಿ ಖಕಡಕ್ಕಾಗಿ ಹೇಳಿತ್ತು.
Sep 28, 2018, 9:58 am IST

ಆದರೆ ದೇವಾಲಯದ ಆಡಳಿತ ಮಂಡಳಿ, 'ತಾನು ತಲತಲಾಂತರಗಳಿಂದ ಈ ನಿಯಮವನ್ನು ಪಾಲಿಸಿಕೊಂಡು ಬರುತ್ತಿದ್ದು, ಇದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ' ಎಂದಿತ್ತು.
Sep 28, 2018, 9:57 am IST

ಶಬರಿಮಲೆ ಪ್ರಕರಣದ ವಿಚಾರಣೆಯ ಸಮಯದಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಕೇಳಿತ್ತು. ಆದರೆ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲು ತನ್ನ ಅಭ್ಯಂತರವೇನೂ ಇಲ್ಲ ಎಂದು ಕೇರಳ ಸರ್ಕಾರ ಹೇಳಿತ್ತು.
Sep 28, 2018, 9:48 am IST

ಅಯ್ಯಪ್ಪ ದೇವಾಲಯದೊಳಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಿರುವ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ 2006 ರಲ್ಲೇ ಪ್ರಕರಣ ದಾಖಲಿಸಲಾಗಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ 2016 ರಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.
Sep 28, 2018, 9:48 am IST

ಶಬರಿಮಲೆ ಪ್ರಕರಣದ ವಿಚಾರಣೆ ನಡೆಸಿದ ಪಂಚ ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ಸಿಜೆಐ ದೀಪಕ್ ಮಿಶ್ರಾ, ನ್ಯಾ. ಆರ್ ಎಫ್ ನಾರಿಮನ್, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ ಮತ್ತು ನ್ಯಾ. ಇಂದು ಮಲ್ಹೋತ್ರಾ ಅವರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+