Get Updates
Get notified of breaking news, exclusive insights, and must-see stories!

ಉತ್ತರ ಪತ್ರಿಕೆಯಲ್ಲಿ 'ಜೈ ಶ್ರೀ ರಾಮ್' ಬರೆದ ವಿದ್ಯಾರ್ಥಿಗಳು, ಪಾಸು ಮಾಡಿದ ಪ್ರೊಫೆಸರ್!

ಲಕ್ನೋ, ಏಪ್ರಿಲ್. 27: ವಿದ್ಯಾರ್ಥಿಗಳು ಪರೀಕ್ಷೆ ಪಾಸು ಮಾಡಲು ಹಗಲು ರಾತ್ರಿ ಕಷ್ಟ ಪಟ್ಟು ಓದಿರುತ್ತಾರೆ. ಓದಿದ ಎಲ್ಲಾ ವಿಚಾರಗಳನ್ನು ಉತ್ತರ ಪತ್ರಿಕೆಯಲ್ಲಿ ಬರೆದು ಉತ್ತೀರ್ಣರಾಗುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ ಹಾಗೇನು ಮಾಡೋ ಹಾಗಿಲ್ಲ ಬಿಡಿ. ಉತ್ತರ ಪತ್ರಿಕೆಯಲ್ಲಿ ಜೈ ಶ್ರೀರಾಮ್, ಕ್ರಿಕೆಟಿಗರ ಹೆಸರನ್ನು ಬರೆದರು ಸಾಕು!.

ಹೌದು... ಉತ್ತರ ಪ್ರದೇಶದ ಜೌನ್‌ಪುರದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ (ವಿಬಿಎಸ್‌ಪಿ) ವಿಶ್ವವಿದ್ಯಾನಿಲಯದಲ್ಲಿ 18 ಪ್ರಥಮ ವರ್ಷದ ಫಾರ್ಮಸಿ ಕೋರ್ಸ್ ವಿದ್ಯಾರ್ಥಿಗಳು 'ಜೈ ಶ್ರೀ ರಾಮ್' ಮತ್ತು ಕೆಲವು ಕ್ರಿಕೆಟಿಗರ ಹೆಸರನ್ನು (ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಇತರರು) ಬರೆದು ಪಾಸ್ ಆಗಿದ್ದಾರೆ. ಅದು ಕೂಡ 50% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

Students Clear Exam With Jai Shri Ram cricketers names in Answers Professors Suspended

RTI ಪ್ರಕಾರ, ವಿದ್ಯಾರ್ಥಿಗಳನ್ನು ಪಾಸು ಮಾಡಲು ಅಂಕಗಳ ವಿನಿಮಯ ಮಾಡಿ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಇಬ್ಬರು ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ. 'ಎನ್‌ಡಿಟಿವಿ' ಉತ್ತರ ಪತ್ರಿಕೆಗಳನ್ನು ತರಿಸಿಕೊಂಡಿದ್ದು, ಉತ್ತರಗಳ ಮಧ್ಯದಲ್ಲಿ ಜೈ ಶ್ರೀ ರಾಮ್ ಎಂಬುದು ಕಾಣಿಸುತ್ತಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ವಿಬಿಎಸ್‌ಪಿ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ ದಿವ್ಯಾಂಶು ಸಿಂಗ್ ಅವರು ಆರ್‌ಟಿಐ ಸಲ್ಲಿಸಿದ್ದರು. ವಿದ್ಯಾರ್ಥಿಗಳ ರೋಲ್ ಸಂಖ್ಯೆಗಳನ್ನು ನೀಡುವ ಮೂಲಕ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಕೋರಿದರು. ಉತ್ತೀರ್ಣ ಮಾಡಿರುವ ಪ್ರಾಧ್ಯಾಪಕರನ್ನು ವಿನಯ್ ವರ್ಮಾ ಮತ್ತು ಆಶಿಶ್ ಗುಪ್ತಾ ಎಂದು ಗುರುತಿಸಿದ್ದಾರೆ. ಅವರು ಅಫಿಡವಿಟ್ನೊಂದಿಗೆ ಔಪಚಾರಿಕ ದೂರನ್ನು ಸಲ್ಲಿಸಿದ್ದು, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರಿಗೆ ಸಾಕ್ಷ್ಯವನ್ನು ಸಲ್ಲಿಸಿದ್ದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಕರಣದ ಬಗ್ಗೆ ರಾಜ್ಯಪಾಲರು ತನಿಖೆಗೆ ಆದೇಶಿಸಿದರು. ನಂತರ ವಿಶ್ವವಿದ್ಯಾಲಯವು ಆರೋಪದಳ ತನಿಖೆಗೆ ಸಮಿತಿಯನ್ನು ರಚಿಸಿತು. ತರುವಾಯ, ಬಾಹ್ಯ ಮೌಲ್ಯಮಾಪನವು ಉತ್ತರಗಳಿಗೆ ವ್ಯತ್ಯಾಸಗಳನ್ನು ಬಹಿರಂಗಪಡಿಸಿತು, ಅಲ್ಲಿ ವಿದ್ಯಾರ್ಥಿಗಳಿಗೆ ಕ್ರಮವಾಗಿ 0 ಮತ್ತು 4 ಅಂಕಗಳನ್ನು ನೀಡಲಾಗುತ್ತದೆ.

ತಪ್ಪಾದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿರುವ ಪ್ರಾಧ್ಯಾಪಕರನ್ನು ವಜಾಗೊಳಿಸಲು ಶಿಫಾರಸು ಮಾಡಲಾಗಿದೆ ಎಂದು ಉಪಕುಲಪತಿ ವಂದನಾ ಸಿಂಗ್ ಖಚಿತಪಡಿಸಿದ್ದಾರೆ. ಮರುಮೌಲ್ಯಮಾಪನದ ನಂತರ ವಿದ್ಯಾರ್ಥಿಗಳ ಅಂಕಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಯಿತು. ಸಂಶೋಧನೆಗಳಿಗೆ ಸಂಬಂಧಿಸಿದ ಪತ್ರವ್ಯವಹಾರವನ್ನು ಮುಂದಿನ ಕ್ರಮಕ್ಕಾಗಿ ಗವರ್ನರ್ ಆನಂದಿಬೆನ್ ಪಟೇಲ್ ಅವರಿಗೆ ರವಾನಿಸಲು ನಿರ್ಧರಿಸಲಾಗಿದೆ.

ಇದೀಗ ಇಬ್ಬರ ವಿರುದ್ಧ ಶಿಸ್ತು ಕ್ರಮ ಸನ್ನಿಹಿತವಾಗಿದೆ. ಅವರಲ್ಲಿ, ವಿನಯ್ ವರ್ಮಾ ಅವರು ಪರೀಕ್ಷೆಯ ಸಮಯದಲ್ಲಿ ಈ ಹಿಂದೆಯೂ ಆರೋಪಗಳನ್ನು ಎದುರಿಸಿದ್ದರು, ಇದರ ಪರಿಣಾಮವಾಗಿ ಅವರನ್ನು ಆಡಳಿತಾತ್ಮಕ ಕರ್ತವ್ಯಗಳಿಂದ ತೆಗೆದುಹಾಕಲಾಯಿತು.

ಬುಧವಾರ ನಡೆದ ಪರೀಕ್ಷಾ ಸಮಿತಿ ಸಭೆಯಲ್ಲಿ ಪರೀಕ್ಷಕರಾದ ಡಾ ವಿನಯ್ ವರ್ಮಾ ಮತ್ತು ಮನೀಶ್ ಗುಪ್ತಾ ಅವರನ್ನು ಅಮಾನತುಗೊಳಿಸಲಾಗಿದೆ. ಇಂತಹ ಘಟನೆ ಪುನರಾವರ್ತನೆಯಾಗದಂತೆ ಶಿಕ್ಷಕರಿಗೆ ಎಚ್ಚರಿಕೆ ನೀಡಲಾಗಿದೆ. ಒಳಗೊಂಡಿರುವ ಶಿಕ್ಷಕರನ್ನು ವಜಾಗೊಳಿಸಲು ಸಮಿತಿ ಶಿಫಾರಸು ಮಾಡಿದೆ. ಆದರೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ನೀತಿ ಸಂಹಿತೆ ತೆರವಾದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪಕುಲಪತಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+