Get Updates
Get notified of breaking news, exclusive insights, and must-see stories!

ಸಾವರ್ಕರ್ ಅವರನ್ನು ಅವಮಾನಿಸುವುದನ್ನು ನಿಲ್ಲಿಸಿ: ದೇವೇಂದ್ರ ಫಡ್ನವಿಸ್

ಮುಂಬೈ, ಡಿಸೆಂಬರ್‌ 28: ಸಾವರ್ಕರ್ ಅವರಿಗೆ ಅವಮಾನ ಮಾಡುತ್ತಿರುವುದರ ಬಗ್ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಂಗಳವಾರ ರಾಜ್ಯ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಸ್ವಾತಂತ್ರ್ಯ ಹೋರಾಟಗಾರನಿಗೆ ವಿರೋಧ ಪಕ್ಷದ ನಾಯಕರು ಅವಮಾನಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಕೆಲವು ಮಹಾನೀಯರ ಬಗ್ಗೆ ಕೆಲವು ವಿರೋಧ ಪಕ್ಷದ ನಾಯಕರು ಆಕ್ಷೇಪಾರ್ಹ ಹೇಳಿಕೆಗಳ ನೀಡಿದ್ದರಿಂದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಡ್‌ ಅವರು ಈ ಹೇಳಿಕೆ ನೀಡಿದ್ದಾರೆ. ಉದ್ಧವ್‌ ಠಾಕ್ರೆ ಗುಂಪಿನ ಶಾಸಕ ಅನಿಲ್ ಪರಬ್ ಅವರು ವಿಧಾನ ಪರಿಷತ್ತಿನಲ್ಲಿ ಮಹಾಪುರುಷರ ಅವಹೇಳನದ ವಿಷಯವನ್ನು ಪ್ರಸ್ತಾಪಿಸಿದ ಅವರು ಆಡಳಿತಾರೂಢ ಬಿಜೆಪಿ ಮತ್ತು ಶಿಂಧೆ ಗುಂಪನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಯಾಗಿ ಫಡ್ನವಿಸ್ ಕೂಡ ಇದೇ ವಿಷಯದ ಕುರಿತು ಹೇಳಿಕೆ ನೀಡಿದ್ದಾರೆ. ಮಹಾಪುರುಷರ ಬಗ್ಗೆ ವಿರೋಧ ಪಕ್ಷದ ನಾಯಕರು ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳನ್ನು ಓದಿದ ಅವರು, ಸಾವರ್ಕರ್‌ರನ್ನು ಅವಮಾನಿಸುವ ಬಗ್ಗೆ ಪರಬ್ ಏಕೆ ಹೇಳಿಲ್ಲ ಎಂದು ಪ್ರಶ್ನಿಸಿದರು.

Stop insulting Savarkar: Devendra Fadnavis

ಪರಬ್ ಸಾಹೇಬ್, ನಿಮ್ಮ ಭಾಷಣದಲ್ಲಿ ನೀವು ಒಮ್ಮೆಯೂ ಸ್ವಾತಂತ್ರ್ಯ ಹೋರಾಟಗಾರ ವಿ ಡಿ ಸಾವರ್ಕರ್ ಅವರ ಉದಾಹರಣೆಯನ್ನು ನೀಡಲಿಲ್ಲ. ರಾಹುಲ್ ಗಾಂಧಿಯವರು ಸ್ವಾತಂತ್ರ್ಯ ವೀರ ಸಾವರ್ಕರ್ ಅವರನ್ನು ಕ್ಷಮಾಪಣೆ ಮತ್ತು ಸ್ವಯಂ ಘೋಷಿತ ಹಿಂದುತ್ವವಾದಿ ಎಂದು ಕರೆಯುತ್ತಾರೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ನನ್ನ ಪ್ರಕಾರ, ಸಾವರ್ಕರ್‌ಗೆ ಭಾರತ ರತ್ನ ಸಿಗದಿದ್ದರೂ, ಕನಿಷ್ಠ ಅವರನ್ನು ಅವಮಾನಿಸುವುದನ್ನು ನಿಲ್ಲಿಸಿ ಎಂದು ಫಡ್ನವಿಸ್ ಹೇಳಿದರು.

ಮಹಾ ವಿಕಾಸ್ ಅಘಾಡಿಯ ವಿವಿಧ ನಾಯಕರು ಮಹಾನ್ ಪುರುಷರ ಬಗ್ಗೆ ನೀಡಿದ ಹೇಳಿಕೆಗಳನ್ನು ಫಡ್ನವಿಸ್ ಓದಿದರು. ಈ ಬಗ್ಗೆ ನೀವು ಈ ಬಗ್ಗೆ ಏನನ್ನೂ ಹೇಳುತ್ತಿಲ್ಲ, ನೀವು ಈ ಬಗ್ಗೆ ಮೌನವಾಗಿದ್ದೀರಿ ಎಂದು ಅವರು ಹೇಳಿದರು. ಬಳಿಕ ಕೌನ್ಸಿಲ್ ಅನ್ನು ಬುಧವಾರಕ್ಕೆ ಮುಂದೂಡಲಾಯಿತು.

ಕಳೆದ ನವೆಂಬರ್‌ನಲ್ಲಿ ಮಹಾರಾಷ್ಟ್ರ ಸಂಸದ ಸಂಜಯ್‌ ರಾವತ್‌ ಅವರು ಈ ದೇಶ ಜವಾಹರಲಾಲ್ ನೆಹರು ಅವರ ನಾಡು. ಸ್ವಾತಂತ್ರ್ಯ ನಾಯಕರನ್ನು ಇಡೀ ದೇಶ ಗೌರವಿಸುತ್ತದೆ. ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್, ಪಂಡಿತ್ ಜವಾಹರಲಾಲ್ ನೆಹರು, ವಲ್ಲಭಭಾಯಿ ಪಟೇಲ್ ಮತ್ತು ಮಹಾತ್ಮ ಗಾಂಧಿ, ಈ ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ತ್ಯಾಗ ಮಾಡಿದ ಎಲ್ಲರಿಗೂ ಇಡೀ ದೇಶವು ಅವರ ಬಗ್ಗೆ ಗೌರವ ಮತ್ತು ನಂಬಿಕೆಯನ್ನು ಹೊಂದಿದೆ ಎಂದು ರಾವತ್ ಹೇಳಿದ್ದರು.

Stop insulting Savarkar: Devendra Fadnavis

ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ದೇಶಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಮತ್ತು ಇದು ಅವರ ಭೂಮಿಯಾಗಿದೆ. ಪಂಡಿತ್ ಜವಾಹರಲಾಲ್ ನೆಹರೂ ಅವರು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಲ್ಲದಿದ್ದರೆ ದೇಶ ಪಾಕಿಸ್ತಾನದಂತಾಗಲು ಹೆಚ್ಚು ಸಮಯ ಹಿಡಿಯುತ್ತಿರಲಿಲ್ಲ. ದೇಶವು ಪಂಡಿತ್ ಜವಾಹರಲಾಲ್ ನೆಹರು ಅವರ ನಾಡು ಎಂದು ರಾವತ್ ಸ್ಮರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+