ಸ್ಪೈಸ್ ಜೆಟ್ ನಲ್ಲಿನ ಬ್ಯಾಗೇಜ್ ಸಾಗಾಣಿಕೆ ಶುಲ್ಕ ಗಣನೀಯ ಏರಿಕೆ
ಸ್ಪೈಸ್ ಜೆಟ್ ಕಂಪನಿಯಿಂದ ಬ್ಯಾಗೇಜ್ ಶುಲ್ಕ ಏರಿಕೆ. 5 ಕೆಜಿಗಿಂತ ಹೆಚ್ಚಿನ ಬ್ಯಾಗೇಜ್ ಗೆ ಸ್ಪೈಸ್ ಜೆಟ್ ಏರ್ ಲೈನ್ಸ್ ಸಂಸ್ಥೆಯ ನಿರ್ಧಾರದಿಂದ ಎಲ್ಲಾ ಪ್ರಯಾಣಿಕರಲ್ಲಿ ಆತಂಕ.
ಬೆಂಗಳೂರು, ಆಗಸ್ಟ್ 19: ಬಜೆಟ್ ವಿಮಾನವೆಂದೇ ಖ್ಯಾತಿ ಗಳಿಸಿರುವ ಸ್ಪೈಸ್ ಜೆಟ್ ವಿಮಾನ ಸೇವಾ ಸಂಸ್ಥೆಯು, ತಾನು ಒದಗಿಸುವ ಪ್ರಯಾಣಿಕರ ಬ್ಯಾಗೇಜ್ ಸಾಗಾಣಿಕೆ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಿದೆ.
ಈ ಮೊದಲು ಇದ್ದಂತೆ, ಶುಲ್ಕ ರಹಿತ ಬ್ಯಾಗ್ ನ ಭಾರದ ಮಿತಿಯನ್ನು 15ರಿಂದ 5ಕ್ಕೆ ಇಳಿಸಲಾಗಿದ್ದು, 5 ಕೆಜಿಗಿಂತ ಹೆಚ್ಚಿನ ಭಾರವಿರುವ ಪ್ರತಿ ಬ್ಯಾಗೇಜ್ ಗೆ ಇನ್ನು 1,425 ರು. ಶುಲ್ಕ ನಿಗದಿಪಡಿಸಲಾಗಿದೆ. ಈ ಮೊದಲು 15 ಕೆಜಿ ಮೇಲ್ಪಟ್ಟ ಭಾರದ ಲಗೇಜಿಗೆ 500 ರು. ತೆರಬೇಕಿತ್ತು. ಈಗ, ಭಾರದ ಮಿತಿ ಹಾಗೂ ಶುಲ್ಕ ಪದ್ಧತಿ - ಈ ಎರಡರಲ್ಲೂ ಬದಲಾವಣೆ ತರಲಾಗಿದೆ.

ಆದರೆ, ವಿಮಾನ ಪ್ರಯಾಣಿಕರಿಗೆ ಆತಂಕವಾಗುವ ವಿಚಾರ ಇದಲ್ಲ. ಈಗ ಸ್ಪೈಸ್ ಜೆಟ್ ಕೈಗೊಂಡಿರುವ ಕ್ರಮವನ್ನು ಇತರ ವಿಮಾನ ಯಾನ ಸಂಸ್ಥೆಗಳೂ ಅನುಕರಿಸಬಹುದು ಎಂಬ ಆತಂಕ ಎದುರಾಗಿದೆ.
ಕೆಲವು ದಿನಗಳ ಹಿಂದಷ್ಟೇ, ನಾಗರಿಕ ವಿಮಾನ ಯಾನ ಸೇವಾ ಸಂಸ್ಥೆಗಳ ಮಹಾ ನಿರ್ದೇಶಕರ ಕಚೇರಿಯು, ಎಲ್ಲಾ ಖಾಸಗಿ ವಿಮಾನ ನಿಲ್ದಾಣಗಳಲ್ಲಿ 15ರಿಂದ 20 ಕೆಜಿ ವರೆಗಿನ ಬ್ಯಾಗೇಜ್ ಗಳ ಮೇಲೆ ಪ್ರತಿ ಕೆಜಿಗೆ 100 ರು. ಶುಲ್ಕ ವಿಧಿಸುವ ಆದೇಶಕ್ಕೆ ಅಂಕಿತ ಹಾಕಿತ್ತು.
ಆದರೆ, ಈ ಆದೇಶವನ್ನು ಭಾರತೀಯ ಖಾಸಗಿ ವಿಮಾನ ಸೇವಾ ಸಂಸ್ಥೆಗಳ ಒಕ್ಕೂಟ (ಫಿಯಾ) ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಇದರ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, ಆದೇಶವನ್ನು ರದ್ದುಗೊಳಿಸಿ, ಪ್ರಯಾಣಿಕರಿಗೆ ಆಗಬೇಕಿದ್ದ ಹೆಚ್ಚಿನ ಶುಲ್ಕದ ಭಾರವನ್ನು ಇಳಿಸಿತು.
ಹಾಗೆ ಶುಲ್ಕ ಏರಿಕೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ 'ಫಿಯಾ' ಸದಸ್ಯ ಸಂಸ್ಥೆಯಾದ ಸ್ಪೈಸ್ ಜೆಟ್ ಕಂಪನಿಯೇ ಲಗೇಜ್ ನ ಶುಲ್ಕವನ್ನು ಏರಿಸಿರುವುದು ಪ್ರಯಾಣಿಕರಲ್ಲಿ ದಿಗಿಲು ಹುಟ್ಟಿಸಲು ಕಾರಣವಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications