'ಸ್ಪೈಸ್ ಜೆಟ್' ಉದ್ಯಮಿ ಅಜಯ್ ಸಿಂಗ್ ರಿಂದ 'ಎನ್ಡಿಟಿವಿ' ಖರೀದಿ?
ನವದೆಹಲಿ, ಸೆಪ್ಟೆಂಬರ್ 22: "ಭಾರತ ಪ್ರಪ್ರಥಮ ಖಾಸಗಿ ಇಂಗ್ಲೀಷ್ ಸುದ್ದಿ ವಾಹಿನಿ ಎನ್ಡಿಟಿವಿ ಮಾರಾಟವಾಗಲಿದೆ. ಸಂಸ್ಥೆಯನ್ನು 2014ರ ಲೋಕಸಭೆ ಚುನಾವಣೆ ವೇಳೆ 'ಆಪ್ ಕಿ ಬಾರ್, ಮೋದಿ ಸರ್ಕಾರ್' ಘೋಷಣೆ ನೀಡಿದ ಸ್ಪೈಸ್ ಜೆಟ್ ಸಹ ಸಂಸ್ಥಾಪಕ ಅಜಯ್ ಸಿಂಗ್ ಖರೀದಿಸಲಿದ್ದಾರೆ." ಹೀಗೊಂದು ಗಾಳಿ ಸುದ್ದಿ ಮಾಧ್ಯಮ ವಲಯದಲ್ಲಿ ಓಡಾಡುತ್ತಿದೆ.
ಈ ಸುದ್ದಿಯನ್ನು ಸುಳ್ಳು ಮತ್ತು ಸತ್ಯ ಎಂದು ಹಲವು ಮಾಧ್ಯಮಗಳು ಬೇರೆ ಬೇರೆ ವರದಿಗಳನ್ನು ಪ್ರಕಟಿಸಿವೆ.

ಇನ್ನು ಇದೇ ಎನ್ಡಿಟಿವಿಯ ಕಚೇರಿ ಮೇಲೆ ಕಳೆದ ಜುಲೈ 5ರಂದು ಸಿಬಿಐ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಎನ್ಡಿಟಿವಿಯ ಶೇ. 40 ಶೇರುಗಳನ್ನು ಅಜಯ್ ಸಿಂಗ್ ಖರೀದಿಸಲಿದ್ದಾರೆ ಮತ್ತು ಸಂಪಾದಕೀಯ ಹಕ್ಕುಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು 'ಇಂಡಿಯನ್ ಎಕ್ಸ್ ಪ್ರೆಸ್' ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇನ್ನು ಚಾನಲ್ ನ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಶೇ. 20 ಶೇರುಗಳನ್ನು ತಮ್ಮ ಬಳಿಯಲ್ಲೇ ಇಟ್ಟುಕೊಳ್ಳಲಿದ್ದಾರೆ ಎಂದು ವರದಿ ಹೇಳಿದೆ.
ಎನ್ಡಿಟಿವಿಯ400 ಕೋಟಿ ಸಾಲದ ಹೊಣೆಯನ್ನು ಅಜಯ್ ಸಿಂಗ್ ಹೆಗಲೇರಿಸಿಕೊಳ್ಳಲಿದ್ದಾರೆ, ಒಟ್ಟಾರೆ 600 ಕೂಟಿ ರೂಪಾಯಿಯ ಡೀಲ್ ಇದು ಎಂದು 'ಇಂಡಿಯನ್ ಎಕ್ಸ್ ಪ್ರೆಸ್' ಹೇಳಿದೆ.
ಡೀಲ್ ಪ್ರಕಾರ ಸುಮಾರು 100 ಕೋಟಿ ರೂಪಾಯಿಯನ್ನು ರಾಯ್ ದಂಪತಿ ಪಡೆದುಕೊಳ್ಳಲಿದ್ದಾರೆ ಎಂದು ಅದು ಹೇಳಿದೆ.
ಆದರೆ, ಈ ಸುದ್ದಿ ಶುದ್ಧ ಸುಳ್ಳು ಎಂದು ಚಾನಲ್ ನ ಮೂಲಗಳು ಹೇಳಿದ್ದಾಗಿ 'ದಿ ಹಿಂದೂ' ವರದಿ ಮಾಡಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications