ಇಂದು ಸಾಮಾಜಿಕ ಮಾಧ್ಯಮ ದಿನ: ನಿಮ್ಮ ನೆಚ್ಚಿನ ಜಾಲತಾಣ ಯಾವುದು?
'ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ..' ಎಂದು ಟೇಪ್ ರೆಕಾರ್ಡರ್ ಧ್ವನಿ ಮಾಡುವ ಮೊದಲೇ ಕಣ್ಣು ಫೇಸ್ ಬುಕ್, ವಾಟ್ಸಾಪು, ಇನ್ ಸ್ಟಾಗ್ರಾಂಗಳನ್ನೆಲ್ಲ ಒಮ್ಮೆ ತಡಕಿ ಬಂದಿರುತ್ತದೆ. ಈ ಕಾಲಕ್ಕೆ ಈ ಸೋಶಿಯಲ್ ಮೀಡಿಯಾನೇ ಸುಪ್ರಭಾತ!
ಕೂತಿದ್ದು, ನಿಂತಿದ್ದು, ಉಂಡಿದ್ದು, ತಿಂದಿದ್ದು, ಅತ್ತಿದ್ದು, ನಕ್ಕಿದ್ದು, ಬಿದ್ದಿದ್ದು, ಎದ್ದಿದ್ದು... ಎಲ್ಲವನ್ನೂ ಕ್ಷಣ ಮಾತ್ರದಲ್ಲಿ ಸಾಮಾಜಿಕ ಮಾಧ್ಯಗಳಲ್ಲಿ ಪೋಸ್ಟ್ ಮಾಡುವ ಈ ಕಾಲದಲ್ಲಿ ಸೋಶಿಯಲ್ ಮೀಡಿಯಾ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ!
ಅಷ್ಟಕ್ಕೂ ಈ ಸೋಶೀಯಲ್ ಮೀಡಿಯಾ ಬಗ್ಗೆ ಯಾಕಿಷ್ಟು ಮಾತು ಅಂದ್ರೆ... 'ಪ್ರತಿ ವರ್ಷ ಜೂನ್ 30 ಅನ್ನು ಸಾಮಾಜಿಕ ಮಾಧ್ಯಮ ದಿನ ಎಂದು ಆಚರಿಸಲಾಗುತ್ತದೆಯಂತೆ!' ಜಾಗತಿಕ ಸಂವಹನದಲ್ಲಿ ಸಾಮಜಿಕ ಮಾಧ್ಯಮದ ಪಾತ್ರ, ಮಹತ್ವ ಮತ್ತು ಪರಿಣಾಮಗಳನ್ನು ಮನಗಂಡು ಈ ದಿನವನ್ನು ಆಚರಿಸಲಾಗುತ್ತಿದೆ.
ಇಂತಿಪ್ಪ ಸೋಶಿಯಲ್ ಮೀಡಿಯಾ ದಿನ, ಇಂದಿನ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಕೂಡ ಹೌದು! ಈ ದಿನಕ್ಕೆ ಹಲವರು ಶುಭಾಶಯ ಕೋರಿದ್ದು, ಸಮಾಜಿಕ ಮಾಧ್ಯಮಗಳನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳೋಣವೆಂದಿದ್ದಿದ್ದಾರೆ.
| Array |
ಕಲ್ಪಿಸಿಕೊಳ್ಳಲೂ ಅಸಾಧ್ಯ!
'ಸೋಶಿಯಲ್ ಮೀಡಿಯಾ ಇಲ್ಲದ ಬದುಕು ಊಹಿಸಿಕೊಳ್ಳುವುದಕ್ಕೂ ಅಸಾಧ್ಯ! ನಮ್ಮೆಲ್ಲರ ಜೀವನದಲ್ಲಿ ಅದು ಎಂಥ ಮಹತ್ವದ ಪಾತ್ರ ವಹಿಸಿದೆ ಎಂಬುದು ವರ್ಣಿಸುವುದನ್ನು ಕಷ್ಟ. ನನ್ನೆಲ್ಲ ಸ್ನೇಹಿತರಿಗೂ ಸೋಶಿಯಲ್ ಮೀಡಿಯಾ ದಿನದ ಶುಭಾಶಯಗಳು' ಎಂದಿದ್ದಾರೆ ಸಾಗರ್ ಕಾಂಬ್ಳೆ.
|
ಸಮಾಜದ ಒಳಿತಿಗೆ ಬಳಸೋಣ
ಸೋಶಿಯಲ್ ಮೀಡಿಯಾ ದಿನದ ಶುಭಾಶಯಗಳು. ಸಾಮಾಜಿಕ ಮಾಧ್ಯಮಗಳನ್ನು ಧನಾತ್ಮಕವಾಗಿ ಬಳಸಿಕೊಂಡು ಸಮಾಜದ ಒಳಿತಿಗಾಗಿ, ಸಮಾಜವನ್ನು ಬಲಾಡ್ಯಗೊಳಿಸುವುದಕ್ಕಾಗಿ ಪ್ರಯತ್ನಿಸೋಣ ಎಂದಿದ್ದಾರೆ ನಿಶಾ ಗುಪ್ತಾ.
|
ನಕಲಿ ಸುದ್ದಿ ವಿರುದ್ಧ ಧ್ವನಿ ಎತ್ತೋಣ!
ಸಾಮಾಜಿಕ ಮಾಧ್ಯಮ ದಿನದಂದು ಎಲ್ಲಾ ಸಾಮಾನ್ಯ ಜನರಿಗೂ ನನ್ನ ಶುಭ ಹಾರೈಕೆಗಳು. ಈ ದಿನದಿಂದ ಎಲ್ಲಾ ನಕಲಿ ಸುದ್ದಿಗಳ ವಿರುದ್ಧ, ಕುಟುಂಬ ರಾಜಕಾರಣದ ವಿರುದ್ಧ, ಶಿಕ್ಷಣದ ಅವ್ಯಸ್ಥೆ ವಿರುದ್ಧ, ವೈದ್ಯಕೀಯ ಕ್ಷೇತ್ರದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತೋಣ. ಭಾರತವನ್ನು ಸ್ವಚ್ಛವಾಗಿಸೋಣ ಎಂದಿದ್ದಾರೆ ದಿನೇಶ್ ಸಿಂಗ್.
|
ಕೇವಲ ಆಚರಣೆಯಿಂದ ಪ್ರಯೋಜನವಿಲ್ಲ
ಕೇವಲ ಸಾಮಾಜಿಕ ಮಾಧ್ಯಮ ದಿನ ಆಚರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮೊದಲು ಅದನ್ನು ಬಳಸುವುದು ಹೇಗೆ ತ್ತು ಆ ಮೂಲಕ ಉತ್ತಮ, ನಿಖರ ಮಾಹಿತಿ ನೀಡುವುದು ಹೇಗೆ ಎಂಬುದು ಗೊತ್ತಿರಬೇಕು. ಸಮಾಜ ಸುಧಾರಣೆಗೆ ಸಹಕಾರಿಯಾಗುವಂಥದ್ದನ್ನೇ ಶೇರ್ ಮಾಡಿ ಎಂದಿದ್ದಾರೆ ಡ್ಯಾಸಿ ಗಗನ್ದೀಪ್.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ












Click it and Unblock the Notifications