ಇಂದು ಸಾಮಾಜಿಕ ಮಾಧ್ಯಮ ದಿನ: ನಿಮ್ಮ ನೆಚ್ಚಿನ ಜಾಲತಾಣ ಯಾವುದು?
'ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ..' ಎಂದು ಟೇಪ್ ರೆಕಾರ್ಡರ್ ಧ್ವನಿ ಮಾಡುವ ಮೊದಲೇ ಕಣ್ಣು ಫೇಸ್ ಬುಕ್, ವಾಟ್ಸಾಪು, ಇನ್ ಸ್ಟಾಗ್ರಾಂಗಳನ್ನೆಲ್ಲ ಒಮ್ಮೆ ತಡಕಿ ಬಂದಿರುತ್ತದೆ. ಈ ಕಾಲಕ್ಕೆ ಈ ಸೋಶಿಯಲ್ ಮೀಡಿಯಾನೇ ಸುಪ್ರಭಾತ!
ಕೂತಿದ್ದು, ನಿಂತಿದ್ದು, ಉಂಡಿದ್ದು, ತಿಂದಿದ್ದು, ಅತ್ತಿದ್ದು, ನಕ್ಕಿದ್ದು, ಬಿದ್ದಿದ್ದು, ಎದ್ದಿದ್ದು... ಎಲ್ಲವನ್ನೂ ಕ್ಷಣ ಮಾತ್ರದಲ್ಲಿ ಸಾಮಾಜಿಕ ಮಾಧ್ಯಗಳಲ್ಲಿ ಪೋಸ್ಟ್ ಮಾಡುವ ಈ ಕಾಲದಲ್ಲಿ ಸೋಶಿಯಲ್ ಮೀಡಿಯಾ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ!
ಅಷ್ಟಕ್ಕೂ ಈ ಸೋಶೀಯಲ್ ಮೀಡಿಯಾ ಬಗ್ಗೆ ಯಾಕಿಷ್ಟು ಮಾತು ಅಂದ್ರೆ... 'ಪ್ರತಿ ವರ್ಷ ಜೂನ್ 30 ಅನ್ನು ಸಾಮಾಜಿಕ ಮಾಧ್ಯಮ ದಿನ ಎಂದು ಆಚರಿಸಲಾಗುತ್ತದೆಯಂತೆ!' ಜಾಗತಿಕ ಸಂವಹನದಲ್ಲಿ ಸಾಮಜಿಕ ಮಾಧ್ಯಮದ ಪಾತ್ರ, ಮಹತ್ವ ಮತ್ತು ಪರಿಣಾಮಗಳನ್ನು ಮನಗಂಡು ಈ ದಿನವನ್ನು ಆಚರಿಸಲಾಗುತ್ತಿದೆ.
ಇಂತಿಪ್ಪ ಸೋಶಿಯಲ್ ಮೀಡಿಯಾ ದಿನ, ಇಂದಿನ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಕೂಡ ಹೌದು! ಈ ದಿನಕ್ಕೆ ಹಲವರು ಶುಭಾಶಯ ಕೋರಿದ್ದು, ಸಮಾಜಿಕ ಮಾಧ್ಯಮಗಳನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳೋಣವೆಂದಿದ್ದಿದ್ದಾರೆ.
| Array |
ಕಲ್ಪಿಸಿಕೊಳ್ಳಲೂ ಅಸಾಧ್ಯ!
'ಸೋಶಿಯಲ್ ಮೀಡಿಯಾ ಇಲ್ಲದ ಬದುಕು ಊಹಿಸಿಕೊಳ್ಳುವುದಕ್ಕೂ ಅಸಾಧ್ಯ! ನಮ್ಮೆಲ್ಲರ ಜೀವನದಲ್ಲಿ ಅದು ಎಂಥ ಮಹತ್ವದ ಪಾತ್ರ ವಹಿಸಿದೆ ಎಂಬುದು ವರ್ಣಿಸುವುದನ್ನು ಕಷ್ಟ. ನನ್ನೆಲ್ಲ ಸ್ನೇಹಿತರಿಗೂ ಸೋಶಿಯಲ್ ಮೀಡಿಯಾ ದಿನದ ಶುಭಾಶಯಗಳು' ಎಂದಿದ್ದಾರೆ ಸಾಗರ್ ಕಾಂಬ್ಳೆ.
|
ಸಮಾಜದ ಒಳಿತಿಗೆ ಬಳಸೋಣ
ಸೋಶಿಯಲ್ ಮೀಡಿಯಾ ದಿನದ ಶುಭಾಶಯಗಳು. ಸಾಮಾಜಿಕ ಮಾಧ್ಯಮಗಳನ್ನು ಧನಾತ್ಮಕವಾಗಿ ಬಳಸಿಕೊಂಡು ಸಮಾಜದ ಒಳಿತಿಗಾಗಿ, ಸಮಾಜವನ್ನು ಬಲಾಡ್ಯಗೊಳಿಸುವುದಕ್ಕಾಗಿ ಪ್ರಯತ್ನಿಸೋಣ ಎಂದಿದ್ದಾರೆ ನಿಶಾ ಗುಪ್ತಾ.
|
ನಕಲಿ ಸುದ್ದಿ ವಿರುದ್ಧ ಧ್ವನಿ ಎತ್ತೋಣ!
ಸಾಮಾಜಿಕ ಮಾಧ್ಯಮ ದಿನದಂದು ಎಲ್ಲಾ ಸಾಮಾನ್ಯ ಜನರಿಗೂ ನನ್ನ ಶುಭ ಹಾರೈಕೆಗಳು. ಈ ದಿನದಿಂದ ಎಲ್ಲಾ ನಕಲಿ ಸುದ್ದಿಗಳ ವಿರುದ್ಧ, ಕುಟುಂಬ ರಾಜಕಾರಣದ ವಿರುದ್ಧ, ಶಿಕ್ಷಣದ ಅವ್ಯಸ್ಥೆ ವಿರುದ್ಧ, ವೈದ್ಯಕೀಯ ಕ್ಷೇತ್ರದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತೋಣ. ಭಾರತವನ್ನು ಸ್ವಚ್ಛವಾಗಿಸೋಣ ಎಂದಿದ್ದಾರೆ ದಿನೇಶ್ ಸಿಂಗ್.
|
ಕೇವಲ ಆಚರಣೆಯಿಂದ ಪ್ರಯೋಜನವಿಲ್ಲ
ಕೇವಲ ಸಾಮಾಜಿಕ ಮಾಧ್ಯಮ ದಿನ ಆಚರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮೊದಲು ಅದನ್ನು ಬಳಸುವುದು ಹೇಗೆ ತ್ತು ಆ ಮೂಲಕ ಉತ್ತಮ, ನಿಖರ ಮಾಹಿತಿ ನೀಡುವುದು ಹೇಗೆ ಎಂಬುದು ಗೊತ್ತಿರಬೇಕು. ಸಮಾಜ ಸುಧಾರಣೆಗೆ ಸಹಕಾರಿಯಾಗುವಂಥದ್ದನ್ನೇ ಶೇರ್ ಮಾಡಿ ಎಂದಿದ್ದಾರೆ ಡ್ಯಾಸಿ ಗಗನ್ದೀಪ್.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications