Snake Bite: ತನ್ನನ್ನು ಕಚ್ಚಿದ ಹಾವಿಗೆ ತಿರುಗಿ ಎರಡು ಬಾರಿ ಕಚ್ಚಿದ ವ್ಯಕ್ತಿ: ಬಳಿಕ ಆಗಿದ್ದೇನು?
ಹಾವನ್ನು ಕಂಡರೆ ಭಯ ಪಡುವವರೇ ಹೆಚ್ಚು. ಎಲ್ಲಾದರೂ ಆಕಸ್ಮಿಕವಾಗಿ ಹಾವು ಕಂಡರೆ ಹೆದರಿ ಓಡುತ್ತಾರೆ. ಇನ್ನು ಹಾವು ಕಚ್ಚಿದರಂತೂ ಮುಗಿದೇ ಹೋಯ್ತು, ಕೆಲವರು ಆ ಭಯದಲ್ಲೇ ಪ್ರಾಣ ಬಿಡುತ್ತಾರೆ. ಆದರೆ ಇಲ್ಲೊಬ್ಬ ಮಾತ್ರ ತನಗೆ ಕಚ್ಚಿದ ಹಾವಿಗೆ ಯಮಲೋಕದ ದಾರಿ ತೋರಿಸಿದ್ದಾರೆ.
ತನಗೆ ಹಾವು ಕಚ್ಚುತ್ತಿದ್ದಂತೆ ವಿಷದ ಪರಿಣಾಮ ಕಡಿಮೆಯಾಗುತ್ತದೆ ಎನ್ನುವ ನಂಬಿಕೆಯಲ್ಲಿ ಹಾವನ್ನೇ ತಿರುಗಿ ಎರಡು ಕಚ್ಚಿರುವ ವಿಚಿತ್ರ ಘಟನೆ ಬಿಹಾರದಲ್ಲಿ ವರದಿಯಾಗಿದೆ.

ವ್ಯಕ್ತಿಯಿಂದ ಎರಡು ಬಾರಿ ಕಚ್ಚಿಸಿಕೊಂಡ ಹಾವು ಸಾವನ್ನಪ್ಪಿದ್ದು, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರಿಂದ ಬದುಕುಳಿದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಅಸಲಿಗೆ ಆಗಿದ್ದೇನು?
ರೈಲ್ವೇ ಉದ್ಯೋಗಿ ಸಂತೋಷ್ ಲೋಹರ್ ಬಿಹಾರದ ರಜೌಲಿಯ ದಟ್ಟ ಅರಣ್ಯ ಪ್ರದೇಶದಲ್ಲಿ ರೈಲು ಹಳಿಗಳನ್ನು ಹಾಕುವ ತಂಡದ ಭಾಗವಾಗಿದ್ದರು. ಮಂಗಳವಾರ ರಾತ್ರಿ, ಪೂರ್ಣ ದಿನದ ಕೆಲಸದ ನಂತರ, ನಿದ್ದೆ ಮಾಡುತ್ತಿರುವಾಗ ಹಾವು ಕಚ್ಚಿತು.
ಲೋಹರ್ ಅವರು ಹಾವನ್ನು ಹಿಡಿದುಕೊಂಡು ಅದನ್ನು ಎರಡು ಬಾರಿ ಕಚ್ಚಿದ್ದಾರೆ. ತನ್ನನ್ನು ಕಚ್ಚಿದ ಹಾವಿಗೆ ಮರಳಿ ಕಚ್ಚಿದರೆ ಜೀವ ಯಉಳಿಯುತ್ತದೆ ಎಂದು ಸ್ಥಳೀಯರು ನಂಬುತ್ತಾರೆ. ದೇಶದ ಕೆಲವು ಭಾಗಗಳಲ್ಲಿ, ಹಾವಿನಿಂದ ಕಚ್ಚಿಸಿಕೊಂಡವರು ಮರಳಿ ಹಾವಿಗೆ ಕಚ್ಚಿದಾಗ ವಿಷವು ಮತ್ತೆ ಹಾವಿಗೆ ವರ್ಗಾವಣೆಯಾಗುತ್ತದೆ ಎಂಬುದು ಸಾಮಾನ್ಯ ನಂಬಿಕೆಯಾಗಿದೆ.
ಅದೃಷ್ಟವಶಾತ್ ಲೋಹರ್ ಅವರ ಜೊತೆ ಸಹೋದ್ಯೋಗಿಗಳು ಇದ್ದ ಕಾರಣ ತಕ್ಷಣ ಅವರನ್ನು ರಾಜೌಲಿ ಉಪವಿಭಾಗದ ಆಸ್ಪತ್ರೆಗೆ ಸಾಗಿಸಿದರು. ಡಾ.ಸತೀಶ್ ಚಂದ್ರ ಸಿನ್ಹಾ ಅವರು ಚಿಕಿತ್ಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ರಾತ್ರಿಯಿಡೀ ಆಸ್ಪತ್ರೆಯಲ್ಲಿ ಇರಿಸಲಾಯಿತು ಮತ್ತು ಮರುದಿನ ಬಿಡುಗಡೆ ಮಾಡಲಾಗಿದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಡಾ.ಸಿನ್ಹಾ ಹೇಳಿದ್ದಾರೆ. ರೈಲ್ವೆ ನೌಕರನ ಮೇಲೆ ಯಾವ ರೀತಿಯ ಹಾವು ದಾಳಿ ಮಾಡಿದೆ ಎಂಬುದು ಸ್ಪಷ್ಟವಾಗಿಲ್ಲ.
ಹಾವು ಕಚ್ಚಿ ಪ್ರತಿ ವರ್ಷ 50 ಸಾವಿರ ಸಾವು
ಭಾರತದಲ್ಲಿ, ಹಾವು ಕಡಿತದಿಂದ ಪ್ರತಿ ವರ್ಷ ಸುಮಾರು 50,000 ಜನರು ಸಾಯುತ್ತಾರೆ. 30-40 ಲಕ್ಷ ಹಾವು ಕಡಿತ ಘಟನೆಗಳು ನಡೆಯುತ್ತವೆ. ಆದರೂ ಎಲ್ಲಾ ಘಟನೆಗಳಲ್ಲಿ ವಿಷದ ಹಾವುಗಳು ಕಚ್ಚದೆ ಇರುವುದರಿಂದ ಸಾವಿನ ಪ್ರಮಾಣ ಕಡಿಮೆ ಇದೆ. ಉತ್ತರ ಭಾರತದ ಹಲವು ಕಡೆಗಳಲ್ಲಿ ಹಾವಿಗೆ ಮರಳಿ ಕಡಿದರೆ ಬದುಕುಳಿಯುತ್ತಾರೆ ಎನ್ನುವ ನಂಬಿಕೆ ಇದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications