ಕೇರಳದಲ್ಲಿ ಮೊದಲ ಪ್ರಯಾಣಕ್ಕೆ ಶಾಕ್: ವಂದೇ ಭಾರತ್ ರೈಲು ಬೋಗಿಯಲ್ಲಿ ಮಳೆ ನೀರು ಸೋರಿಕೆ
ತಿರುವನಂತಪುರಂ ಏಪ್ರಿಲ್ 27: ಕಳೆದ ಮಂಗಳವಾರ ತಿರುವನಂತಪುರದಿಂದ ಕಾಸರಗೋಡಿಗೆ ವಂದೇ ಭಾರತ್ ರೈಲು ಸೇವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಸದ್ಯ ಈ ಹೊಸ ವಂದೇ ಭಾರತ್ ರೈಲಿನ ಕಂಪಾರ್ಟ್ಮೆಂಟ್ಗೆ ಮಳೆ ನೀರು ಸೋರಿಕೆಯಾಗಿರುವುದು ವರದಿಯಾಗಿದೆ. ಈ ಮಾಹಿತಿ ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ.
ತಮಿಳುನಾಡಿನ ಚೆನ್ನೈ-ಮೈಸೂರು ಮತ್ತು ಚೆನ್ನೈ-ಕೊಯಂಬತ್ತೂರು ನಡುವೆ ವಂದೇ ಭಾರತ್ ರೈಲುಗಳು ಓಡಾಡುತ್ತವೆ. ವಂದೇ ಭಾರತ್ ಹಲವಾರು ಸೌಲಭ್ಯಗಳನ್ನು ಹೊಂದಿದೆ. ಹವಾನಿಯಂತ್ರಿತ ಈ ವಂದೇ ಭಾರತ್ ರೈಲು ವಿಮಾನದಂತಹ ಸೌಲಭ್ಯಗಳನ್ನು ಹೊಂದಿದೆ. ವಂದೇ ಭಾರತ್ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಐಷಾರಾಮಿ ಆಸನಗಳು, ಮುಂಬರುವ ರೈಲು ನಿಲ್ದಾಣಗಳ ಪ್ರಕಟಣೆಯಂತಹ ವಿವಿಧ ಸೌಲಭ್ಯಗಳನ್ನು ಹೊಂದಿದೆ.

ವಂದೇ ಭಾರತ್ ರೈಲಿನಲ್ಲಿ ವೈ-ಫೈ, ಜಿಪಿಎಸ್, ಆಡಿಯೋ, ವೀಡಿಯೋ ಮಾಹಿತಿ ಸೌಲಭ್ಯಗಳು, ಬಯೋ-ಶೌಚಾಲಯಗಳಂತಹ ಹಲವು ಆಧುನಿಕ ಸೌಲಭ್ಯಗಳಿವೆ. ಕಳೆದ ಮಂಗಳವಾರ ಕೇರಳದಲ್ಲಿ ಈ ವಂದೇ ಭಾರತ್ ರೈಲು ಸೇವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಈ ರೈಲು ಸಂಚಾರವನ್ನು ತಿರುವನಂತಪುರಂ ಮತ್ತು ಕಾಸರಗೋಡು ನಡುವೆ ಆರಂಭಿಸಲಾಗಿದೆ.
ಇದು ದೇಶದ 15ನೇ ವಂದೇ ಭಾರತ್ ರೈಲು ಆಗಿದೆ. ಕೇರಳದಲ್ಲಿ ಕಾರ್ಯಾಚರಿಸುತ್ತಿರುವ ಮೊದಲ ವಂದೇ ಭಾರತ್ ರೈಲು ಇದಾಗಿರುವುದರಿಂದ ಪ್ರಯಾಣಿಕರಲ್ಲಿ ಭಾರೀ ನಿರೀಕ್ಷೆ ಮೂಡಿದೆ. ಪ್ರಯಾಣಿಕರು ಸ್ಪರ್ಧಾತ್ಮಕವಾಗಿ ಬುಕ್ಕಿಂಗ್ ಮಾಡುವ ಮೂಲಕ ವಂದೇ ಭಾರತ್ ರೈಲಿನಲ್ಲಿ ಉತ್ಸಾಹದಿಂದ ಪ್ರಯಾಣಿಸುತ್ತಿದ್ದಾರೆ. ತಿರುವನಂತಪುರಂ-ಕಾಸರ್ ಮಾರ್ಗದ ನಡುವೆ ಸಂಚರಿಸಿದ ವಂದೇ ಭಾರತ್ ರೈಲಿನಲ್ಲಿ ತನ್ನ ಮೊದಲ ಪ್ರಯಾಣದಲ್ಲಿಯೇ ಮಳೆ ನೀರು ಸೋರಿಕೆಯಾಗಿದ್ದು, ಪ್ರಯಾಣಿಕರಿಗೆ ಶಾಕ್ ನೀಡಿದೆ.

ಮೊದಲ ಪ್ರಯಾಣವನ್ನು ಮುಗಿಸಿದ ನಂತರ ವಂದೇ ಭಾರತ್ ರೈಲನ್ನು ಕಣ್ಣೂರು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಭಾರೀ ಮಳೆಯಿಂದಾಗಿ ಭಾರತ್ ರೈಲಿನ ಒಂದು ಕಂಪಾರ್ಟ್ಮೆಂಟ್ನಲ್ಲಿ ಮಳೆ ನೀರು ಹರಿದಿದೆ. ಬಳಿಕ ರೈಲ್ವೆ ನೌಕರರು ಶೀಘ್ರ ಕಾರ್ಯಪ್ರವೃತ್ತರಾಗಿ ಸಮಸ್ಯೆ ಬಗೆಹರಿಸಿದ್ದಾರೆ. ಎಸಿ ವೆಂಟ್ ಮೂಲಕ ಮಳೆ ನೀರು ಸೋರಿಕೆಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಬೋಗಿಯಲ್ಲಿ ಮಾತ್ರ ಈ ಸಮಸ್ಯೆ ಕಂಡುಬಂದಿದೆ. ಇದರಲ್ಲಿ ಬೇರೆ ರಿಪೇರಿ ಇಲ್ಲ. ಕೂಡಲೇ ಸರಿಪಡಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ವಿಮಾನದಂತೆಯೇ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ವಂದೇ ಭಾರತ್ ರೈಲಿನೊಳಗೆ ಮಳೆ ನೀರು ಸೋರಿಕೆ ಪ್ರಯಾಣಿಕರಲ್ಲಿ ಆಶ್ಚರ್ಯವನ್ನು ಮೂಡಿಸಿದೆ.












Click it and Unblock the Notifications