ರಾಹುಲ್ ಗಾಂಧಿಯನ್ನು ಹೊಗಳಿದ ಬಿಜೆಪಿ ಮಿತ್ರಪಕ್ಷ ಶಿವಸೇನೆ
Recommended Video

ಮಹಾರಾಷ್ಟ್ರ, ಡಿಸೆಂಬರ್ 18: ಬಿಜೆಪಿಗೆ ಬಗಲ ಮುಳ್ಳಾಗಿರುವ ಶಿವಸೇನೆಯು ಬಿಜೆಪಿ ಪರಿಧಿಯಿಂದ ಹೊರ ಹೋಗುವ ಸ್ಪಷ್ಟ ಸೂಚನೆಗಳನ್ನು ಇತ್ತೀಚಿನ ದಿನಗಳಲ್ಲಿ ಕೊಡುತ್ತಲೇ ಬಂದಿದೆ ಅದಕ್ಕೆ ಹೊರ ಸೇರ್ಪಡೆ ಶಿವಸೇನೆಯು ರಾಹುಲ್ ಗಾಂಧಿ ಅವರನ್ನು ಹೊಗಳಿರುವುದು.
ಶಿವಸೇನೆಯು ತನ್ನ ಮುಖವಾಣಿ ಪತ್ರಿಕೆ 'ಸಾಮ್ನಾ'ದಲ್ಲಿ ರಾಹುಲ್ ಗಾಂಧಿ ಅವರನ್ನು ಹೊಗಳಿ ಸಂಪಾದಕೀಯ ಬರೆದಿದ್ದು, 'ಗುಜರಾತ್ ಚುನಾವಣೆಯ ಫಲಿತಾಂಶ ಲೆಕ್ಕಿಸದೇ ರಾಹುಲ್ ಅವರು ಪ್ರಚಾರಕ್ಕೆ ಇಳಿದಿದ್ದರು, ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವನ್ನು ಹೆಗಲಿಗೇರಿಸಿಕೊಂಡಿದ್ದಾರೆ ಅವರಿಗೆ ಶುಭವಾಗಲಿ ಎಂಬ ಭಾವಾರ್ಥವುಳ್ಳ ಲೇಖನ ಪ್ರಕಟಿಸಿದೆ.

ಮಹಾರಾಷ್ಟ್ರದ ಪ್ರಮುಖ ಪ್ರಾದೇಶಿಕ ಪಕ್ಷ ಶಿವಸೇನೆಯು ಮಹಾರಾಷ್ಟ್ರ ಬಿಜೆಪಿ ಸರ್ಕಾರದಲ್ಲಿ ಪಾಲುದಾರಿಕೆ ಹೊಂದಿದೆಯಾದರೂ ಬಿಜೆಪಿ ನಾಯಕತ್ವ ಹಾಗೂ ಆಡಳಿತದ ಬಗ್ಗೆ ಅಸಮಾಧಾನವನ್ನು ಹೊರಹಾಕುತ್ತಲೆ ಬರುತ್ತಿದೆ. ಮಹಾರಾಷ್ಟ್ರದ ಸರ್ಕಾರದ ಜೊತೆಗಿನ ಮೈತ್ರಿ ಮುರಿದುಕೊಳ್ಳುವುದಾಗಿ ಶಿವಸೇನೆಯ ಯುವ ಘಟಕ ಯುವಸೇನೆಯ ರಾಜ್ಯ ಅಧ್ಯಕ್ಷ ಆದಿತ್ಯಾ ಠಾಕ್ರೆ ಅವರು ಇತ್ತೀಚೆಗಷ್ಟೆ ಹೇಳಿದ್ದರು. ಆದರ ಬೆನ್ನಲ್ಲೇ ಈಗ ರಾಹುಲ್ ಗಾಂಧಿ ಅವರನ್ನು ಹೊಗಳಿರುವುದು ನೋಡಿದರೆ ಶಿವಸೇನೆ ಕಾಂಗ್ರೆಸ್ ಸಖ್ಯಕ್ಕೆ ಹೋಗುತ್ತದೆಯೇ ಎಂಬ ಕುತುಹೂಲ ಪ್ರಾರಂಭವಾಗಿದೆ.
ಲೇಖನದಲ್ಲಿ ಬಿಜೆಪಿಯನ್ನು ಟೀಕಿಸಿರುವ ಶಿವಸೇನೆ, 'ಬಿಜೆಪಿ ಗುಜರಾತ್ ಚುನಾವಣೆ ಬಗ್ಗೆ ತೀರ್ವ ಭಯದಲ್ಲಿ ಪ್ರಚಾರ ಮಾಡಿದೆ, ಉತ್ತಮವಲ್ಲದ ತಂತ್ರಗಳನ್ನು ಅದು ಪ್ರಚಾರಕ್ಕೆ ಬಳಸಿದೆ' ಎಂದಿದೆ. ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಬಳಸುವ ಪ್ರಮುಖ ಅಸ್ತ್ರ '60 ವರ್ಷದ ಆಡಳಿತದಲ್ಲಿ ಏನನ್ನೂ ಸಾಧಿಸಿಲ್ಲ' ಎಂಬ ಟೀಕೆಯನ್ನು ಮೂರ್ಖತನದ ಟೀಕೆ ಎಂದು ಕರೆದಿರುವ ಶಿವಸೇನೆ 60 ವರ್ಷದಿಂದ ಏನೂ ಅಭಿವೃದ್ಧಿ ಆಗಿಲ್ಲ ಕಳೆದ ಮೂರು ವರ್ಷದಲ್ಲೇ ಅಭಿವೃದ್ಧಿ ಆಗಿರುವುದು ಎಂದು ಹೇಳುವುದು ಮೂರ್ಖತನದ ಪರಮಾವಧಿ ಎಂದಿದೆ.
ಗುಜರಾತ್ ಚುನಾವಣೆಯಲ್ಲಿ ಗೆಲ್ಲುವಲ್ಲಿ ವಿಫಲವಾದರೂ ಕಳೆದ ಬಾರಿಗಿಂತಲೂ ಉತ್ತಮ ಪ್ರದರ್ಶನ ತೋರುವಲ್ಲಿ ಸಫಲವಾಗಿರುವ ಕಾಂಗ್ರೆಸ್ ಗೆ ಶಿವಸೇನೆಯ ಬೆಂಬಲ ಸಿಕ್ಕುತ್ತಿರುವುದು ಲಾಭಕಾರಕವಾಗಲಿದೆ ಎಂದು ಅಂದಾಜಿಸಬಹುದಾಗಿದೆ.












Click it and Unblock the Notifications