ಶಿರಡಿ ಸಾಯಿಬಾಬಾ ಸಮಾಧಿಸ್ಥರಾಗಿ ನೂರು ವರ್ಷ
ಬೆಂಗಳೂರು, ಜೂನ್ 07 : ಸಂತ, ಫಕೀರ, ಸದ್ಗುರು, ಕಲಿಯುಗದ ಪವಾಡಪುರುಷ, ದೇವರ ಅವತಾರವೆಂದೇ ಖ್ಯಾತಿ ಪಡೆದಿರುವ, ಹಿಂದೂ ಮುಸ್ಲಿಂ ಮತ್ತಾವುದೇ ಜಾತಿಯನ್ನು ಮೀರಿ ಭಕ್ತಗಣವನ್ನು ಪಡೆದಿರುವ ಶಿರಡಿ ಸಾಯಿಬಾಬಾ ಅವರು ಸಮಾಧಿಸ್ಥರಾಗಿ (1918) ಒಂದು ನೂರು ವರುಷ ತುಂಬುತ್ತಿದೆ.
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಶಿರಡಿಯಲ್ಲಿ ಅವರ ಸಮಾಧಿಯಿದ್ದು, ಅವರನ್ನು ದೇವರ ಅವತಾರವೆಂದೇ ಜನ ಪೂಜಿಸುತ್ತಾರೆ, ಭಜಿಸುತ್ತಾರೆ. ದೇಶದ ಮೂರನೇ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಈಗ ಪುಣ್ಯಸ್ಮರಣೆಯ ಶತಮಾನೋತ್ಸವದ ಸಿದ್ಧತೆಗಳು ನಡೆದಿವೆ.
ಕರ್ನಾಟಕದಾದ್ಯಂತ ಶಿರಡಿ ಸಾಯಿಬಾಬಾ ಅವರ ಭಕ್ತರಿದ್ದಾರೆ. ಬೆಂಗಳೂರಿನಲ್ಲಿಯೂ ಪ್ರತಿ ಗುರುವಾರ ಶಿರಡಿ ಸಾಯಿಬಾಬಾ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ನರಸಿಂಹರಾಜ ಕಾಲೋನಿಯಲ್ಲಿ ಪ್ರತಿ ಗುರುವಾರ ಅವರ ಭಕ್ತಾದಿಗಳ ಸೇರಿ, ಸಂಜೆ ರಸ್ತೆರಸ್ತೆಗಳಲ್ಲಿ ರಂಗೋಲಿ ಹಾಕಿ ಮೆರವಣಿಗೆಯನ್ನೂ ಮಾಡಿ ಪುನೀತರಾಗುತ್ತಾರೆ. [ಸಾಯಿಬಾಬಾ ಮೇಲೆ ಕಣ್ಣಿಟ್ಟಿದ್ದ ಅಮೆರಿಕದ ಬೇಹುಗಾರಿಕಾ ಸಂಸ್ಥೆ]

ಅತ್ಯಂತ ಸರಳಾತಿಸರಳ ವ್ಯಕ್ತಿಯಾಗಿದ್ದ ಸಾಯಿಬಾಬಾ ಅವರ ಜೀವನಾಧಾರಿತ ಟಿವಿ ಧಾರಾವಾಹಿಯನ್ನು ನಿರ್ಮಿಸಲು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನಿರ್ಧಾರ ತೆಗೆದುಕೊಂಡಿದೆ. ಆಸಕ್ತ ನಿರ್ಮಾಪಕರು ಸಂಪರ್ಕಿಸಬೇಕೆಂದು ಸಂಸ್ಥಾನದ ಚೇರ್ಮನ್ ಆಗಿರುವ ಡಾ. ಸುರೇಶ್ ಹವಾರೆ ಅವರು ಕರೆ ನೀಡಿದ್ದಾರೆ.
2017ರ ಅಕ್ಟೋಬರ್ 1ರಿಂದ 18ನೇ ತಾರೀಖಿನವರೆಗೆ ಶಿರಡಿ ಸಾಯಿಬಾಬಾ ಸಮಾಧಿ ಶತಮಾನೋತ್ಸವವನ್ನು ಆಚರಿಸಲಾಗುವುದು ಎಂದು ಸುರೇಶ್ ಹವಾರೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಭಕ್ತಾದಿಗಳು ಸಾಯಿಬಾಬಾ ಅವರ ಜೀವನವನ್ನು ಅರಿತುಕೊಳ್ಳಬೇಕು, ಅವರ ಜೀವನಕಥೆ ವಿಶ್ವದಾದ್ಯಂತ ಪಸರಿಸಬೇಕು ಎಂಬ ಉದ್ದೇಶ ಅವರದು. [ದೇವೇಗೌಡರ ಜೀವನದಲ್ಲಿ ನಡೆದ ಅತಿದೊಡ್ಡ ಪವಾಡ!]
ಈ ಧಾರಾವಾಹಿ ಹಲವಾರು ಭಾಷೆಗಳಲ್ಲಿ ತಯಾರಾಗಲಿದೆ ಎಂದು ಸುರೇಶ್ ಹವಾರೆ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ಹಿಂದೆ ಸಾಯಿಬಾಬಾ ಕುರಿತಾಗಿ ಧಾರಾವಾಹಿ ನಿರ್ಮಿಸಿರುವವರು ಅಥವಾ ಹೊಸದಾಗಿ ನಿರ್ಮಿಸಲು ಉತ್ಸುಕರಾಗಿರುವವರು ಸಂಪರ್ಕಿಸಬೇಕೆಂದು ಕೋರಿದ್ದಾರೆ. ಈ ಧಾರಾವಾಹಿ ಕನ್ನಡದಲ್ಲಿಯೂ ನಿರ್ಮಾಣವಾಗಲೆಂಬುದು ಕನ್ನಡಿಗರ ಆಶಯ. [ಪವಾಡದ ಅನುಭೂತಿ : ಸಾಯಿಬಾಬಾ ಪಾದದ ಬಳಿ ವಿಭೂತಿ!]
-
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications