ದೇವೇಗೌಡರ ಜೀವನದಲ್ಲಿ ನಡೆದ ಅತಿದೊಡ್ಡ ಪವಾಡ!

1996ರಲ್ಲಿ ಬೆಂಗಳೂರಿನಲ್ಲೊಂದು ಸಮಾವೇಶ ನಡೆಯಿತು. ಆ ಸಮಾವೇಶಕ್ಕೆ ಎಲ್ಲ ಮಠಾಧೀಶರು ಜೊತೆಗೆ ಅಂದಿನ ಮುಖ್ಯಮಂತ್ರಿ ಎಚ್ ಡಿ ದೇವೇಗೌಡರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆಗ ಬಾಬಾ ಅವರು ಕನ್ನಡದಲ್ಲಿ ಭಾಷಣ ಮಾಡಿದರು. ಭಾಷಣದ ನಡುವೆ ಅವರು ವೇದಿಕೆ ಮೇಲೆ ಆಸೀನರಾದವರ ಹೆಸರುಗಳನ್ನು ಹೇಳುತ್ತಾ "ಪ್ರಧಾನಿ ದೇವೇಗೌಡ" ಎಂದು ಸಂಭೋದಿಸಿದರು.
ಗ್ಯಾಲರಿ : ಸಾಯಿಬಾಬಾಗೆ ಅಂತಿಮ ಪ್ರಣಾಮ ಸಲ್ಲಿಸಿದ ದೇವೇಗೌಡ
ಸಮಾವೇಶದಲ್ಲಿದ್ದ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಬಾಬಾ ಅವರು ಹೇಳಿದ್ದು ಅಲ್ಲಿದ್ದವರಿಗೆ ಅರ್ಥವಾಗಿದ್ದೇ ಏಳು ತಿಂಗಳ ಬಳಿಕ. ಅಂದರೆ ಬಾಬಾ ಆ ರೀತಿ ಹೇಳಿದ ಏಳು ತಿಂಗಳಲ್ಲೇ ದೇವೇಗೌಡರು ಪ್ರಧಾನಿಯಾಗಿದ್ದರು! ಈ ಘಟನೆಯನ್ನು ಈಗಲೂ ಜನತಾದಳ ಕಾರ್ಯಕರ್ತರು ನೆನಪಿಸಿಕೊಂಡು ಅಚ್ಚರಿಪಡುತ್ತಿರುತ್ತಾರೆ.
;










Click it and Unblock the Notifications