ಭಾರತೀಯ ಸೇನೆಯ ಆರು ವೀರಯೋಧರಿಗೆ ಶೌರ್ಯ ಪ್ರಶಸ್ತಿ
ನವದೆಹಲಿ, ಜನವರಿ 26: ಭಾರತದ 73ನೇ ಗಣರಾಜ್ಯೋತ್ಸವದ ಮುನ್ನಾದಿನ ಒಲಿಂಪಿಕ್ ಚಿನ್ನದ ಪದಕ ವಿಜೇತ ಸುಬೇದಾರ್ ನೀರಜ್ ಚೋಪ್ರಾ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ (PVSM) ನೀಡುವುದಾಗಿ ಘೋಷಿಸಲಾಗಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆಯ್ಕೆಯಾದ ಆರು ಸೇನಾ ಸಿಬ್ಬಂದಿ ಪೈಕಿ ಐವರು ಯೋಧರಿಗೆ ಮರಣೋತ್ತರ ಶೌರ್ಯ ಚಕ್ರವನ್ನು ಪ್ರಶಸ್ತಿ ಪ್ರದಾನ ಮಾಡಿದರು. ಇದು ಮೂರನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ.
"73 ನೇ ಗಣರಾಜ್ಯೋತ್ಸವದ ಮುನ್ನಾದಿನ ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಇತರರಿಗೆ 384 ಶೌರ್ಯ ಮತ್ತು ಇತರ ಡಿಫೆನ್ಸ್ ಡೆಕಾರೇಷನ್ ಪ್ರಶಸ್ತಿ ಅನ್ನು ರಾಷ್ಟ್ರಪತಿ ಅನುಮೋದಿಸಿದ್ದರು. ಬುಧವಾರ ದೇಶದ ಸೇನಾಯೋಧರಿಗೆ ಎಷ್ಟು ಪದಕಗಳನ್ನು ನೀಡಿ ಗೌರವಿಸಲಾಯಿತು ಎಂಬುದರ ಕುರಿತು ಮಾಹಿತಿ ಇಲ್ಲಿದೆ ಓದಿ.

ಗಣರಾಜ್ಯೋತ್ಸವದ ದಿನ ಎಷ್ಟು ಪ್ರಶಸ್ತಿ ಮತ್ತು ಪದಕ ಪ್ರದಾನ?:
- 12 ಶೌರ್ಯ ಚಕ್ರ ಪ್ರಶಸ್ತಿ
- 29 ಪಿವಿಎಸ್ಎಂ
- 4 ಉತ್ತಮ ಯುದ್ಧ ಸೇವಾ ಪದಕ
- 53 ಅತಿ ವಿಶಿಷ್ಟ ಸೇವಾ ಪದಕಗಳು
- 13 ಯುದ್ಧ ಸೇವಾ ಪದಕಗಳು
- 125 ವಿಶಿಷ್ಟ ಸೇವಾ ಪದಕಗಳು
- 84 ಸೇನಾ ಪದಕಗಳು (ಶೌರ್ಯ)
- 2 ವಾಯು ಸೇನಾ ಪದಕಗಳು (ಶೌರ್ಯ)
- 40 ಸೇನಾ ಪದಕಗಳು (ಕರ್ತವ್ಯಕ್ಕೆ ಭಕ್ತಿ)
- 8 ನಾವೋ ಸೇನಾ ಪದಕಗಳು (ಕರ್ತವ್ಯಕ್ಕೆ ಭಕ್ತಿ)
- 14 ವಾಯು ಸೇನಾ ಪದಕಗಳು (ಕರ್ತವ್ಯಕ್ಕೆ ಭಕ್ತಿ)
ಶೌರ್ಯ ಪ್ರಶಸ್ತಿ ಪಡೆದ ದೇಶದ ಆರು ವೀರಯೋಧರು:
ಭಾರತದಲ್ಲಿ ಶೌರ್ಯ ಮತ್ತು ಸಾಹಸಕ್ಕೆ ಹೆಸರಾದ ವೀರ ಯೋಧರಿಗೆ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. 73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆರು ಯೋಧರಿಗೆ ಶೌರ್ಯ ಪ್ರಶಸ್ತಿ ನೀಡಲಾಗಿದ್ದು, ಈ ಪೈಕಿ ಐವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿ ಪಡೆದುಕೊಂಡವರ ಕುರಿತು ಮಾಹಿತಿಗಾಗಿ ಮುಂದೆ ಓದಿ.
1. ನಾಯಬ್ ಸುಬೇದಾರ್ ಎಂ. ಶ್ರೀಜಿತ್ ( ಮರಣೋತ್ತರವಾಗಿ ಶೌರ್ಯ ಚಕ್ರ )
2. 17 ಮದ್ರಾಸ್ ರೆಜಿಮೆಂಟ್ನಿಂದ ಸಿಪಾಯಿ ಮರುಪ್ರೋಲು ಜಸ್ವಂತ್ ಕುಮಾರ್ ರೆಡ್ಡಿ ( ಮರಣೋತ್ತರವಾಗಿ ಶೌರ್ಯ ಚಕ್ರ )
3. ರಜಪೂತ ರೆಜಿಮೆಂಟ್ನಿಂದ ಹವಾಲ್ದಾರ್ ಅನಿಲ್ ಕುಮಾರ್ ತೋಮರ್ ( ಮರಣೋತ್ತರವಾಗಿ ಶೌರ್ಯ ಚಕ್ರ )
4. ಕಾರ್ಪ್ಸ್ ಆಫ್ ಇಂಜಿನಿಯರ್ಸ್ನಿಂದ ಹವಾಲ್ದಾರ್ ಕಾಶಿರಾಯ ಬಮ್ಮನಹಳ್ಳಿ ( ಮರಣೋತ್ತರವಾಗಿ ಶೌರ್ಯ ಚಕ್ರ )
5. ಜಾಟ್ ರೆಜಿಮೆಂಟ್ನ ಹವಾಲ್ದಾರ್ ಪಿಂಕು ಕುಮಾರ್ ( ಮರಣೋತ್ತರವಾಗಿ ಶೌರ್ಯ ಚಕ್ರ )
6. 5 ಅಸ್ಸಾಂ ರೈಫಲ್ಸ್ ನ ರೈಫಲ್ಮ್ಯಾನ್ ರಾಕೇಶ್ ಶರ್ಮಾ ( ಶೌರ್ಯ ಚಕ್ರ )
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications