ವಿದ್ಯಾರ್ಥಿನಿ ನೀಡಿದ ಗೂಸಾಕ್ಕೆ ಬೆಚ್ಚಿ ಬಿದ್ದ ಬೀದಿ ಕಾಮಣ್ಣ
ನವದೆಹಲಿ, ಜು. 07: ಹುಡುಗಿಯರನ್ನು ಕಿಚಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸರಿಯಾಗೇ ಮಾಂಜಾ ಬಿದ್ದಿದೆ. ಇಲ್ಲಿ ಧರ್ಮದೇಟು ಕೊಟ್ಟವರು ಪೊಲೀಸರಲ್ಲ ಅಥವಾ ಜನರೂ ಅಲ್ಲ.
ತನ್ನನ್ನು ಪೀಡಿಸುತ್ತಿದ್ದ ಕಾಮಣ್ಣನ್ನು ಪೊಲೀಸ್ ಸ್ಟೇಶನ್ ಗೆ ಕರೆದುಕೊಂಡು ಹೋಗಿ ಇನ್ನು ಹುಡುಗಿಯರ ಕಡೆ ತಲೆ ಹಾಕಿ ಮಲಗದಂತೆ ಏಟು ಕೊಟ್ಟವಳು 11ನೇ ತರಗತಿ ವಿದ್ಯಾರ್ಥಿನಿ ಸಂಜನಾ. ಇಂಥ ಪ್ರಕರಣಕ್ಕೆ ಉತ್ತರ ಪ್ರದೇಶದ ಪಿಲಿಭಿಟ್ ಜಿಲ್ಲೆ ಮಂಗಳವಾರ ಸಾಕ್ಷಿಯಾಯಿತು.[ಬೀದಿಕಾಮಣ್ಣ; ನಿನ್ನ ಕೈಗೆ ಬೇಡಿ ಬೀಳಬಹುದಣ್ಣ!]

ಮೊದಲ ಪಿಯುಸಿ ಓದುತ್ತಿರುವ ಸಂಜನಾ ಬೀದಿ ಕಾಮಣ್ಣನಿಗೆ ಕೊಟ್ಟಿರುವ ಏಟುಗಳು ಅಂತಿಂಥವಲ್ಲ. ಸಾಕ್ಷಾತ್ ಪೊಲೀಸರ ಏದುರೇ ಕಪಾಳಕ್ಕೆ ಎರಡೂ ಕೈಗಳಿಂದ ಬಿಗಿದಿದ್ದಾಳೆ, ಕಾಲಿನಿಂದ ಝಾಡಿಸಿದ್ದಾಳೆ. ತನ್ನ ಪಾದರಕ್ಷೆಯನ್ನು ಕೈಗೆ ತೆಗೆದುಕೊಂಡು ಹೊಡೆಯಲು ಆರಂಭಿಸಿದವಳು ಸಿಟ್ಟು ತಣ್ಣಗಾಗುವವರೆಗೂ ನಿಲ್ಲಿಸಿಲ್ಲ.
ವಿದ್ಯಾರ್ಥಿನಿ ನೀಡುತ್ತಿದ್ದ ಏಟುಗಳಿಂದ ತತ್ತರಿಸಿದ ಹುಡುಗ ಸಾರಿ ಸಾರಿ ಎಂದು ಬಡಬಡಿಸಿಕೊಂಡಿದ್ದಾನೆ. ನಂತರ ಆಕೆಯ ಕಾಲಿಗೂ ಬಿದ್ದು ಕ್ಷಮಾಪಣೆ ಕೇಳಿದ್ದಾನೆ.
ಅಂಕಿತ್ ಎಂಬ ಬೀದಿ ಕಾಮಣ್ಣ ದಾರಿಯಲ್ಲಿ ಹೋಗಿ ಬರೋ ಹುಡುಗಿಯರನ್ನು ಚುಡಾಯಿಸುತ್ತಿದ್ದ. ಸಂಜನಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು. ನಂತರ ತನ್ನ ಆಟ ಮುಂದುವರಿಸಿದ ಅಂಕಿತ್ ಸಂಜಳಾಳ ಬೆನ್ನು ಬಿದ್ದ. ಇದನ್ನು ಮನಗಂಡ ಆಕೆ ಆತನನ್ನು ಠಾಣೆಗೆ ಕರೆಸಿದ್ದಾಳೆ. ಪೊಲೀಸರ ಎದುರೇ ತನ್ನ ಸಿಟ್ಟನ್ನು ಹೊರಹಾಕಿದ್ದು ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಹುಡುಗಿಯ ಹೊಡೆತಕ್ಕೆ ಸಿಕ್ಕ ಬೀದಿ ಕಾಮಣ್ಣ ಇನ್ನು ಮುಂದೆ ತಲೆ ಎತ್ತಿ ತಿರುಗಾಡುವುದು ಅನುಮಾನವೇ!
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications