ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸೇರಿದಂತೆ ವಿಧವೆಯರ ರಕ್ಷಣೆಗೆ ವಿಫಲವಾದ ರಾಜ್ಯಗಳ ಮೇಲೆ ಸುಪ್ರೀಂ ದಂಡ

By Prasad
|
Google Oneindia Kannada News

ನವದೆಹಲಿ, ಡಿಸೆಂಬರ್ 06 : ಪರಿತ್ಯಜಿತರಾದ ವಿಧವೆಯರ ಕಲ್ಯಾಣ ಮತ್ತು ಅವರ ಪುನರ್ವಸತಿಗಾಗಿ ಸೂಕ್ತ ಕ್ರಮ ತೆಗೆದುಕೊಂಡಿಲ್ಲವೆಂದು, ಕರ್ನಾಟಕವೂ ಸೇರಿದಂತೆ ಹಲವಾರು ರಾಜ್ಯಗಳ ಮೇಲೆ ಸರ್ವೋಚ್ಚ ನ್ಯಾಯಾಲಯ 2 ಲಕ್ಷ ರುಪಾಯಿ ದಂಡ ವಿಧಿಸಿದೆ.

ಮೃತ ಯೋಧನ ಪತ್ನಿಗೆ 58 ವರ್ಷಗಳ ನಂತರ ಬಂತು ಪಿಂಚಣಿ!!!ಮೃತ ಯೋಧನ ಪತ್ನಿಗೆ 58 ವರ್ಷಗಳ ನಂತರ ಬಂತು ಪಿಂಚಣಿ!!!

ಉತ್ತರಾಖಂಡ್, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ಮಿಜೋರಾಂ, ಆಸ್ಸಾಂ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ತಮಿಳುನಾಡು, ಅರುಣಾಚಲ ಪ್ರದೇಶಗಳ ಮೇಲೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ.

SC imposes fine on Karnataka other states for not taking care of widows

ಸರಕಾರ ಮುಸ್ಲಿಂ ಮಹಿಳೆಯರ ರಕ್ಷಣೆಗೆಂದು ತ್ರಿವಳಿ ತಲಾಖ್ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ, ಆದರೆ ವಿಧವೆಯರ ಕಲ್ಯಾಣಕ್ಕಾಗಿ ಯಾವುದೇ ಕ್ರಮ ತೆಗೆದುಕೊಳ್ಳಲು ಕೇಂದ್ರ ವಿಫಲವಾಗಿದೆ ಎಂದು ಸೈಯದ್ ಎಂಬುವವರು ಟ್ವಿಟ್ಟರ್ ನಲ್ಲಿ ಟೀಕಿಸಿದ್ದಾರೆ.

ವಿಧವೆಯರಿಗೆ ಮಾತ್ರವಲ್ಲ ದುಃಸ್ಥಿತಿಯಲ್ಲಿರುವ, ತಿರಸ್ಕಾರಕ್ಕೊಳಗಾಗಿರುವ, ಪರಿತ್ಯಕ್ತವಾಗಿರುವ ಒಂಟಿ ಮಹಿಳೆಯರಿಗೂ ರಕ್ಷಣೆ ನೀಡುವುದು, ಅವರಿಗೆ ಹಣಕಾಸು ಸಹಾಯವನ್ನು ಒದಗಿಸುವ, ಪಿಂಚಣಿ ಮತ್ತು ಆರೋಗ್ಯ ಸೇವೆ ದೊರಕಿಸುವ ಕರ್ತವ್ಯ ಸರಕಾರದ್ದಾಗಿದೆ. ಇದನ್ನು ಕರ್ನಾಟಕವೂ ಸೇರಿದಂತೆ ಒಂಬತ್ತು ರಾಜ್ಯಗಳು ಮಾಡುತ್ತಿಲ್ಲವೆಂಬುದು ಸರ್ವೋಚ್ಚ ನ್ಯಾಯಾಲಯದ ಆರೋಪ.

English summary
Supreme Court imposed fine of Rs 2 lakh on Uttarakhand, Madhya Pradesh, Karnataka, Gujarat, Mizoram, Assam, Himachal Pradesh, J&K, Punjab, Tamil Nadu, Arunachal Pradesh for not taking enough steps for welfare and rehabilitation of abandoned widows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X