Savarkar Movie: ಸಾವರ್ಕರ್ ಸಿದ್ದಾಂತದ ವಿರುದ್ಧ ನಿಂತಿದ್ದ ನೇತಾಜಿ: ಸತ್ಯಸಂಗತಿ ತಿರುಚಿದ ರಣದೀಪ್ ಹೂಡಾ- ಹಾಗಾದರೇ ಸತ್ಯವೇನು
ಬೆಂಗಳೂರು, ಜೂನ್ 01: ಸ್ವತಂತ್ರ ವೀರ್ ಸಾವರ್ಕರ್ ಚಿತ್ರವು ಭಾರೀ ವಿವಾದಕ್ಕೆ ಗ್ರಾಸವಾಗಿದೆ. ವಿನಾಯಕ್ ದಾಮೋದರ್ ಸಾವರ್ಕರ್ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ರಣದೀಪ್ ಹೂಡಾ ಅವರು ಈ ಚಿತ್ರವನ್ನು ನಿರ್ಧೇಶನ ಮಾಡಿದ್ದಾರೆ. ಸ್ವತಂತ್ರ ಸೇನಾನಿಗಳಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಖುದಿರಾಮ್ ಬೋಸ್ ಅವರಂತಹ ಕ್ರಾಂತಿಕಾರಿಗಳಿಗೆ ಸಾವರ್ಕರ್ ಸ್ಫೂರ್ತಿ ಎಂದು ಟ್ವೀಟ್ ಮಾಡಿದ್ದಾರೆ. ಇದು ದೇಶದಾದ್ಯಂತ ಭಾರೀ ವಿವಾದವನ್ನು ಸೃಷ್ಟಿಸಿದೆ.
ಸಾವರ್ಕರ್ ಬಯೋಪಿಕ್ನ ಟೀಸರ್ನಲ್ಲಿ ಇದನ್ನು ಕಾಣಬಹುದಾಗಿದೆ. ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಸಾವರ್ಕರ್ ಸ್ಪೂರ್ತಿಯಾಗಿದ್ದರು ಎಂದು ಹೇಳಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬೋಸ್ ಅವರ ಕುಟುಂಬ ಸದಸ್ಯರು ಸಾವರ್ಕರ್ ಬಯೋಪಿಕ್ ಅನ್ನು ತಿರುಚಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರೇರೇಪಿಸುವಲ್ಲಿ ಸಾವರ್ಕರ್ ಪಾತ್ರವನ್ನು ವಹಿಸಿರಲಿಲ್ಲ. ಈ ತರಹದ ಹೇಳಿಕೆಗಳನ್ನು ನಾವು ನಿರಾಕರಿಸಿವುದಾಗಿ ಕುಟಂಬ ಸದಸ್ಯರು ಹೇಳಿದ್ದಾರೆ.

ನೇತಾಜಿ ಅವರ ಪುತ್ರಿ ಅನಿತಾ ಬೋಸ್ ಅವರು ತಮ್ಮ ತಂದೆ ಮತ್ತು ಸಾವರ್ಕರ್ ನಡುವಿನ ಏಕೈಕ ಸಾಮಾನ್ಯ ಸಂಗತಿ ಎಂದರೆ ಅವರು ಪ್ರತಿನಿಧಿಸುವ ಧರ್ಮ ಎಂದು ಹೇಳಿದ್ದಾರೆ. ಮಹಾತ್ಮ ಗಾಂಧೀಜಿ ರೀತಿಯಲ್ಲೇ ಧರ್ಮಗಳ ಆಧಾರದ ಮೇಲೆ ರಾಷ್ಟ್ರ ವಿಭಜನೆಯ ವಿರುದ್ಧ ನಿಂತಿದ್ದರು. ಅದು ಬಿಟ್ಟರೆ ನೇತಾಜೀ ಹಾಗೂ ಸಾವರ್ಕರ್ ಅವರಿಗೆ ಸಂಬಂಧವೇ ಇಲ್ಲ. ವಿಚಾರಗಳನ್ನು ತಿರುಚುವ ಬದಲು ನೇತಾಜಿ ಅವರ ಭಾರತದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
'ಮಹಾತ್ಮ ಗಾಂಧಿಯವರಂತೆ, ನೇತಾಜಿಯವರು ಧಾರ್ಮಿಕ ಭಿನ್ನಾಭಿಪ್ರಾಯಗಳ ಆಧಾರದ ಮೇಲೆ ವಿಭಜನೆಯನ್ನು ವಿರೋಧಿಸಿದರು. ಸಾರ್ವರ್ಕರ್ ಅವರ ಅನುಯಾಯಿಗಳು ಇದನ್ನು ಅರ್ಥ ಮಾಡಿಕೊಳ್ಳಲಿ. ನೇತಾಜಿಯವರ ಭಾರತದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲಿ. ಅವರನ್ನು ಹೈಜಾಕ್ ಮಾಡಬಾರದು' ಎಂದು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಗೆ ಅನಿತಾ ಬೋಸ್ ತಿಳಿಸಿದ್ದಾರೆ.

ಜಾತ್ಯತೀತ ಮತ್ತು ಅಖಂಡ ಭಾರತಕ್ಕಾಗಿ ನೇತಾಜಿ ಹಾಗೂ ಭಗತ್ ಸಿಂಗ್ ಹೋರಾಡಿದರು. ಅವರ ಸಿದ್ಧಾಂತಕ್ಕಿಂತ ಸಾವರ್ಕರ್ ಅವರ ಸಿದ್ಧಾಂತವು ಮೂಲಭೂತವಾಗಿ ಭಿನ್ನವಾಗಿದೆ ಎಂದು ನೇತಾಜಿಯವರ ಮೊಮ್ಮಗ ಚಂದ್ರ ಬೋಸ್ ಹೇಳಿದ್ದಾರೆ. ಸಾವರ್ಕರ್ ಅವರ ವಿಚಾರಗಳು ಮತ್ತು ಹಿಂದೂ ಮಹಾಸಭಾದೊಂದಿಗಿನ ಅವರ ಸಂಬಂಧದ ಬಗ್ಗೆ ನೇತಾಜಿ ವಿರೋಧ ವ್ಯಕ್ತಪಡಿಸಿದ ಅನೇಕ ನಿದರ್ಶನಗಳನ್ನು ಅವರು ತಿಳಿಸಿದ್ದಾರೆ.
ಮುಂಬರುವ ಬಯೋಪಿಕ್ ಅನ್ನು ಉದ್ದೇಶಿಸಿ ಮಾತನಾಡಿದ ಚಂದ್ರ ಬೋಸ್, ರಣದೀಪ್ ಹೂಡಾ ಅವರು ಸಾವರ್ಕರ್ ಅವರ ಮೇಲೆ ಚಲನಚಿತ್ರವನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ, ಆದರೆ, ಅದು ಸಾವರ್ಕರ್ ಅವರ ವ್ಯಕ್ತಿತ್ವವನ್ನು ನಿಖರವಾಗಿ ಚಿತ್ರಿಸಬೇಕು ಎಂದು ತಿಳಿಸಿದ್ದಾರೆ. ಸಾವರ್ಕರ್ ಅವರನ್ನು ಕೇಂದ್ರೀಕರಿಸಿದ ಸಿನಿಮಾದಲ್ಲಿ ನೇತಾಜಿ, ಭಗತ್ ಸಿಂಗ್ ಮತ್ತು ಖುದಿರಾಮ್ ಬೋಸ್ ಅವರನ್ನು ಸೇರಿಸುವ ಅಗತ್ಯವಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

'ನೇತಾಜಿ ಹಿಂದೂ ಮಹಾಸಭಾದ ವಿರುದ್ಧವಾಗಿದ್ದರು. ಅವರು ಹೆಚ್ಚು ಒಳಗೊಳ್ಳುವಿಕೆಯ ಮತ್ತು ಜಾತ್ಯತೀತ ಸಿದ್ಧಾಂತವನ್ನು ಹೊಂದಿದ್ದರು. ಚಿತ್ರವು ತಿರುಚಿದ ಸಂಗತಿಗಳನ್ನು ಪ್ರಸ್ತುತಪಡಿಸಿದರೆ, ದೇಶದ 140 ಕೋಟಿ ಜನರು ಅವರ (ಹೂಡಾ) ವಿರುದ್ಧ ಹೋರಾಡುತ್ತಾರೆ' ಎಂದು ಬೋಸ್ ಹೇಳಿದ್ದಾರೆ.
ಖುದಿರಾಮ್ ಬೋಸ್ ಅವರ ಮೊಮ್ಮಗ ಸುಬ್ರತಾ ರಾಯ್ ಅವರು ಸಾವರ್ಕರ್ನಲ್ಲಿ ಖುದಿರಾಮ್ ಬೋಸ್ ಸ್ಫೂರ್ತಿಯನ್ನು ಕಂಡುಕೊಂಡಿದ್ದಾರೆ ಎಂದು ಸೂಚಿಸುವ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೇಮಚಂದ್ರ ಕನುಂಗೋ, ಸತ್ಯೇನ್ ಬೋಸ್ ಮತ್ತು ಅರಬಿಂದ ಘೋಷ್ ಅವರಂತಹ ವ್ಯಕ್ತಿಗಳಿಂದ ಖುದಿರಾಮ್ ಬೋಸ್ ಪ್ರಭಾವಿತರಾಗಿದ್ದರು ಎಂದು ರಾಯ್ ಹೇಳಿದ್ದಾರೆ.
ಮಹಾತ್ಮಾ ಗಾಂಧಿಯವರ ಅಹಿಂಸೆಯ ಅಚಲವಾದ ಬದ್ಧತೆಯ ಪರಿಣಾಮವಾಗಿ ಭಾರತದ ಸ್ವಾತಂತ್ರ್ಯವು 35 ವರ್ಷಗಳಷ್ಟು ವಿಳಂಬವಾಯಿತು ಎಂದು ಸೂಚಿಸುವ ಮೂಲಕ ಬಯೋಪಿಕ್ನ ಟೀಸರ್ ವಿವಾದವನ್ನು ಹುಟ್ಟುಹಾಕಿದೆ.
-
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ












Click it and Unblock the Notifications